Skip to main content

Posts

Showing posts from 2008

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ

ಕಲ್ಯಾಣಮಸ್ತು............

ಹೌದು...ನಾನೀಗ ಬರೆಯುತ್ತಿರುವುದು ಮದುವೆ ಬಗ್ಗೆ. ಸ್ವಂತ ಅನುಭವ ಇಲ್ಲ ನಿಜ ಆದರೆ ಅಲ್ಲಿ -ಇಲ್ಲಿ ಕೇಳಿ -ಓದಿ- ನೋಡಿ ಮದುವೆ ಬಗ್ಗೆ ತುಂಬಾ ತಿಳಿದುಕೊಂಡಿದ್ದೇನೆ . "ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡಿ" ಎಂಬ ಗಾದೆಯೇ ಇದೆ . ಸ್ವಂತ ಅನುಭವದ ಮೇಲೆ ಒಂದು ಸಂಪುಟವನ್ನೇ ರಚಿಸುತ್ತೇನೆ . ಈಗ ಅದರ Trailors ನೋಡಿ ಆನಂದಿಸಿ . ಯಾಕೆಂದರೆ Picture abhi bhi baaki hai mere dost ...... ಮದುವೆ ಗೆ ಅಗತ್ಯ ಜನರು : ಮದುವೆ ಗಂಡು ಯಾನೆ ವರ : "ಸಾಯೋ ಕುರಿಗೆ ಮೇಯೋದೆ ಕೆಲಸ " ಅನ್ನುತ್ತಾರಲ್ಲ ಹಾಗೆ ಇವನು . ನಕ್ಕು - ನಲಿದಾಡುತ್ತ ಭಾರೀ ಸಂತೋಷದಿಂದಿರುತ್ತಾನೆ . ಅದೇ ಅವನ ಕೊನೆಯ ನಗು . ನಗದು ತೆಗೆದುಕೊಂಡು ನಗುವುದ ಮರೆಯುವ ಭೂಪನೆಂದರೆ ಇವನೇ . ಮದುವೆ ಹೆಣ್ಣು urf ವಧು :- ಜಿರಳೆಗೆ ಮೀಸೆ ತೂರಿಸ್ಲಿಕ್ಕೆ ಜಾಗ ಕೊಟ್ಟರೆ ಆಮೇಲೆ ಇಡೀ ಜೀವ ನುಗ್ಗುತ್ತದಂತೆ . ಅಂತೆಯೇ ಮದುವೆಗೆ ಮುನ್ನ ತಗ್ಗಿ ಬಗ್ಗಿ ನಡೆಯುವ ಮದುವೆಯ ನಂತರ "Ring Master" ನಂತೆ ಗಂಡನೆಂಬ ಬಡಪಾಯಿಯನ್ನು ಕಣ್ಣ ಸನ್ನೆಯಲ್ಲೇ ಕುಣಿಸುವ ಕನ್ಯಾಮಣಿ . ಸಂಬಂಧಿಗಳು:- 2)ಅಪ್ಪ-ಅಮ್ಮ :ಹುಡುಗ ಹುಡುಗಿಯ ನಡುವೆ ಮುಂದೆ ನಡೆಯುವ Boxing ಪಂದ್ಯಾಟಕ್ಕೆ referee ಗಳು . Boxing ಪಂದ್ಯಕ್ಕೆ ಮೊದಲು ಸ್ಪರ್ಧಾಳುಗಳು shake hand ಮಾಡುವಂತೆ ವಧು -ವರರ ಕೈ ಮಿಲಾಯಿಸಿ ಶಾಸ್ತ್ರೋಕ್ತವಾಗಿ ವಾದ್ಯದವರ ಮುಖಾಂತರ ರಣಕಹಳೆ

ಮುಂಬೈಯೊಳಗೊಂದು ಮನೆಯ ಮಾಡಿ ರೈಲಿಗಂಜಿದೊಡೆಂತಯ್ಯಾ ????

********** "Platform ಕ್ರಮಾಂಕ್ ಚಾರ್ ವರ್ ಆಲೇಲಿ ಲೋಕಲ್ ಆಟ್ ವಾಜ್ಹೂನ್ ಇಕುನ್ ಚಾಲಿಸ್ ಮಿನಿಟಾಂಚಿ ಹಾರ್ಬರ್ ಲೈನ್ ವರೂನ್ ಶಿವಾಜಿ ಟರ್ಮಿನಸ್ ಲಾ ಜ್ಹಾಣಾರಿ ಧೀಮಿ ಲೋಕಲ್ ಆಹೇ " --------------7:30 ಕ್ಕೆ ರೈಲ್ವೆ ಸ್ಟೇಶನ್ ನಲ್ಲಿದ್ದ ನಾನು ಬಿಕೋ ಎನ್ನುತ್ತಿದ್ದ ಸ್ಟೇಷನ್ನನ್ನು ನೋಡಿ ,ಅಬ್ಬಾ.... ಇಂದಾದರೂ ಸುಖವಾಗಿ ಕುಳಿತು ಹೋಗಬಹುದು ಎಂದು ಮನಸ್ಸಿನ ಮಂಡಿಗೆ ತಿನ್ನುತ್ತಿದ್ದೆ . ಆದರೆ .... ಎಲ್ಲಿ ? ಏನು ?ಹೇಗೆ? ಎತ್ತ ? ತಿಳಿಯದು ರೈಲಿನ ಆಗಮನಕ್ಕೆ 2 ನಿಮಿಷ ಮೊದಲು ಇರುವ 10 ದಿಕ್ಕು ಸಾಲದೇ ಇನ್ನೆರಡು extra ದಿಕ್ಕುಗಳನ್ನು ಸೃಷ್ಠಿಸಿಕೊಂಡು ಜನಪ್ರವಾಹ ಹರಿದು ರೈಲಿನಲ್ಲಿ ಬಿಡಿ platform ನಲ್ಲೂ ನಿಲ್ಲಲು ಜಾಗ ಇಲ್ಲದಾಯಿತು . " ಹ್ಹಾ .... ಚಲಾ .... " " ಉತರ್ಕೆ ಚಡೋ ಭಾಯಿ" ಕೂಗು. Engineering college ,love ಮತ್ತು local train ಈ ಮೂರು ವಿಷಯಗಳಲ್ಲಿ common ಏನೆಂದರೆ ಒಳಗಿರುವವರು ಹೊರಗೆ ಬಂದರೆ ಸಾಕೆಂದುಕೊಂಡರೆ ಹೊರಗಿರುವವರು ಒಳಗೆ ಸೇರುವ ತವಕದಿಂದಿರುತ್ತಾರೆ . Mechanical ನಲ್ಲಿ Engineering ಮಾಡಿರುವ ನಾನು Ph.D ಗಾಗಿ “Physical analytical psychological and logical study on Mubai-Local trains and the crowd,Arrival-Departure timings,Handling the crowd, Tragedies included and strategies to get

ನೆನಪಿನ ಬುತ್ತಿಯಿಂದ........

ವಚನ ಬ್ರಹ್ಮ ಸರ್ವಜ್ಞ ಇಂದು ಬದುಕಿದ್ದು ಒಂದು ವೇಳೆ ನಮ್ಮ ಕಾಲೇಜಿನ ದರ್ಶನ ಮಾಡಿದ್ದಲ್ಲಿ " ಜೇಸಿಯಲಿ ಸೀಟಿರಲು ಮೆಸ್ಸಿನಲಿ ಪ್ಲೇಟಿರಲು ಹಾಸ್ಟೇಲಿನ ಬೆಡ್ಡಿನಲಿ ಮಲಗಿರಲು ಸ್ವರ್ಗವೂ ಠುಸ್ಸ .... ಎಂದ - ಸರ್ವಜ್ಞ ಎಂದು ಹೇಳುತಿದ್ದ ಎಂಬುದರಲ್ಲಿ ನನಗೆ ಎಳ್ಳಷ್ಟೂ ಸಂದೇಹವಿಲ್ಲ .ನನ್ನ ಜೀವನದ ಅವಿಸ್ಮರಣೀಯ ಕಾಲ ಯಾವುದೆಂದು ಯಾರಾದರೂ ಕೇಳಿದರೆ ಈ ನಾಲ್ಕು ವರ್ಷಗಳ ಹಾಸ್ಟೇಲ್ ಜೀವನ ಎನ್ನಲು ಬಹಳ ಸಂತೋಷಪಡುತ್ತೇನೆ . ಈಗ ನೀವೇ ನೋಡಿ, ನಮ್ಮ ಕಾಲೇಜಿನ End-to-End ದರ್ಶನ ಮಾಡಬೇಕಾದರೆ ಬಲ ತುದಿಯ Boys Hostel ನಿಂದ ಎಡ ತುದಿಯ Girls Hostel ತನಕ ನೋಡಬೇಕು .ಹೀಗೆ ಹಾಸ್ಟೇಲ್ ನೋಡದೆ ಜೇಸಿಯ ದರ್ಶನ ಪರಿಪೂರ್ಣವಾಗದು. ನನ್ನ ಎಲ್ಲ ಅನುಭವಗಳನ್ನು ಬರೆಯುತ್ತ ಹೋದರೆ ಒಂದು ಸಂಪುಟ ರಚಿಸುವಷ್ಟು ವಿಷಯಗಳಿದ್ದರೂ ಬಹಳ ಕಷ್ಟಪಟ್ಟು 2 ಪುಟಗಳಿಗೆ ಭಟ್ಟಿ ಇಳಿಸಿ ನನ್ನ ಅನುಭವ ಹಾಗೂ ಹಾಸ್ಟೇಲಿನ ಹಿರಿಮೆಯನ್ನು ಹಂಚಿಕೊಳ್ಳುವ ಕಿರುಪ್ರಯತ್ನ ಮಾಡಿದ್ದೇನೆ . "ಪುಷ್ಪ ಮಹಲ್ " ನಲ್ಲಿ ಕಳೆದ ಮೊದಲನೆ ವರ್ಷ ನಿಜಕ್ಕೂ ಅವಿಸ್ಮರಣೀಯ ನೆನಪಿನ ಬುತ್ತಿ . ಮೊದಲ ಎರಡು ವಾರ ಹೊಸ ಮುಖಗಳ ಪರಿಚಯದಲ್ಲೇ ಕಳೆದರೂ ,ಒಂದೇ ತಿಂಗಳಿನಲ್ಲಿ ಎಲ್ಲರೂ ಪರಸ್ಪರ ಅಡ್ಡ ಹೆಸರಿನ ಸಂಬೋಧನೆ ಶುರು ಮಾಡಿದ್ದೆವು .ಜೆ.ಎಸ್.ಎಸ್ ,ಕೋಳ್ಯ,ಅನ್ಯ ,ಸ್ಲಮ್,ಸೇಟು,ಸೈಕೋ,ಹೈವಾನ್ ,ಜಾಂಬೂ,ದೇಸಿ, ದೊಡ್ಡು,ಕುಮಟಾ ಎಲ್ಲ ಈ ಗರಡಿಯವರೇ. ಕಾರಿಡಾರ್ ಕ್ರಿಕೆಟ್ ನಿಂದ ಹಿಡಿ

ಸೌಂದರ್ಯೋಪಾಸನೆ

********************************************************************************** ಸೈಕಲ್ ಸ್ಟಾಂಡಿನಲ್ಲಿ ಗೆಳೆಯನೊಬ್ಬನನ್ನು ಕಾಯುತ್ತ ನಿಂತಿದ್ದೆ . ದೂರದಲ್ಲಿ ಕೆಲವು ಕನ್ಯಾಮಣಿಯರು ಬರುತ್ತಿದ್ದರು . ನಾನು ಟೆನ್ಷನ್ ನಲ್ಲಿದ್ದುದರಿಂದ ಅವರೆಡೆ ಅಷ್ಟು ಗಮನ ಹರಿಸಲಿಲ್ಲ . ಅವರಲ್ಲೊಬ್ಬಳು ನಾನು ಅವಳನ್ನು ಗಮನಿಸಲೇಬೇಕೆಂಬ ಹಠ ತೊಟ್ಟಿದ್ದಳೋ ಏನೋ , ಏರುದನಿಯಲ್ಲಿ ಅವಳ ಮಾತು - ನಗು ಸಾಗಿತ್ತು .ಆದರೂ ನಾನು ಗಮನಿಸದವನಂತೆ ನಿಂತಿದ್ದೆನು. ಆದರೆ ಅವಳೂ ಬಿಡದೆ ಹತ್ತಿರ ಬಂದು ಟೈಮ್ ಎಷ್ಟು ಎಂದು ಕೇಳಿದಳು .ನಾನು 4:20 ಎಂದೆನು. ಅದಕ್ಕವಳು ನಿಮ್ಮ ವಾಚ್ 10 ನಿಮಿಷ ಮುಂದಿದೆ ಸರಿಮಾಡಿಕೊಳ್ಳಿ ಎಂದು ಹೇಳಿ ಗೆಳತಿಯರೊಡನೆ ನನ್ನನ್ನು ಅಣಕಿಸುತ್ತಾ ನಡೆದಳು . ಮತ್ತೆ ಹಿಂದಿರುಗಿ " ಕ್ಷಮಿಸಿ , ನೀವು ಕವನ ಬರೆಯುತ್ತೀರಲ್ಲಾ ??" ಎಂದು ಕೇಳಿದಳು .ನಾನು ಇವಳು ಎಲ್ಲೋ ನನ್ನ ಕವನಗಳನ್ನು ಓದಿರಬೇಕೆಂದುಕೊಂಡು ಪ್ರಶಂಸೆಯನ್ನು ನಿರೀಕ್ಷಿಸುತ್ತಾ ಹೌದು ಎಂದೆನು. ಆಗ ಅವಳು " ನನ್ನ ಬಗ್ಗೆ ಕವನ ಬರೆಯುತ್ತೀರಾ ?" ಎಂದು ವ್ಯಂಗ್ಯವಾಗಿ ಅನುನಾಸಿಕದಲ್ಲಿ ಕುಹಕವಾಡುತ್ತಾ ಹೋದಳು . ಹೀಗೆ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಎರಡು ಬಾರಿ ನನ್ನನ್ನು ತಬ್ಬಿಬ್ಬಾಗಿಸಿ ಹೋದಳು . ನನಗೋ ಕೆಟ್ಟ ಕೋಪ ಬಂತು . ಅವಳ ಸೊಕ್ಕನಡಗಿಸಿ ನನ್ನ ಲೇಖನಿ

JCE ROCKS!!!!!

************************************************************ ಸುತ್ತ ಕವಿದಿರೆ ಅಂಧಕಾರವು ಮತ್ತೆ ಇರದಿರೆ ಜ್ಞಾನದೀಪವು ಬಿತ್ತಿದರು ಸುತ್ತೂರು ಸ್ವಾಮಿಗಳಿಲ್ಲಿ ಬೆಳಕನ್ನು || ಕತ್ತಲದು ಕಾಲ್ಕಿತ್ತು ಓಡಿತು ಮತ್ತೆ ಹರಿಯಿತು ಜ್ಞಾನದೀಪ ಸ ಮಸ್ತ ಲೋಕಕೆ ಬೆಳಕು ಬೀರಿದ ನಿಮಗೆ ವಂದಿಪೆವು || ಮಾನವನೋ ?? ಇವ ದೇವದೂತನೋ ?? ನಾನು ಅರಿಯೆನು ಇದನು ದಿಟದಿಂ ಜ್ಞಾನಸಾಗರ ಹರಿಸಿದೀತನು ದೇವನವತಾರಿ || ಜ್ಞಾನಶಿಖರದ ತುತ್ತತುದಿಯಲಿ ಮಿನುಗು ತಾರೆಯ ತೆರದಿ ಮಿನುಗುತ ಜನರ ಮನದೊಳು ಮನೆಯ ಮಾಡಿದೆ ನಮ್ಮ ಜೆ ಸಿ ಇ || ನುರಿತ ಅಧ್ಯಾಪಕರ ತಂಡವು ಸರುವಸಜ್ಜಿತ ಪ್ರಯೋಗಾಲಯ ಗರುವದಲಿ ನಾ ಹೇಳಿಕೊಳ್ಳುವೆ ಎಲ್ಲ ಇಲ್ಲಿಹುದು || ಗರಡಿ ಮನೆಯಿದು ಹೊರಗೆ ತರುವುದು ತರುಣ ಪ್ರತಿಭೆಗಳನ್ನು ವರುಷಕು ಧರಣಿಮಂಡಲದೆಲ್ಲೆಡೆಯಲಿಹರಿದರ ಆತ್ಮಜರು || ಜೇಸಿ ಮಹಿಮೆಯ ಹೇಳ ಹೋದರೆ ಮಾಸಗಳು ಹಲವಾರು ಸಾಲದು ಮೀಸೆ ತಿರುವುತ ಹೇಳುವೆನು ನಾ ನಾನು ಜೇಸಿಯವ|| ಹಾಸು ಹೊಕ್ಕಿದೆ ಇದರಲೆಲ್ಲವು ಪ್ಲೇಸುಮೆಂಟಾಗುವುದು ಖಚಿತವು ಏಸು ಜನುಮದ ಪುಣ್ಯವೋ ?? ನಾನಿಲ್ಲಿ ಬಂದಿರುವೆ || **********************************************---ವಿಕಟಕವಿ

ನಂಬಿ ಕೆಟ್ಟವರು

****************************************************** ಹಣವ ಗಳಿಸಿದೆ ಬೆವರ ಸುರಿಸುತ ರಣದ ಸೈನಿಕನಂದದಿಂ ಕಂ ಕಣವ ತೊಟ್ಟೆನು ಮನೆಯ ಕಟ್ಟಲು ನಮ್ಮ ಊರಿನಲಿ|| ತೃಣದಿ ನಾ ಕಂಡೆನು ಸುಖವ ಚಣ ಚಣವು ಕಷ್ಟದಿ ದುಡಿದೆ ನಾ ಕಡಿ ವಾಣವಿಕ್ಕಿದೆ ನನ್ನ ಖರ್ಚಿಗೆ ಗುರಿಯ ಸಾಧಿಸಲು || ಚಲಿಸಿದೆನು ಕಾಲ್ಗಳಲಿ ನಡೆಯುತ ಉಳಿಸಿದೆನು ಹಣವನ್ನು ವ್ಯಯಿಸದೆ ಗಳಿಸಿದಾ ಹಣ ಕೂಡಿ ಇಟ್ಟೆನು ಫೈನಾನ್ಸೊಂದರಲಿ|| ಮುಳುಗಿ ಹೋಯಿತು ಎಲ್ಲ ಹಣ ನಾ ಕಳೆದುಕೊಂಡೆನು ನನ್ನ ಕನಸನು ಹಳಿದುಕೊಂಡೆನು ಹಲುಬಿದೆನು ನಾ ನನ್ನ ದುರ್ವಿಧಿಗೆ || ಹರನು ಮೆಚ್ಚುವುದಿಲ್ಲ ಇವರನು ನರರು ಚಚ್ಚದೆ ಬಿಡುವರೆನ್ ಸರ ಕಾರ ಕಣ್ಣನು ಮುಚ್ಚಿಕೊಳ್ಳುತ ಶಿಕ್ಷೆ ಕೊಡದಿರಲು|| ಪರರ ಸೊತ್ತನು ದೋಚುತಿಹ ತಸ್ ಕರರ ನಂಬಿದ ನಾವು ಕೆಟ್ಟೆವು ಕರುಮವೆಮ್ಮದು ಎನುತ ನಾವ್ಗಳು ಸಹಿಸಿಕೊಳಬೇಕು || ************************************--ವಿಕಟಕವಿ