Skip to main content

ನೋಡಿ ಸ್ವಾಮೀ ನಾವಿರೋದೇ ಹೀಗೆ

========================================

ನೋಡೀ... ಸ್ವಾಮೀ.... ನಾವಿರೋದೆ ಹೀಗೆ

========================================



ನಾನು ಯಾರು ? ಹೇಗೆ ? ಯಾಕೆ ?? ನೂರು ಪ್ರಶ್ನೆ ಎಸೆದೆ

ಬಂದ ಉತ್ತರಗಳ ಕೂಡಿ ಕವನವೊಂದ ಹೊಸೆದೆ|

ಬರೆಯುತಿರುವೆ ಈ ಕವನದಿ ನಾನು ನನ್ನ ಬಗ್ಗೆ

ನೋಡೀ... ಸ್ವಾಮೀ.... ನಾವಿರೋದೆ ಹೀಗೆ||



ಎಂಜಿನಿಯರಿಂಗ್ ಓದಿ ಟೀಸಿಯೆಸ್ಸಿನಲ್ಲಿ ದುಡಿಮೆ

ಕೃಷ್ಣವರ್ಣ ತಲೆಯ ಮೇಲೆ ಕೂದ್ಲು ಸ್ವಲ್ಪ ಕಡಿಮೆ

ಕುಂದಾಪುರದವನು ಇರುವೆ ಬೆಂಗಳೂರಿನಾಗೆ

ಹೋಯ್ ಮಾರಾಯ್ರೆ... ನಾವಿಪ್ಪುದೇ ಹೀಂಗೆ!!



ಇಹುದು ನನಗೆ ಕವಿತೆ ಕವನ ಬರೆಯುವಂತ ಹುಚ್ಚು

ಮೌನ ಕೂಡಿ ಬರದು ನನಗೆ ಮಾತು ಸ್ವಲ್ಪ ಹೆಚ್ಚು

ಮನದ ಮಾತ ಹಾಕಿ ಬಿಡುವೆ ಪೇಪರಲ್ಲಿ ಗೀಚಿ

ಪಳೆಯಾಚಿ ಮಾಮ್ಮಾ... ಹಾವೆ ಆಸುಚೆ ಅಶೀಚಿ



ಇಡ್ಲಿ ಚಟ್ನಿ ದೋಸೆಯಂತು ನನ್ನ ಫೇವರಿಟ್ಟು

ಊರು ಬಿಟ್ಟು ಓಡಿ ಬಿಡುವೆ ಕಂಡರೆ ಉಪ್ಪಿಟ್ಟು

ಬ್ರೆಡ್ಡು ಬನ್ನು ಆಗೋದಿಲ್ಲ ಇಷ್ಟ ಪೂರಿ - ಬಾಜಿ

देखिये... मै ऐसाहि हू माजि.....॥



ಬೇಳೆ ಸಾರು ಹಪ್ಪಳವಿರೆ ಅದುವೇ ಮೃಷ್ಟಾನ್ನ

ಉಪ್ಪಿನಕಾಯ್ ಮಜ್ಜಿಗೆಯಿರಲೂಟವೆಷ್ಟು ಚೆನ್ನ!

ಆಲೂಗಡ್ಡೆ ಪರಮಮಿತ್ರ ಇಷ್ಟ ಬಸಳೆ ನುಗ್ಗೆ

ನೋಡೀ... ಸ್ವಾಮೀ.... ನಾವಿರೋದೆ ಹೀಗೆ



ಚಾಕಲೇಟು ಬರ್ಫಿ ನೋಡೆ ಇರುವೆಯಾಗಿ ಬಿಡುವೆ

ಜಾಮೂನನು ತಂದವರಿಗೆ ಒಲಿದು ವರವ ಕೊಡುವೆ

ಹಣ್ಣಿನಲ್ಲಿ ಇಷ್ಟವೆನಗೆ ಮಾವು ಮೋಸಂಬಿ

ಪಾರಂಙ್ ಪಾ ನಾನ್ ಇಪ್ಪಡಿತಾನ್ ತಂಬಿ



ಪಿಜ್ಝಾ ಕೋಕು ಬೇಡವೆನಗೆ ಸಾಕು ನಿಂಬೆ ಜ್ಯೂಸು

ಮಿತವ್ಯಯಿ ಸ್ವಾಮಿ ನಾನು ಅಲ್ಲಾ ರೀ  ಕಂಜೂಸು

ಕಾಫಿಯಲ್ಲಿ ಇರೋ ಸುಖವು ಗೊತ್ತಿದೆಯೇ ನಿಮಗೆ ??

ನೋಡೀ... ಸ್ವಾಮೀ.... ನಾವಿರೋದೆ ಹೀಗೆ



ಮದುವೆಯಾಗಲಿಲ್ಲ ನನಗೆ ಇನ್ನೂ ಬ್ರಹ್ಮಚಾರಿ

ದುಶ್ಚಟಗಳಿಗೆ ಹೇಳಿರುವೆನು I AM VERY SORRY!

ಬಹುದಿನಗಳ ಆಸೆ ಕಲಿಯಬೇಕೆಂದು ತಬಲಾ

ಚೂಡನ್ನಯ್ಯಾ.... ಮೇವುನ್ನದೇ ಇಲಾ .....


ಹಸ್ತಾ ನಕ್ಷತ್ರವೆನದು ಇರುವೆನು ನಗುನಗುತ

ನಾನಿರಲು ತಪ್ಪದೆಂದು ನಿಮ್ಮಯ ಕಾಲೆಳೆತ

ಸದಾ ಕಾಲ ಮಾಡುತಿರುವೆ ಗೆಳೆಯರನ್ನು ಗೇಲಿ

LOOK BOSS!!!.... I AM LIKE THIS ONLY!!


ಅಪ್ಪ ಅಮ್ಮ ಅಕ್ಕ ಅಣ್ಣ ನಾನೇ ಕೊನೆಯ ಪುತ್ರ

ತುಂಟಾಟಿಕೆ ಲೂಟಿಗೆಲ್ಲ ಪ್ರೀತಿಯೇ ಇವರುತ್ರ

ಇವರೇ ದೇವರೆನಗೆ ಕೊಟ್ಟ ವರವು ಬಾಳಿನಾಗೆ

ನೋಡೀ... ಸ್ವಾಮೀ.... ನಾವಿರೋದೆ ಹೀಗೆ


ಗೆಳೆಯರೊಡನೆ ಇರಲು ನಾನೇ ವೀರ ಆಂಜನೇಯ

ಅಪ್ಪ ಅಮ್ಮ ಪಕ್ಕದಲಿರೆ ಬರುವ ಧರ್ಮರಾಯ

ತಾಳವನ್ನು ಹಾಕುವೆ ಕಾಲಕ್ಕೆ ತಕ್ಕ ಹಾಗೆ

ನೋಡೀ... ಸ್ವಾಮೀ.... ನಾವಿರೋದೆ ಹೀಗೆ



ನೂರು ತಪ್ಪು ಮಾಡಿರುವೆನು ನಾನು ಜೀವನದಲಿ

ನಿಮಗೆ ನೋವು ಕೊಟ್ಟಿದ್ದರೆ ಅದಕೆ ಕ್ಷಮೆಯು ಇರಲಿ

ಕ್ಷಮಿಸಿದಂತೆ ಬಂದರೆ ಕಿರುನಗುವು ಮುಖದ ಮ್ಯಾಗೆ

ನೋಡೀ... ಸ್ವಾಮೀ.... ನಾವಿರೋದೆ ಹೀಗೆ



ಸುಳ್ಳು ಹೇಳಲಿಲ್ಲ ನಾನು ನನ್ನ ಕವನದಲ್ಲಿ

ಮಂಥನವನು ಮಾಡಿ ನೋಡಿ ನೀವು ಮನಸಿನಲ್ಲಿ

ಮ್ಮ ಭಾವನೆಗಳ ತಿಳಿಸಿ MAIL/CALL ನಾಗೆ

ಈಗ ನೀವು ಹೇಳಿ... ನಾನು ಹೀಗೆ ?? ಹಾಗೆ .... ಅಥವ ಹೇಗೆ ??


======================================= ವಿಕಟಕವಿ ===========

Comments

Popular posts from this blog

ಎಮ್ಮೆ ನಿನಗೆ ಸಾಟಿಯಿಲ್ಲ

ಎಮ್ಮೆ ನಿನಗೆ ಸಾಟಿಯಿಲ್ಲ             ಒಲೆ ಮತ್ತು  ಎಲ್ ಪಿ ಜಿ ಸಿಲಿಂಡರ್ ಮಾತ್ರ ಇಲ್ಲ . ಹೌದು ಇನ್ನೊಮ್ಮೆ ಎಲ್ಲ ಪರೀಕ್ಷಿಸಿದೆ .. ಅವೆರಡೇ .... ನಮ್ಮ ಅಡುಗೆಮನೆಯಲ್ಲಿರುವ ಇನ್ನೆಲ್ಲಾ ಪಾತ್ರೆ ಪರಿಕರಗಳೆಲ್ಲವೂ ಅಲ್ಲಿ ಮೌಜೂದಾಗಿದ್ದವು . ಗೆಳೆಯನ ಮದುವೆಗೆಂದು ಮುಂಬೈಯಿಂದ ಬೆಂಗಳೂರಿಗೆ ಬರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ UPPER BERTH ಸೀಟಿನಲ್ಲಿ ಒಂದು ಸಣ್ಣ ನಿದ್ರೆ ಮುಗಿಸಿ ಕೆಳಗೆ ಇಣುಕಿದ ನನಗೆ ದಿಗ್ಬ್ರಮೆ ಕಾದಿತ್ತು . ಒಂದು ಕ್ಷಣ ನನ್ನನ್ನು ಯಾರೊ ಕಿಡ್ನ್ಯಾಪ್ ಮಾಡಿ ಒಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದಾರೆ ಎಂದುಕೊಂಡೆ . ಆಮೇಲೆ ತಿಳಿಯಿತು LOWER BERTH ನಲ್ಲಿದ್ದ ಒಂದು ತುಂಬು ಕುಟುಂಬವು ಮಧ್ಯಾಹ್ನದ ಭೋಜನದ ತಯಾರಿ ನಡೆಸಿದ್ದರು . ರೈಲಿನಲ್ಲಿದ್ದೇವೆಂದು USE AND THROW ಪ್ಲೇಟ್ ಅಥವಾ ಪ್ಲಾಸ್ಟಿಕ್ಕಿನ ಲೋಟಗಳು ಹುಡುಕಿದರೂ ಸಿಗುತ್ತಿರಲಿಲ್ಲ ಎಲಾ ಥಳಥಳ ಹೊಳೆಯುವ ಸ್ಟೀಲಿನ ಬಟ್ಟಲು ಮತ್ತು ಲೋಟಗಳು . ಅತ್ತಿತ್ತ ಓಡಾಡುತ್ತಿದ್ದವರು ಇದೇ  ರೈಲಿನ PANTRY ಎಂದುಕೊಂಡಿರಬೇಕು . ನಾವು ಮನೆಯಲ್ಲಿದ್ದರೂ ಉಪ್ಪು ಖಾರ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ದರೆ ಇನ್ಯಾರು ಎದ್ದು ಹೋಗಿ ತರುತ್ತಾರೆಂದು ಆಲಸ್ಯದಿಂದ ತೆಪ್ಪಗೆ ಊಟ ಮಾಡುತ್ತೇವೆ . ಆದರೆ ಇವರೋ ಚಲಿಸುವ ರೈಲಿನಲ್ಲಿದ್ದರೂ ರುಚಿಯೊಂದಿಗೆ ಯಾವುದೇ ಸಂಧಾನ - ರಾಜಿ ಮಾಡಿಕೊಳ್ಳದೇ...

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿವಿಲ್ಲ ಬಿಡೇ... ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು..... ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು. ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು. ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................  ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ. ರೀssssssssss......... ಮತ್ತೊಮ್ಮೆ ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು. ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹ...

ಆಪೀಸಾಯಣ

ನವೆಂಬರ್ 22 ರಂದು ಆಪೀಸಿನಲ್ಲಿ ಆಚರಿಸಿದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಆಪೀಸಿನಲ್ಲಿರುವವರ ಹೆಸರನ್ನೆಲ್ಲ ಸೇರಿಸಿ ಹೊಸೆದ ಪದ್ಯ. ನೀಲಿ  ಬಣ್ಣದಲ್ಲಿ ಬರೆದವು ಅವರ ಹೆಸರುಗಳು. ದೇವಾದಿದೇವತೆಗಳು ಸಭೆಯನ್ನು ನಡೆಸಿ ಸಭೆಯೊಳಗೆ ಸು ಮಧು ರ ಕನ್ನಡವ ಬಡಿಸಿ || ಎಲ್ಲಾ ದೇವರಿಗೂ ಕನ್ನಡವು ಹಿಡಿಸಿ ಬಂದು ಕೂತಿಹರೆಲ್ಲ tatasky ODC ||               ಕೃಷ್ಣ ನಿಹನಿಲ್ಲಿ  ಇಹನು   ರಘು-ರಾಮ                     ಮಂಜುನಾಥ ರು ತ್ರಿಮೂರ್ತಿಯಲಿ ಹರಸಿರುವ ಧಾಮ ||                     ಪಾವನ-ಪುನೀತರಾಗಿ ಕೇಳಿ ಮೋಹನ ನ ಬಾನ್ಸುರಿ                     ಸ್ವಪ್ನ ದಲ್ಲಷ್ಟೇ ಸಿಗುವುದು ಇಂಥಹ ಚಾನ್ಸು ರೀ... || ವಿಘ್ನ ದಿಂ ಕಾಯುತಿಹ ದ್ವಾರದಲೇ ಬೆನಕ ಎಲ್ಲ ದೇವರಿಗೂ ಶರಣು ನಮ್ಮ ಗುರು ಗಳ ತನಕ ಸಂಕಟದಿ ಕರೆದೊಡನೆ ಸ್ವಾಮಿ ವೆಂಕಟೇಶ ಹರುಷ ದಲಿ ಕಳಿಸುವ...