Skip to main content

ಎಲ್ಲಾರು ಮಾಡುವುದು ಹೊಟ್ಟೆಗಾಗಿ

*********************************ಪುಟಕ್ಕಿಳಿಸುವ ಮುನ್ನ ************************
ನಾನು ಲೇಖಕ - ಕವಿ ಏನೂ ಅಲ್ಲ . ಒಬ್ಬ ಹವ್ಯಾಸಿ ಬರಹಗಾರ ಅಷ್ಟೆ . ಬಹಳಷ್ಟು ಲೇಖನಗಳಲ್ಲಿ "ಸಂಧ್ಯಾಕಾಲ ನೇಸರನು ಅಸ್ತಮಿಸುವಾಗ , ವಸಂತಕಾಲದ ಕೋಗಿಲೆಯ ಕುಹೂ ಕುಹೂ ದನಿಯಲ್ಲಿ ಜನರಿಗೆ ಅದೇನೋ "ಸ್ಪೂರ್ತಿ " ಸಿಗುತ್ತದಂತೆ . ಅದೆಲ್ಲ ನನಗೆ ತಿಳಿಯದು . ಆದರೆ ನಾನು 2nd PUC ನಲ್ಲಿ ಇದ್ದಾಗ ಬರೆದ ಒಂದು ಕವಿತೆ (ನನ್ನ ಬ್ಲಾಗ್ ನಲ್ಲಿ ಮೊದಲನೆ ಕವಿತೆ ) 2 ತಿಂಗಳ ಕಾಲ ಅಜ್ಞಾತವಾಸದಲ್ಲಿತ್ತು. ಕಣ್ತಪ್ಪಿನಿಂದ ಅದನ್ನು ಓದಿದ ನನ್ನ ಅಕ್ಕ ಒಂದು ವೇಳೆ ಅನುನಾಸಿಕ ಪ್ರಯೋಗ ಮಾಡಿದ್ದಲ್ಲಿ ನಾನು ಆ ಕ್ಷಣವೇ ನನ್ನ ಬರವಣಿಗೆಗೆ ಪೂರ್ಣವಿರಾಮ ಇಡುತ್ತಿದ್ದೆ . ಆದರೆ ಅವಳು ತಾನು ಓದಿ ಹೊಗಳಿದ್ದಲ್ಲದೆ ಅಣ್ಣ, ಅಪ್ಪ ಅಮ್ಮ ಎಲ್ಲರಿಗೂ ತೋರಿಸಿದಳು . ಇನ್ನು ನಮ್ಮ ಅಪ್ಪ ...... ನನ್ನ ಆದರ್ಶ ವ್ಯಕ್ತಿ .ಇಂದು ನನ್ನ ಕನ್ನಡಕ್ಕೆ 7/10 ಸಿಕ್ಕಿದರೆ ಅದರಲ್ಲಿ 5 ಅಂಕ ಸೀದಾ ಅಪ್ಪನ Account ಗೆ ಹೋಗುತ್ತದೆ . ಭಾನುವಾರ ಉದಯವಾಣಿ ಸಾಪ್ತಾಹಿಕ ಪುರವಣಿಯ "ಪದಬಂಧ " ಪ್ರತೀವಾರ ಒಟ್ಟಿಗೆ ಕುಳಿತು ಮಾಡುತ್ತಿದ್ದೆವು . ಒಂದು ಚೌಕವೂ ಖಾಲೀ ಉಳಿಯೋಲ್ಲ . ಅವರೋ ನಿಸ್ಸೀಮರು . ನಾನು
L - Board . ಒಂದು ಶಬ್ದ ಗೊತ್ತಿಲ್ಲ ಅಂದರೆ ಒಂದು ಪೆಟ್ಟು :) . ಹೀಗೆ ಅವರ ಮುಂದೆ
" ಮೆರೆಯುವ " ನಿಟ್ಟಿನಲ್ಲಿ (ಕುಂದಾಪ್ರ ಕನ್ನಡದಲ್ಲಿ ಹೇಳುವುದಾದರೆ ರೈಸುವುದು ಅಥವಾ ಜಾಪ್ ಮಾಡುವುದು ) ಯಾವುದೋ ಪುಸ್ತಕದ ಒಂದು corner ನಲ್ಲಿ ಓದಿದ ಶಬ್ದಗಳನ್ನು ನೆನಪಿಟ್ಟು ಕೊಳ್ಳುತ್ತಿದ್ದೆ . ಅದು ಬಿಟ್ಟರೆ ಕನ್ನಡವನ್ನು ಶಾಲೆಯಲ್ಲಿ 3 ನೇ ಭಾಷೆಯಾಗಿ ಓದಿದವನು ನಾನು . ಆಮೇಲೆ ಕಾಲೇಜಿನಲ್ಲಿ ಕನ್ನಡ ಇಲ್ಲ .ಇಂಜಿನಿಯರಿಂಗ್ ಕಾಲೇಜಿಗೆ ಹೋದ ಮೇಲೆ ನನ್ನ ಕಥೆ ಯಾರಿಗೆ ಹೇಳಲಿ ?? ಕನ್ನಡ ಬರುವುದಿಲ್ಲ english ತಿಳಿಯುವುದಿಲ್ಲ . Bonafied Certificate ಗಾಗಿ ಅರ್ಜಿ ಬರೆಯಲು ಹೇಳಿದಾಗ ನಾನು ಪಿಳಿಪಿಳಿ ಕಣ್ಣು ಬಿಡುತ್ತಿದ್ದರೆ ನನ್ನ ಅಪ್ಪ ಆಂಗ್ಲ ಭಾಷೆಯಲ್ಲಿ ಅರ್ಜಿ ಬರೆಯುವುದನ್ನು ಕಂಡು ನಾಚಿ ನೀರಾಗಿದ್ದೆ. ( ಅವರು 1965 ರ 8 ನೇ ತರಗತಿ ನಾನು 2003 ರ 2nd PUC !!!!! ). ಅಲ್ಲಿಂದ ನನ್ನ ಯೋಚನಾಲಹರಿ ಬದಲಾಯಿತು . ಭಾಷಾ ವಿಷಯವಾಗಲಿ ಅಥವಾ ತಂತ್ರಜ್ಞಾನದ ವಿಷಯವಾಗಲಿ ಸುಮ್ಮನೆ ಓದುವುದನ್ನು ಬಿಟ್ಟು ಸ್ವಲ್ಪ ಗಮನ -ವಿಮರ್ಶೆ ( Observation and Analysis ) ಮಾಡುವುದನ್ನು ಶುರು ಮಾಡಿದೆ . ಹಾಸ್ಯವೋ... ಅಪ್ಪ - ಅಣ್ಣ ಇವರಿಂದ ಬಳುವಳಿಯಾಗಿ ಬಂದಿತ್ತು . ಇನ್ನು ಅಲ್ಲಿ -ಇಲ್ಲಿ ನೋಡಿದ್ದಕ್ಕೆ ನನ್ನ ಮಸಾಲೆ ಬೆರೆಸಿ ಉಪ್ಪು ಮೆಣಸು ಒಗ್ಗರಣೆ ಹಾಕಿ ( ಒಗ್ಗರಣೆ ಹಾಕುವುದನ್ನು ಅಮ್ಮ ಕಲಿಸಿದ್ದು :) :) . ಪಾಕಶಾಸ್ತ್ರ ಪ್ರವೀಣೆ .ನವರಸ ನಾಯಕಿ :) :) . ಎಣ್ಣೆ -ಸಾಸಿವೆ ಇಲ್ಲದೆ ಒಗ್ಗರಣೆ ಹಾಕುವುದು , ಹಾಲು ಇಲ್ಲದೆ ಚಾ , ತೆಂಗಿನ ಕಾಯಿ - ಮೆಣಸು ಇಲ್ಲದೆ ಮಸಾಲೆ ಮಾಡಬೇಕೆ ?? ನನ್ನ ಅಮ್ಮನನ್ನು ಸಂಪರ್ಕಿಸಿ ). ಹೀಗೆ ನನ್ನ ಮನೆಯೇ ನನಗೆ ಮೊದಲ ಪಾಠಶಾಲೆ .

ನಂತರ ನನ್ನ ಮೊದಲ ಲೇಖನ ಸೌಂದರ್ಯೋಪಾಸನೆ......ಇದನ್ನು ಬರೆಯುವುದು ಯಾವುದೇ Boys-Hostel ವಿದ್ಯಾರ್ಥಿಗೆ ಕಷ್ಟವಲ್ಲ. ಆಮೇಲೆ ಹಾಸ್ಟೇಲಿನ ಅನುಭವಗಳು, ಮುಂಬೈ ಗೆ ಬಂದ ಮೇಲೆ ರೈಲಿನೊಳಗಿನ ಪಡಿಪಾಟಲುಗಳು ಎಲ್ಲ "Reality Based" ಲೇಖನ . ಎಂಥವನೂ ಈ ಲೇಖನ ಬರೀಬಹುದು . ನನ್ನ ಲೇಖನದಲ್ಲಿ ಇಲ್ಲಿಯವರೆಗೆ ಯಾವುದೇ ಸ್ಪೂರ್ತಿಯ ಕೈವಾಡವಿಲ್ಲ . ಆದರೆ ಇದರ ನಂತರ ನನಗೆ ಲೇಖನ ಬರೆಯಲು ಸ್ಫೂರ್ತಿಯ ಸಾಗರವೇ ಸಿಕ್ಕಿತ್ತು . ಈಗ ನನ್ನ ಗೆಳೆಯರನ್ನು ನೆನಪಿಸಿಕೊಳ್ಳದಿದ್ದರೆ ಅದು ಮೋಸವಾದೀತು . ನನ್ನ ರೈಲಿನ ಲೇಖನವನ್ನು ಓದಿದ ಆಪ್ತರು ಲೇಖನ ಓದಿದ ತಕ್ಷಣ ನಡುರಾತ್ರಿ 12 ಗಂಟೆಗೆ

" ಸುಮಂತಾ ..... article ssssss ಸ್ತ ಲಾಯ್ಕದಾಲ್ಲಾ " ( ಸುಮಂತ article ತುಂಬಾ ಚೆನ್ನಾಗಿತ್ತು )ಎಂದು Voice SMS ಕಳಿಸಿದರೆ ??

"Yaar i need your autograph ... its Urgent ... Next time when we meet Pen in your hand autograph book in my hand..... " ಎಂದು mail ಮಾಡಿದರೆ ??

"Till now i didnt have Kannada Font in my PC ....now i understood what i missed all these days" ಎಂದು Orkut ನಲ್ಲಿ Scrap ಮಾಡಿದರೆ ??

ಇನ್ನು ನನ್ನ ಥರ ಹಾಸ್ಟೆಲ್ನಲ್ಲಿ ಇದ್ದವರು ಓದಿ "ಯಾಪಾ ssss...... ಏನ್ ಬರೀತೀಲೆ ಬೇವರ್ಸಿ !!!! ಸಕತ್ತಾಗಿತ್ತು ಮಚ್ಚಾ ..You rock dude "ಎಂದು SMS ಮಾಡಿದರೆ ??

ಎಷ್ಟು ಸಂತೋಷವಾಗುತ್ತದೆ ಗೊತ್ತಾ??? ಈ ಸ್ಪೂರ್ತಿಯ ಮುಂದೆ ಸೂರ್ಯ - ಚಂದ್ರ -ಕಾಗೆ - ಕೋಗಿಲೆ -ಕೋಳಿ ಎಲ್ಲವನ್ನೂ dont care condition ನಲ್ಲಿ ಇಡಬೇಕು . ಇಂತಹ ಗೆಳೆಯರನ್ನು ಪಡೆದ ನಾನೇ ಧನ್ಯ . ಎಲ್ಲರಿಗೂ ನಾನು ಚಿರಋಣಿ . ಹಾಗೂ ಈ ಲೇಖನ ನಿಮಗೆ ಅರ್ಪಣೆ .
********************************ಧನ್ಯವಾದಗಳೊಂದಿಗೆ ***************************
***********************************ವಿಕಟಕವಿ *********************************
ಏನಿದೆಯಪ್ಪಾ???......................

ಖಾಲಿ ದೋಸೆ , ಮಸಾಲೆದೋಸೆ, ತುಪ್ಪ ದೋಸೆ ,ಸೆಟ್ ದೋಸೆ ,ಇಡ್ಲಿ -ಸಾಂಬಾರ್ , ಚಪಾತಿ ,ಪೂರಿ,ಪರೋಟ ,ಉಪ್ಪಿಟ್ಟು ,ಗೋಳಿಬಜೆ ....... ಕುಂದಾಪುರದ ಸಾಗರ್ ಹೋಟೆಲಿನಲ್ಲಿ ಅರಳು ಹುರಿದಂತೆ ಪಟ್ ಪಟ್ ಎಂದು ಮಾಣಿ ಹೇಳುವುದನ್ನು ಕೇಳುವುದೇ ಕರ್ಣಾನಂದ. ಅರ್ಧ ಹೊಟ್ಟೆ ಅಲ್ಲೇ ತುಂಬುತ್ತದೆ . ಇನ್ನು ಒಂದು ಪ್ಲೇಟ್ ಇಡ್ಲಿ (5 ರೂಪಾಯಿ ) ತಿಂದು ಬೈ ಟೂ ಕಾಪಿ ( Its not coffee its "ಕಾಪಿ" "ಕಾ sssss ಪಿ " ಗೊತ್ತಾಯ್ತಾ ?? ) ಕುಡಿದರೆ ಬೆಳಿಗ್ಗಿನ ತಿಂಡಿ ಏಳೂವರೆ ರುಪಾಯಿಯೊಳಗೆ ಆಗಿ ಹೋಯಿತು .ಆದರೂ ಸಾಗರ್ ಸ್ವಲ್ಪ "COSTLY" . ನಾನು ಕುಂದಾಪುರದಲ್ಲಿದ್ದಾಗ ಹೋಟೆಲಿಗೆ ಹೋಗಿದ್ದೆ ಕಡಿಮೆ . ಅಕಸ್ಮಾತ್ ಹೋದರು ಬೊಬ್ಬರ್ಯನ ಕಟ್ಟೆ ಪಕ್ಕದ "ಸುಂದ್ರಯ್ಯನ " ಹೋಟೆಲಿಗೆ ಹೋಗುವುದು . ಬೆಳಿಗ್ಗೆ 5:30 ಕ್ಕೆ ಹೋದರೆ 6 item ಲಭ್ಯ . ಅವು
1) ಉಪ್ಪಿಟ್ಟು - ಅವಲಕ್ಕಿ
2)ಅವಲಕ್ಕಿ - ಉಪ್ಪಿಟ್ಟು
3)ಉಪ್ಪಿಟ್ಟು -ಅವಲಕ್ಕಿ ಒಟ್ಟ್-ಒಟ್ಟಿಗೆ
4)ಉಪ್ಪಿಟ್ಟು - ಅವಲಕ್ಕಿ ಬೇರೆ -ಬೇರೆ
5)ಉಪ್ಪಿಟ್ಟು ಮಾತ್ರ
6)ಅವಲಕ್ಕಿ ಮಾತ್ರ

7 ಗಂಟೆಗೆ ಇಡ್ಲಿ- ದೋಸೆ- ಬನ್ಸು ಸಿಗುತ್ತದೆ .

ಆದರೆ ಆ ರುಚಿಯನ್ನು ನಾನು ಮುಂಬೈ ಯ ಸ್ಟಾರ್ ಹೋಟೆಲ್ ನಲ್ಲೂ ಪಡೆದಿಲ್ಲ . ಯಾಕೆಂದರೆ ನಾವು "Hotel Mahesh Prasad" ಗೆ ಹೋಗುತ್ತಿರಲಿಲ್ಲ ನಾವು ಹೋಗುವುದು "ಸುಂದ್ರಯ್ಯನ" ಹೋಟೆಲಿಗೆ. ಮತ್ತು ಅವರ ಹೋಟೆಲಿಗೆ "ಗಿರಾಕಿಗಳು" ಬರುತ್ತಿರಲಿಲ್ಲ ಬರುವುದು ಶ್ಯಾನುಭಾಗರು ,ಸುರೇಶ್ ಮೇಸ್ತ ,ಕಾರಂತರ ಮಗ,ಐತಾಳರ ಅಳಿಯ ಇಂತವರು . ನಮ್ಮ ನಡುವೆ Owner-Customer ಸಂಬಂಧವಿರಲಿಲ್ಲ . ನಮ್ಮೆಲ್ಲರನ್ನೂ ಅವರು ಹೆಸರಿನಿಂದ ಬಲ್ಲರು ಮತ್ತು ಆ ತಿಂಡಿಯಲ್ಲಿ ಪ್ರೀತಿಯನ್ನೂ ಬೆರೆಸಿ ಕೊಡುತ್ತಿದ್ದರು . ಮತ್ತೆ ಈ ಟಿಪ್ಸು -ಗಿಪ್ಸು ಎಲ್ಲ ನಾನು ನಿನ್ನೆಯೋ ಮೊನ್ನೆಯೋ ಕಲಿತಿದ್ದು . ಕುಂದಾಪುರದಲ್ಲಿ ಊಟದ ಬಿಲ್ಲು ಒಂದಂಕಿ ಯಲ್ಲಿರುವಾಗ ಟಿಪ್ಸ್ ಯಾರು ಕೊಡುತ್ತಾರೆ ?? ನೀವು ಒಬ್ಬರೇ ಹೋಗಿ 15 ಮಂದಿ ಹೋಗಿ ಮುನ್ನ ( ಮೋಹನ -- ಹೋಟೆಲ್ ಮಾಣಿ .. 18 ವರ್ಷದವನು ) ಎಲ್ಲರಿಗೂ ಒಂದೇ ಕೈಯಲ್ಲಿ ನೀರಿನ ಲೋಟ ತಂದು ಇಡುತ್ತಾನೆ . ಲೇ ಮುನ್ನಾ .... ಸಂಜೆ ಮೈದಾನಕ್ಕೆ ಬಾ.... ಕ್ರಿಕೆಟ್ ಆಡೋಣ .. ನಮ್ಮ ಆಹ್ವಾನ . ಒಳಗೆ ಪಾಂಡುರಂಗಣ್ಣ -- ಅಡುಗೆಯವರು . ಅವರು ಹೊರಗೆ ಬರೋಲ್ಲ .ಇಲ್ಲಿಗೆ ಹೋಟೆಲ್ ಸಿಬ್ಬಂದಿ ವರ್ಗ ಮುಗಿಯಿತು . ಮುನ್ನ ರಜೆ ತಗೊಂಡರೆ ಸುಂದ್ರಯ್ಯನವರ ಏಕಪಾತ್ರಾಭಿನಯ . ಹಾ .... ಒಂದು ಪ್ಲೇಟ್ ಇಡ್ಲಿ ತಾ.... ಎಂದು ಕೂಗಿ ತಾವೇ ಒಳಗೆ ಹೋಗಿ ಇಡ್ಲಿ ತಂದು ಆಮೇಲೆ .... ಏಯ್ ಎಲ್ ಹೋದ್ಯೋ ಮುನ್ನ .. ಇಲ್ಲಿ ಕ್ಲೀನ್ ಮಾಡು .. ಎಂದು ಕೂಗಿ ... ಈ ಮಾಣಿಯೊಂದು... ಹೇಳಿದ್ ಕೆಲಸ ಮಾಡಲ್ಲಾ ......ಎಂದು ಬೈಯುತ್ತ ತಾವೇ ಕ್ಲೀನ್ ಮಾಡುವರು . ಕೆಲಸದವರಿಲ್ಲ ಎಂದು ಯಾರಿಗೂ ತಿಳಿಯೋಲ್ಲ .

ನಾನು ಮುಂಬೈ ಗೆ ಬಂದ ಹೊಸದರಲ್ಲಿ ಊಟ -ತಿಂಡಿಯ ವಿಷಯದಲ್ಲಿ ನನ್ನ ಅನುಭವವನ್ನು ಬರೆಯುತ್ತಿದ್ದೇನೆ . "ಹೊಟ್ಟೆ ತುಂಬಿಸಿಕೊಳ್ಳುವುದು " ನಿಜಕ್ಕೂ ಕಷ್ಟ ಎಂದು ನನಗೆ ಆಗ ತಿಳಿಯಿತು . ಆದರೆ ಗುಣದಲ್ಲಿ ಕಡಿಮೆಯಾದರೂ ಹಣದಲ್ಲಿ ಮುಂಬೈ ದೊಡ್ಡದು .ಮುಂಬಯಿಯಲ್ಲಿ ನನ್ನ ಒಂದು ತಿಂಡಿಯ ಬಿಲ್ಲಿನ ಹಣದಲ್ಲಿ ಕುಂದಾಪುರದಲ್ಲಿ 6 ಮಂದಿ 2 ದಿನ ಹೊಟ್ಟೆ ತುಂಬಾ ತಿನ್ನಬಹುದು . ಈಗ ನೋಡಿ ..... ನಾನು ಮುಂಬಯಿಯ ಪ್ರಸಿದ್ಧ ಪಂಚತಾರಾ ಹೋಟೆಲಿನೊಳಗೆ ಪ್ರವೇಶಿಸಿದ್ದೇನೆ .

ಮಚ್ಚಾ ..... ಇಲ್ಲಿ ಯಾರದ್ದೋ ಮದ್ವೆ ಇರಬೇಕು ಬೇರೆ ಕಡೆ ಹೋಗೋಣ ಎಂದೆನು .ಏಯ್ ಗುಬಾಲ್ ... ಅವ್ನು ಬಾಗಿಲು ತೆಗೆಯುವವನು ಬಾಸಿಂಗ ಹಾಕಿ ನಿಂತಿದ್ದಾನೆ ಅಷ್ಟೆ ..... ಮುಚ್ಕೊಂಡು ಬಾ..... ಬಬ್ಲು ಉಸುರಿದ . ಒಳಗೆ ಹೋಗಿ ಕುಳಿತೆವು . Transperent ಗ್ಲಾಸ್ ನಲ್ಲಿ 2 ಲೋಟ ನೀರು ಬಂತು . ಬರೀ ಮೌನ . ಇವನು ಯಾವುದೋ ಪುಸ್ತಕ ಓದುತ್ತ ಕುಳಿತಿದ್ದಾನೆ . ಲೇ .. ಮನೆಗ್ ಹೋಗಿ ಓದ್ಕೋ ... ಈಗ ಏನಿದೆ ತಿನ್ನೋಕ್ಕೆ ಅಂತ ಕೇಳು ಅಂದೆ. ಅದೇ ಮಾಡ್ತಾ ಇದ್ದೀನಿ ಇದು Menu ಎಂದ . ಉಪ್ಪಿಟ್ಟು -ಅವಲಕ್ಕಿ ಉಂಟಾ ನೋಡು ಎಂದೆನು . ಬಬ್ಲು ಗುರಾಯಿಸಿದ . ನಾನು ಸುಮ್ಮನಾದೆ . ಮಚ್ಚಾ ..... ನಾನ್ ಹೇಳಲಾ ?? ಕೇಳಿದ . ಆಯಿತಪ್ಪ ನೀನೆ ಹೇಳು ಅಂದೆನು. ಅಲ್ವೋ...... Nan ಹೇಳಲಾ Butter Roti ಹೇಳಲಾ ?? ಅಂದ . ನನಗೇನೂ ಗೊತ್ತಿಲ್ಲಪ್ಪ . ನೀನು ನಂಗೆ ಇಡ್ಲಿ -ವಡಾ-ಸಾಂಬಾರ್ ಹೇಳು ಅಂದೆನು . ಮತ್ತೆ starter ಏನು ಹೇಳಲಿ ಅಂದ . ನಾನೇನೂ ಹಳೆ ಲಾರಿ ಇಂಜಿನ್ ಅಲ್ಲ.... ಅದೆಲ್ಲ ಏನೂ ಬೇಡ.... ನಾನು ಯಾವತ್ತು ರೆಡಿ ಇರ್ತೀನಿ ಎಂದೆ... ಹೇಗಿರತ್ತೆ ನೋಡೋಣ ಎಂದು ಒಂದು Veg Manchow Soup ಆರ್ಡರ್ ಮಾಡಿದ . 10 ನಿಮಿಷದ ನಂತರ ಮಾಣಿ ... sorry "WAITER" ಎರಡು ಪಾತ್ರೆಯಲ್ಲಿ ( ಆ ಪಾತ್ರೆಗೆ ಬೌಲ್ ಅಂತಾರಂತೆ ) ಕಂದು ಬಣ್ಣದ ದ್ರವ ತಂದಿಟ್ಟ .

ಲೇ ಏನೋ ಇದು Phenoil ಥರ ಇದೆ ಅಂದೆನು . ಏಯ್ ... ಅದು ಸೂಪು .ಸುಮ್ನೆ ಕುಡಿ ಎಂದ . ಆಯಿತು ಎಂದು Bowl ಎತ್ತಿದೆ . ಲೇ.... ಹಾಗಲ್ಲ ಸ್ಪೂನ್ ನಿಂದ ಸ್ವಲ್ಪ ಸ್ವಲ್ಪ ಕುಡಿಯಬೇಕು ಅಂದನು ..... ಇದೇನು ಜ್ವರದ tonic ಏನೋ ಹಾಗೆ ಕುಡಿಯಕ್ಕೆ ಅಂದೆನು ?? ಅಲ್ವಂತೆ ಅದು Table Manners ಅಂತೆ . ಸರಿ ಎಂದು ಸ್ವಲ್ಪ ಬಾಯಿಗೆ ಹಾಕಿಕೊಂಡೆ . ಅಜ್ಜಿ ನೆನಪಾದಳು . ಸಣ್ಣವನಿರುವಾಗ ಅಜ್ಜಿ ಕಿರಾಥಕಡ್ಡಿ ಕಷಾಯ ಮಾಡಿದ ದಿನ ಮನೆಯಲ್ಲಿ ನಾನು ನಾಪತ್ತೆ . ಬೆಳಿಗ್ಗೆ ಅಜ್ಜಿ ದೇವರ ಪೂಜೆ ಮಾಡುತ್ತಿರಬೇಕಾದರೆ ಹೊರಗೆ ಹೋಗುತ್ತಿದ್ದ ನಾನು ರಾತ್ರಿ ಅಜ್ಜಿ ಮಲಗಿದ ನಂತರ ವಾಪಾಸ್ ಬರುತ್ತಿದ್ದೆ . ಈಗ ಏನು ಹಣೆಬರಹ ನೋಡಿ . ದುಡ್ಡು ಕೊಟ್ಟು ಕಾಷಾಯ ಕುಡಿಯುತ್ತಿದ್ದೇನೆ ಅನ್ನಿಸಿತು . ಆಮೇಲೆ ಅವನು Coconut-rice ಹೇಳಿದ ನನಗೆ ವಡಾ- ಸಾಂಬಾರ್ ಹೇಳಿದ . 15 ನಿಮಿಷದಲ್ಲಿ ನಮ್ಮ ಎದುರು 2 ದೊಡ್ಡ ಪ್ಲೇಟ್ ಬಂತು . ಅರ್ಧ ಗಂಟೆ ನಂತರ ವಡಾ -ಸಾಂಬಾರ್ Coconut Rice ಬಂದಿತು . ವಡಾ ನೋಡಿ ದಂಗಾದೆನು . ಅದಕ್ಕೆ ಭಾರೀ ನಿತ್ರಾಣವಾದಂತಿತ್ತು . ಅದರಲ್ಲಿ ತೂತು ಬಿಟ್ಟರೆ ಮತ್ತೇನೂ ಇರಲೇ ಇಲ್ಲ . ಒಂದು ವೇಳೆ ಶಿಶುನಾಳ ಶರೀಫರು ಆ ವಡಾ ನೋಡಿದ್ದಲ್ಲಿ " ವಡಾವನ್ನು ತೂತೆ ನುಂಗಿತ್ತಾ...." ಎಂದು ಹಾಡುತ್ತಿದ್ದರು . ನಾನು ಒಂದು ಸಲ "ಅಮ್ಮಾ ... ಪ್ಲೀಸ್ ....." ಅಂದರೆ ನನ್ನ ಅಮ್ಮ ಅದಕ್ಕಿಂತ ದೊಡ್ಡ ಕೋಡುಬಳೆ ಮಾಡಿ ಕೊಡುತ್ತಿದ್ದರು . ಅದನ್ನು ಚಮಚದಲ್ಲಿ ತಿನ್ನುವುದೋ ಅಥವಾ saridon ಮಾತ್ರೆ ಥರಾ ನುಂಗಿ ನೀರು ಕುಡಿಯುವುದೋ ತಿಳಿಯಲಿಲ್ಲ . ಮತ್ತೆ ಸಾಂಬಾರ್ ಬೇರೆ ಪಾತ್ರೆಯಲ್ಲಿ . ಅಯ್ಯೋ ವಡೆಗೆ ಸಾಂಬಾರಿನ ಅಭಿಷೇಕ ಮಾಡಬೇಕು . ಆ ಪಾತ್ರೆಯಲ್ಲಿ ವಡಾ ಪೂರ್ತಿ ಮುಳುಗಿರಬೇಕು . ಆಮೇಲೆ ಚಮಚದಿದಂದ ಪಾತ್ರೆಯೊಳಗೆ "ವಡಾ ಶೋಧನೆ " ಮಾಡಿ ತಿನ್ನಬೇಕು . ಇದು ವಡೆ ತಿನ್ನುವ ಶಾಸ್ತ್ರ . ಇರಲೆಂದು ಮನದಲ್ಲೇ ಬೈಯ್ಯುತ್ತಾ ತಿಂದು ಮುಗಿಸಿದೆ . ಇನ್ನು ಅವನ So called Coconut Rice ಹೇಗಿದೆ ಎಂದು ನೋಡಲು ಸ್ವಲ್ಪ ತೆಗೆದುಕೊಂಡೆ . ಹೃದಯದಲ್ಲಿ ಭಕ್ತಿ ತುಂಬಿ ಹರಿಯಿತು . ನಮ್ಮ ಕುಂದಾಪುರದ "ಅಯ್ಯಪ್ಪ ಸ್ವಾಮೀ ಭಕ್ತ ವೃಂದ" ದವರು ಹಂಚುವ ಪಂಚಕಜ್ಜಾಯದಂತಿತ್ತು . ಕಣ್ಣಿಗೆ ಒತ್ತಿಕೊಂಡು ತಿಂದೆನು. ಆಮೇಲೆ ಒಂದು Tea ಒಂದು ಕಾಪಿ sorry.... Coffee ಹೇಳಿದೆವು . 10 ನಿಮಿಷದಲ್ಲಿ ಬಂದಿತು .ಲೋಟ ನೋಡಿ Rotomac ಪೆನ್ನಿನ top ನೆನಪಾಯಿತು . ಒಹ್.... ದೊಡ್ಡ ಹೋಟೆಲ್ ಅಲ್ವಾ ಮೊದಲು sample ಕೊಟ್ಟು ಆಮೇಲೆ ದೊಡ್ಡ ಲೋಟದಲ್ಲಿ coffee ಕೊಡುತ್ತಾರೆ ಅಂದುಕೊಂಡೆ. ಅಲ್ವಂತೆ ಅದೇ full and final ಲೋಟ ಅಂದ. ನಮ್ಮ ಕುಂದೇಶ್ವರ ದೇವಸ್ಥಾನದ ಭಟ್ಟರು ಅದಕ್ಕಿಂತ ಹೆಚ್ಚು ತೀರ್ಥ ಕೊಡುತ್ತಿದ್ದರು . "ಕುಡಿಯುವಾಗ ಶಬ್ದ ಮಾಡಬೇಡ " ಬಬ್ಲು ತಾಕೀತು ಮಾಡಿದ . ಅರೆ .... ಇದೊಳ್ಳೆ ಕತೆಯಾಯ್ತಲ್ಲ .... ಪಾಯಸ ತಿನ್ನುವಾಗ ಕಾಪಿ ಕುಡಿಯುವಾಗ ಸುರ್ರರ್...... ಎಂದು ಶಬ್ದ ಶೃತಿಬದ್ಧವಾಗಿ ಹೊರಡದಿದ್ದರೆ ಅದು ಪಾಯಸ -ಕಾಪಿಗೆ ಅವಮಾನ ಮಾಡಿದಂತೆ . ಕಷ್ಟಪಟ್ಟು ಹೇಗೋ ಸೈಲೆಂಟ್ ಮೋಡ್ ನಲ್ಲಿ ಕುಡಿದು ಮುಗಿಸಿದೆ . ಮತ್ತೆ Tea .... ಹಾಲು ,ಸಕ್ಕರೆ , ಚಾ ಪುಡಿಯ ಒಂದು ಸಣ್ಣ ಚೀಲ ತಂದುಕೊಟ್ಟರು . 25 ರೂಪಾಯಿ ಕೊಟ್ಟಿದ್ದಲ್ಲದೆ ನಾವೇ ಚಾ ಮಾಡಿಕೊಳ್ಳಬೇಕು . ನಮ್ಮ ಸುಂದ್ರಯ್ಯನ ಹೋಟೆಲ್ ನಲ್ಲಿ 2 ರೂಪಾಯಿ ಗೆ 2 ಮೀಟರ್ ಮೇಲಿನಿಂದ "ಹೊಡೆದು" ಕಡಕ್ ಚಾ ಮಾಡಿ ಕೊಡುತ್ತಿದ್ದ . ಆಮೇಲೆ ಬಿಲ್ ಬಂದಿತು . ಬ್ರಿಯಾನ್ ಲಾರಾನ ಟೆಸ್ಟ್ record break ಮಾಡಿತ್ತು. ನನ್ನ ಎದೆ 72 ಕ್ಕೆ ಒಂದೆರಡು ಸೊನ್ನೆ ಸೇರಿಸಿ ಬಡಿಯಲು ಆರಂಭಿಸಿತು .ಕಾಷಾಯಕ್ಕೆ 120 , ವಡಾ ಸಾಂಬಾರ್ 60 ಪಂಚಕಜ್ಜಾಯಕ್ಕೆ 180 ಆಮೇಲೆ ಕಾಪಿ -ಚಾ -ಟಿಪ್ಸು- ಟ್ಯಾಕ್ಸು ಸೇರಿಸಿ 450 ಆಗಿತ್ತು .

ಇದರಿಂದ ಪಾಠ ಕಲಿತ ನಾನು ನಂತರ ಯಾವುದೇ ಹೋಟೆಲ್ ಗೆ ಹೋದರೂ ಮೊದಲು ಮೆನು ಕಾರ್ಡಿನ ಬಲಭಾಗದಲ್ಲಿರುವ ಅಂಕಿ - ಅಂಶಗಳ ಗುಣಾಕಾರ ಮಾಡಿಕೊಂಡು ಆಮೇಲೆ ಆರ್ಡರ್ ಮಾಡುತ್ತಿದ್ದೆ. ಮತ್ತೆ ಕೆಲವು ಹೆಸರು ನೋಡಿ ನಗುವುರೋ ಅಳುವುದೋ ತಿಳಿಯುವುದಿಲ್ಲ . ಮಸಾಲಾ ಪಾಪಡ್ 25/- . ಅಶೋಕ ಹಪ್ಪಳದ ಮೇಲೆ ದೂರದಿಂದ 4 ನೀರುಳ್ಳಿ ,ಟೊಮೇಟೊ ಬಿಸಾಕಿ ತಂದುಕೊಡುತ್ತಾರೆ. ಮತ್ತೆ ಲೆಮನ್ ರೈಸ್ ಅಂತೆ . ದಿಗಿಲಾಗಬೇಡಿ .. ನಿನ್ನೆಯ ಅನ್ನ ಉಳಿದರೆ ಅಮ್ಮ ಚಿತ್ರಾನ್ನ ಮಾಡುವುದಿಲ್ಲವೇ ?? ಇದು ಅದರದ್ದೇ ಅವತಾರ . ಆದರೆ 45/- ಮಾತ್ರ . ಊರಿನಲ್ಲಿ ಚಪಾತಿಗೂ ಭಾಜೀಗೂ , ಪೂರಿ ಕುರ್ಮಾ ಕ್ಕೂ Registered Marriage ಆಗಿದೆ . ಚಪಾತಿ,ಪೂರಿ ಹೇಳಿದ್ರೆ ಅದರೊಟ್ಟಿಗೆ ಭಾಜೀ ಕುರ್ಮಾ ಫ್ರೀ. ಇಲ್ಲಿ ಹಾಗಲ್ಲ ಚಪಾತಿ ರೋಟಿ ಬ್ರಹ್ಮಚಾರಿಗಳು . ಅದಕ್ಕೆ ಮಸಾಲೆ seperate ಹೇಳಬೇಕು .ರೋಟಿಯ ಸ್ಥಿತಿಯಂತೂ ಮಳೆಗಾಲದಲ್ಲಿ ಕಳಪೆ ಕಾಮಗಾರಿಯ ರಸ್ತೆಯಂತೆ ಇರುತ್ತದೆ . ಪನ್ನೀರ್ ಗೆ ಇದ್ದ ಊರಿನ ಹೆಸರನ್ನೆಲ್ಲ ಸೇರಿಸಿ ಇವರ ಮಸಾಲೆಗಳು . ಹೈದ್ರಾಬಾದಿ,ಕೊಲ್ಲಾಪುರಿ , ಕಾಶ್ಮೀರಿ , ಪಂಜಾಬಿ , ಮತ್ತೆ ಅದರಲ್ಲೂ ಟಿಕ್ಕಾ, ಟುಕ್ಕ , ಹಂಡಿ ಹುಂಡಿ ಎಲ್ಲ ಸೇರಿಸಿ ಮತ್ತಿಷ್ಟು ಬಗೆ . ಉತ್ತರಭಾರತದಲ್ಲಿ ಹೋಟೆಲಿನಲ್ಲಿ ವೆಜ್ ಕೋಟೇಶ್ವರಿ , ದಾಲ್ ಗಂಗೊಳ್ಳಿ , ಪನ್ನೀರ್ ಬೈಂದೂರೀ ಎಲ್ಲ ಚಾಲ್ತಿಯಲ್ಲಿವೆಯೋ ಏನೋ..?? Menu ನ ಬಲಭಾಗದಲ್ಲೋ ಒಂದಂಕಿಯ ಸಂಖ್ಯೆ ಕಾಣಸಿಗದು . ಆಮ್ಲೆಟ್ ಪಕ್ಕದಲ್ಲಿ 60 /- ಬರೆದದ್ದನ್ನು ನೋಡಿ waiter ನನ್ನು ಕರೆದು "ಏನಪ್ಪಾ ... ಇಲ್ಲಿ ಆಮ್ಲೆಟ್ ಗೆ ಯಾವುದರ ಮೊಟ್ಟೆ ಹಾಕುತ್ತಾರೆ ಕೇಳಿದೆ . ಕೊಳೀದು ಸಾರ್ .. ಯಾಕೆ ??ಎಂದ . ಅಲ್ಲಪ್ಪಾ ಇಲ್ಲಿ 60 /- ಬರೆದಿದ್ದಾರೆ. ನಾನು ಉಷ್ಟ್ರ ಪಕ್ಷಿಯ ಮೊಟ್ಟೆ ತಿನ್ನುವುದಿಲ್ಲ ಅದಕ್ಕೆ ಕೇಳಿದೆ ಎಂದೆ .

ಒಮ್ಮೆ ಹಣ ಉಳಿಸುವ ಯತ್ನದಲ್ಲಿ ಸಂಖ್ಯಾಶಾಸ್ತ್ರ ಲೆಕ್ಕ ಹಾಕಿ ಕಡಿಮೆ ಹಣದ "ದಾಲ್ ತರ್ಡ್ ಕ್ಲಾಸ್ "( ದಾಲ್ ತಡ್ಕಾ ) ಆರ್ಡರ್ ಮಾಡಿದೆನು . ಹಿತ್ತಾಳೆ ಬಣ್ಣದ ಬಾಲ್ದಿಯಲ್ಲಿ ತೊವ್ವೆ ತಂದು ಕೊಟ್ಟರು . ಬಾಲ್ದಿಯೆಂದರೆ ... ಚಿಕ್ಕ ಮಕ್ಕಳು ಡ್ರಾಯಿಂಗ್ ಬುಕ್ ನಲ್ಲಿ ಚಿತ್ರ ಬಿಡಿಸುತ್ತಾರಲ್ಲ ಅಂಥ typical shape-size ನಲ್ಲಿತ್ತು . ಊಹಿಸಲು ಕಷ್ಟವಾಗುತ್ತಿದೆಯೇ ?? ಸರಿ .... ಹಮ್ .... ಹಾ .... ಸಾರ್ವಜನಿಕ ಶೌಚಾಲಯಗಳಲ್ಲಿ ಇರುತ್ತದಲ್ಲ .... ಹಾ ... ಅದೇ shape . ಕೆಳಗಡೆ ತೂತು ಇರಲಿಲ್ಲ ಅಷ್ಟೆ . ಕಷ್ಟಪಟ್ಟು ತಿಂದೆನು. ರಾತ್ರಿ ನಿದ್ದೆ ಬರಲಿಲ್ಲ . ಸೊಳ್ಳೆ ಪರದೆಯ ಸಣ್ಣ ಸಂದಿಯೊಳಗಿಂದ ಸೊಳ್ಳೆಗಳು ಶಿಸ್ತಿನ ಸಿಪಾಯಿಗಳಂತೆ march-fast ಮಾಡಿ ಒಳಗೆ ಬಂದು DTS ಸೌಂಡ್ ಎಫೆಕ್ಟ್ ನೊಂದಿಗೆ ಗುಂಯ್ ಗುಡುತ್ತಿವೆ . ಗುಡ್ ನೈಟ್ ನ liquid evaporator ನ್ನು perfume ಥರ ಬಳಸಿಕೊಳ್ಳುತ್ತಿವೆ . ಹೊಟ್ಟೆಯಲ್ಲಿ ದಾಲ್ ನ ಅಸಹಕಾರ ಚಳುವಳಿ ಚಾಲ್ತಿ . ಟಾಯ್ಲೆಟ್ ಗೆ ಹತ್ತಿರವಿರುವ ರೂಮಿಗೆ ಶಿಫ್ಟ್ ಆದೆನು . 24 ಗಂಟೆ ನನ್ನ ಕೈ ಒಣಗಲಿಲ್ಲ . ಮರುದಿನ ಹೋಟೆಲ್ ಗೆ ಹೋಗಿ "ಅಪ್ಪಾ ನಿಮ್ಮ ಹೋಟೆಲ್ owner ಎಲ್ಲಿದ್ದಾರೆ ಕೇಳಿದೆ . ಪಕ್ಕದ ಹೋಟೆಲಿಗೆ ಊಟಕ್ಕೆ ಹೋಗಿದ್ದಾರೆ ಸರ್ . ಎಂಬ ಉತ್ತರ ಬಂತು . ಪಕ್ಕದ ಹೋಟೆಲಿನಲ್ಲಿ "Our owner eats Here only " ಎಂಬ ಬೋರ್ಡ್ ನೋಡಿ ಸಂತೋಷವಾಯಿತು . ಅಂತೂ ನಾನು ಬಯಸಿದಂಥ ಹೋಟೆಲ್ ಸಿಕ್ಕಿತು ಎಂಬ ಸಂತೋಷದಿಂದ waiter ಬಳಿ ನಿಮ್ಮ Owner ಎಲ್ಲಿದ್ದಾರೆ ಎಂದು ಕೇಳಿದೆನು . ಇವತ್ತು ಬಂದಿಲ್ಲ ಸಾರ್ .... 3 ದಿನದಿಂದ ಸಿಕ್ಕಾಪಟ್ಟೆ ಹೊಟ್ಟೆನೋವು ಸಾರ್ ಅವ್ರಿಗೆ .... ಎಂಬ ಉತ್ತರ ಕೇಳಿ ಬದುಕಿದೆಯಾ ಬಡಜೀವವೇ ಎಂದು ಅಲ್ಲಿಂದ ಕಾಲಿಗೆ ಬುದ್ದಿ ಹೇಳಿದೆ .

ಸರೀ ... ಒಳ್ಳೆ ಅಡುಗೆ ಮಾಡುವ ಹೆಂಡತಿಯಾದರೂ ಸಿಗಲೆಂದು ಹತ್ತಿರದ ರಾಮ ಮಂದಿರಕ್ಕೆ ಹೋಗಿ ದೇವರಲ್ಲಿ ಪ್ರಾರ್ಥಿಸಿದೆನು . ರಾಮನೋ " ನೋಡಪ್ಪ ಹೆಂಡತಿ ಹುಡುಕಿ ಕೊಡುವುದರಲ್ಲಿ ಅವನು expert , ನನ್ನ ಹೆಂಡತಿಯನ್ನು ಅವನೇ ಹುಡುಕಿ ಕೊಟ್ಟಿದ್ದು ಎಂದು ಹನುಮಂತನ ಬಳಿ ಕಳಿಸಿದನು. ಹನುಮಂತನ ಬಳಿ ಬಂದು "ದೇವಾ ... ಒಳ್ಳೆಯ ಗುಣದ, ನನ್ನನ್ನು ಅರಿತು ನಡೆಯುವ , ಒಳ್ಳೆ ಅಡುಗೆ ಮಾಡುವ ಹೆಂಡತಿಯನ್ನು ಕರುಣಿಸು ಎಂದು ಬೇಡಿಕೊಂಡೆನು " . ಲೇ ನಿಮ್ಮಜ್ಜಿ .... ಅಂಥ ಹುಡುಗಿ ಇದ್ದಿದ್ರೆ ನಾನ್ಯಾಕೋ ಬ್ರಹ್ಮಚಾರಿ ಆಗಿ ಇರ್ತಿದ್ದೆ ?? ಎಂಬ ಅಶರೀರವಾಣಿ ಮೊಳಗಿತು . ತಣ್ಣೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡು ಮನೆಗೆ ಹೋಗಿ ಅಮ್ಮ ಮಾಡಿದ ಗಂಜಿ - ಉಪ್ಪಿನಕಾಯಿ ತಿಂದು ಮಲಗಿದೆನು .

--------------------------------ವಿಕಟಕವಿ --------------------------------

Comments

Ashwin said…
Hey Fantastic, superb .. keep Writing more , but do not write this lengthy , i am drowsy now :)
deshpande said…
maga - ultimate kano...

by 2 KAAAPIIIII :) too good
Kaustubh S said…
leeee... Jasti kachbeedvo.. Aadru tumba chenaagittu:)..
Hema Powar said…
ನಿಮ್ಮ ಹಾಸ್ಯ ಪ್ರಜ್ಞೆ ಮೆಚ್ಚಿದೆ ಸುಮಂತ್. ಬರಹ ಚೆನ್ನಾಗಿದೆ ವಿಕಟಕವಿ ಎಂಬ ಹೆಸರು ನೀವೆ ಇಟ್ಟುಕೊಂಡಿದ್ದ ಅಥವಾ ನಿಮ್ಮ ಹಾಸ್ಯ ಪ್ರವೃತ್ತಿಕಂಡು ಗೆಳೆಯರು ಕರೆಯ ಹತ್ತಿದ್ದ?
Unknown said…
helloo sumanth full pursothaaaaaa
bombay..leeeeeee
Super ...Guru..How get these ideas? Super ....
Thats why I tell u

Reason why never visit a 5* Hotel

Question : "What would you like to have ..Fruit juice, Soda, Tea, Chocolate, Milo, or Coffee?"

Answer: "tea please"

Question : " Ceylon tea, Herbal tea, Bush tea, Honey bush tea, Ice tea or green tea ?"

Answer : "Ceylon tea "

Question : "How would you like it ? black or white ?"

Answer: "white"

Question: "Milk, Whitener, or Condensed milk ?"

Answer: "With milk "

Question: "Goat milk, Camel milk or cow milk"

Answer: "With cow milk please.

Question: " Milk from Freeze land cow or Afrikaner cow?"

Answer: " Um, I'll take it black. "

Question: " Would you like it with sweetener, sugar or honey?"

Answer: "With sugar"

Question: " Beet sugar or cane sugar ?"

Answer: "Cane sugar "

Question:" White , brown or yellow sugar ?"

Answer: "Forget about tea just give me a glass of water instead."

Question: "Mineral water or still water ? "

Answer: "Mineral water"

Question: "Flavored or non-flavored ?"

Answer: "I'll rather die of thirst

Popular posts from this blog

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ