Skip to main content

ರಜತ ಪರದೆಯ ಹಿಂದೆ

******ಏನು ?? ....ಏನು ??..... ಏನು ??.....********
(ನನ್ನ ಕುತ್ತಿಗೆ 0-180 degree 3 ಸಲ ತಿರುಗಿದೆ )
ನಾನು ಬರೆದ ಲೇಖನ ನೀವು ಓದುವುದಿಲ್ಲವಾ ??
ಇಷ್ಟು ದಿನ ನನ್ನ ಸ್ನೇಹಿತರಾಗಿದ್ದಕ್ಕೆ ಒಳ್ಳೆ ಪ್ರಶಸ್ತಿ ಸಿಕ್ಕಿತು .....
Tension ತೆಗೊಬೇಡಿ .... ಇದು ಕನ್ನಡ ಧಾರಾವಾಹಿ ನೋಡಿ ಕಲಿತಿದ್ದು ಅಷ್ಟೆ .

ಕಲ್ಯಾಣರೇಖೆ ,ಕುಂಕುಮಭಾಗ್ಯ ,ಕಾದಂಬರಿ , ನಾಕುತಂತಿ ,ಶುಭಲಗ್ನ ,ರಂಗೋಲಿ ,ಸುಕನ್ಯಾ ,ಸುಮತಿ ,ಮಾಂಗಲ್ಯ , ಪಾರ್ವತಿ (ನಿಮ್ಮ ಮನೆ ಮಗಳು ), ಗಂಗೋತ್ರಿ ,ಕಸ್ತೂರಿ ನಿವಾಸ..... ಮತ್ತೆ ಕೊನೆಗೆ ಬುಸ್ಸ್ಸ್ ...."ನಾಗಮ್ಮ " .ಇಷ್ಟು ಧಾರಾವಾಹಿಯಲ್ಲಿ ಪ್ರತಿದಿನ ಒಂದೇ ಒಬ್ಬ ನಟ ಅಥವಾ ಒಬ್ಬ ವೀಕ್ಷಕ ಖಂಡಿತ ಸಾಯುತ್ತಾನೆ . ಅದು ಕೊನೆಗೆ Crime Diary ಯಲ್ಲಿ ಬರುತ್ತದೆ .

ಹಮ್.... ಶುರು ಮಾಡೋಣ . ಮೊದಲಿಗೆ "Title song ". ಇದು ತುಂಬಾ important . ಇದರ ರಚನೆ ತುಂಬಾ ಸುಲಭ . ಈ ಕೆಳಗಿನ ದೃಶ್ಯಗಳು ಇದ್ದೆ ಇರುತ್ತವೆ .
1) ಒಬ್ಬಳು ಹುಡುಗಿ ಶಾಲು ಹಿಡಿದುಕೊಂಡು ಗದ್ದೆಯಲ್ಲಿ ಓಡುತ್ತಾಳೆ.
2)ಹುಡುಗಿಯು ಮದರಂಗಿ ಹಚ್ಚಿದ ಕೈಯ್ಯಲ್ಲಿ ಹಣತೆ ಆರಿ ಹೋಗುವುದನ್ನು ತಡೆಯುತ್ತಾಳೆ.
3) ಹೋಳಿಯ ದೃಶ್ಯ ಹುಡುಗ ಹುಡುಗಿಗೆ ಪಿಚಕಾರಿ ಹೊಡೆಯುತ್ತಾನೆ .
4) ಹುಡುಗಿಗೆ ಅವಳ ತಾಯಿ ಕಪಾಳಕ್ಕೆ ಬಾರಿಸುತ್ತಾಳೆ.
5)ಕೊನೆಗೆ ಹುಡುಗಿ 32 ಹಲ್ಲು ತೋರಿಸಿ ನಗುತ್ತಾಳೆ ಅದರ ಪಕ್ಕ ಧಾರಾವಾಹಿಯ ಹೆಸರು ಬರುತ್ತದೆ .

ಸುಮತಿ ,ಸುಕನ್ಯ , ಪಾರ್ವತಿ ಇದ್ದ ಹುಡುಗಿಯರೆಲ್ಲರ ಹೆಸರಿನ ಧಾರವಾಹಿ . ಅದಕ್ಕೆ ನಿಮ್ಮ ಮನೆ ಮಗಳು,
ಸೊಸೆ ,ತಂಗಿ ,ನಾದಿನಿ ಎಂದು tag line ಗಳು . ಇನ್ನು ಪೌರಾಣಿಕ ಧಾರಾವಾಹಿಗಳು ಕೃಷ್ಣ ,ರಾಮ ,ಈಶ್ವರ ,ಗಣಪತಿ ,ಹನುಮಂತ ಇವರು most happening ದೇವರುಗಳು . ಆಮೇಲೆ ನಾರದ, ಕರ್ಣ , ಕುಂತಿ , ಅರ್ಜುನ ಕೆಲವು ಚಾನೆಲ್ ಗಳಲ್ಲಿ . ಇನ್ನು next Generation ಧಾರಾವಾಹಿಗಳು ಹೀಗಿರಬಹುದು
1) ಗಣೇಶ (ನಿಮ್ಮ ಮನೆ ಅಳಿಯ )
2)ಮಹಾಬಲಿ ಶಿಖಂಡಿ .
3)ಬೊಬ್ಬರ್ಯ ಮಹಾಪುರಾಣ .

ಮತ್ತೆ ಕಥೆಗಳೋ ಕೇಳಬೇಡಿ . ವ್ಯಾಸಮಹರ್ಷಿಗಳು ಧರೆಗಿಳಿದು ಬಂದರೆ ಅವಾಕ್ಕಾದಾರು . ಸ್ವತಂತ್ರ ಭಾರತದಲ್ಲಿ 250 ಮಂದಿ ವ್ಯಾಸರು , ವಾಲ್ಮೀಕಿಗಳು ಹುಟ್ಟಿದ್ದಾರೆ. ಅವನ ಜೀವನದಲ್ಲಿ ಅವನಿಗೆ ಗೊತ್ತಿರದ ವಿಷಯಗಳನ್ನು ಧಾರಾವಾಹಿಯಲ್ಲಿ ನೋಡಿ ಕೃಷ್ಣ ತುಂಬಾ tension ತೆಗೊಂಡಿರಬಹುದು . ಕಳೆದ 8 ವಾರಗಳಿಂದ ಕೃಷ್ಣ ಕುಂಟಾಬಿಲ್ಲೆ ಆಡುವುದು ,ಮೊಸರಿಗೆ ಕಲ್ಲು ಹೊಡೆಯುವುದು ಬಿಟ್ಟರೆ ಬಿಟ್ಟರೆ ಬೇರೆ ಏನೂ ಮಾಡಲೇ ಇಲ್ಲ . ಬಾಲಕೃಷ್ಣನ ತುಂಟಾಟಕ್ಕಿಂತ ಅವನ ಅಪ್ಪನ ನಖರಾಗಳೇ ಹೆಚ್ಚು . ಮೊನ್ನೆ ಒಂದು ಪೌರಾಣಿಕ ಧಾರಾವಾಹಿ ನೋಡುತ್ತಿದ್ದೆ . "ಮಚ್ಚಾ .. ಕರ್ಣ ತುಂಬಾ ಚೆನ್ನಾಗಿ ನಟನೆ ಮಾಡಿದ್ದಾನೆ ಎಂದು ಹೇಳಿದೆ " . ಎಲ್ಲರೂ ನಗಲು ಶುರುಮಾಡಿದರು . ನಡೆಯುತ್ತಿದ್ದದ್ದು ರಾಮಾಯಣ ಅವನು ಹನುಮಂತ , ಕರ್ಣ ಅಲ್ಲ ಎಂದು ನನಗೆ ಆಮೇಲೆ ತಿಳಿಯಿತು.ಮರುದಿನ ಆ ಧಾರಾವಾಹಿ ಮತ್ತೆ ನೋಡಿದೆ . ಅಯ್ಯೋ ದೇವರೇ ...... ಒಂದೂವರೆ ಅಡಿ ಉದ್ದದ ಬಾಲ ಬಿಟ್ಟರೆ ಹನುಮಂತನಿಗೂ ಆ ನಟನಿಗೂ ಯಾವ ಹೋಲಿಕೆ ಇರಲಿಲ್ಲ . ವಜ್ರಕಾಯದ ಹನುಮಂತ Dieting ಶುರು ಮಾಡಿರಬೇಕು. ತುಂಬ ಸ್ಲಿಮ್ ಆಗಿದ್ದ .ಮತ್ತು ಮುಖದ Plastic surgery ಮಾಡಿಸಿಕೊಂಡಿರಬೇಕು Full Dude ಆಗಿದ್ದ .

ಆಲಿಗೆ ಉಳಿ ಇಂಡುವುದನ್ನು ಕೇಳಿದ್ದೀರಾ ?? ಕನ್ನಡ ಧಾರಾವಾಹಿಗಳಲ್ಲಿ ಮಾಡುತ್ತಾರೆ . ವಿಕ್ರಮಾದಿತ್ಯ ಎಂಬ ಹೆಸರಿನ ವ್ಯಕ್ತಿಯನ್ನು ವಿಕ್ಕಿ ,ಆದಿ ,ವಿಕ್ರಮ್ ಎಂದು ಕರೆಯುವುದು ಕೇಳಿರಬಹುದು ಆದರೆ ಇಲ್ಲಿ ಅವನನ್ನು ವಿಕ್ಸ್ ಎಂದು ಕರೆಯುವಾಗ ನಾವು ಅಮೃತಾಂಜನ್ ಪಕ್ಕದಲ್ಲಿ ಇಟ್ಟುಕೊಳ್ಳಬೇಕು. ದೆವ್ವದ ಧಾರಾವಾಹಿಗಳನ್ನು ನೋಡಿ ಚಿಕ್ಕ ಮಕ್ಕಳೂ ಹೆದರುವುದಿಲ್ಲ . 3cm ತ್ರಿಜ್ಯದ ಕುಂಕುಮ ಮತ್ತು ಬಿಳಿ ಸೀರೆ ಉಡುವುದು ಬಿಟ್ಟರೆ ಬೇರೆ ಯಾವ ತಂತ್ರಗಳೂ ಇವರಿಗೆ ಗೊತ್ತೇ ಇಲ್ಲ . ನಾಯಕನಿಗೆ ನಾಯಕಿ ಕುಂಕುಮದ ತಟ್ಟೆ ತೆಗೆದುಕೊಂಡು ಬರುತ್ತಿದಬೇಕಾದರೆ ಕಣ್ಣು ನೆತ್ತಿ ಮೇಲೆ ಶಿಫ್ಟ್ ಆಗುತ್ತದೆ . 3 ಎಪಿಸೋಡ್ ನಷ್ಟು ಸಮಯ ನಾಯಕ ನಾಯಕಿಗೆ ಢಿಕ್ಕಿ ಹೊಡೆದು ನಾಯಕಿಯ ಮೇಲೆ ಬೀಳುತ್ತಾನೆ .

ಲಕ್ಷಾಂತರ ರುಪಾಯಿ ಹಾಕಿ ಧಾರಾವಾಹಿ ತೆಗೆಯುವ ನಿರ್ಮಾಪಕರಿಗೆ ನಾಯಕಿಯ ಶಾಲಿಗೆ ಒಂದು safety pin ಕೊಡಲಿಕ್ಕೆ ಆಗುವುದಿಲ್ಲವೇ ?? ಜೋರಾಗಿ ಗಾಳಿ ಬೀಸಿ ಆಕೆಯ ಶಾಲು ಗೋಳಿಮರದ ತುದಿಯಲ್ಲಿ ಸಿಕ್ಕಿ ಬೀಳುತ್ತದೆ ಮತ್ತು ನಾಯಕ 4 ಎಪಿಸೋಡ್ ಕಾಲ ಮರ ಹತ್ತಿ ಶಾಲು ತೆಗೆದುಕೊಂಡು ಬರುತ್ತಾನೆ. ಆಗ ಹಿನ್ನೆಲೆಯಲ್ಲಿ ದೇವಾನಂದ್ ಕಾಲದ ಒಂದು ಹಾಡು ಗುನುಗುತ್ತಿರುತ್ತದೆ . ಮುಂದೆ ನಾಯಕ ನಾಯಕಿಗೆ ಮನಸ್ತಾಪ ಬಂದಾಗ ಈ ದೃಶ್ಯ photo negetive ಥರ 25 ಬಾರಿ repeat ಆಗುತ್ತದೆ . ಮತ್ತೆ ಅಪ್ಪಿ ತಪ್ಪಿ ಎಲ್ಲಾದರೂ ನಾಯಕಿ ಸತ್ತರೆ tension ತೆಗೆದುಕೊಳ್ಳಬೇಡಿ . ಅವಳು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮರಳಿ ಬರುತ್ತಾಳೆ.

ಇದು ರಜತ ಪರದೆಯ ಕಥೆಯಾದರೆ ದೊಡ್ಡ ಪರದೆಯ ಕಥೆಯೇ ಬೇರೆ . ಬೆಂಗಳೂರಿನ ಪ್ರತಿ ಗಲ್ಲಿಯಲ್ಲಿ ಒಬ್ಬ ಒಬ್ಬ ನಾಯಕ ಅಥವಾ ನಾಯಕಿ ಸಿಗುತ್ತಾರೆ . ಕನ್ನಡ ಚಲನಚಿತ್ರ ನೋಡುವಾಗ ಈ ಅಂಶಗಳನ್ನು ನೆನಪಿಟ್ಟುಕೊಳ್ಳಿ .
1) ನಾಯಕ ನಾಯಕಿಯನ್ನೇ ಮದುವೆಯಾಗುತ್ತಾನೆ .
2)ಸಾಹಸ ದೃಶ್ಯ ಗಳಲ್ಲಿ ನಾಯಕನೇ ಗೆಲ್ಲುತ್ತಾನೆ .ಗೂಂಡಾಗಳೋ ಒಮ್ಮೆಲೇ ಮುಗಿಬೀಳುವುದಿಲ್ಲ, ಶಿಸ್ತಿನ ಸಿಪಾಯಿಗಳಂತೆ ಸರದಿಯಲ್ಲಿ ಬರುತ್ತಾರೆ . .ಒಬ್ಬ ಪೆಟ್ಟು ತಿನ್ನುತ್ತಿರಬೇಕಾದರೆ ಇನ್ನೊಬ್ಬ shirt ನ ಕಾಲರ್ ಸರಿ ಮಾಡಿಕೊಳ್ಳುವುದನ್ನು ನೋಡಿದ್ದೇನೆ . ನಾಯಕ ಮುಟ್ಟಿದರೆ ಸಾಕು ಹಾ sss ಫ್ ...ಹಾ sss ಫ್ ...ಹಾ sss ಫ್ , ಯೀ ... ಯೀ ...ಯೀ ಎಂದು matrix effect ನೊಂದಿಗೆ ಮೂರು ಪಲ್ಟಿ ಹೊಡೆದು ಬೀಳುತ್ತಾರೆ . ನಾಯಕನಿಗೆ ರಕ್ತದ outlet port ಹಣೆಯಲ್ಲಿ ಮಾತ್ರ ಇದೆ ಬೆನ್ನು ಭುಜ ಕಾಲು ಸೊಂಟ ಎಲ್ಲಿ ಪೆಟ್ಟು ಬಿದ್ದರೂ ರಕ್ತ ಹಣೆಯಿಂದ ಮಾತ್ರ ಬರುತ್ತದೆ ಆಗ ನಾಯಕಿ ಓಡಿ ಬಂದು ತನ್ನ ಕಾಂಜೀವರಂ ಸೀರೆ ಹರಿದು ಅವನ ಹಣೆಗೆ ಪಟ್ಟಿ ಕಟ್ಟುತ್ತಾಳೆ.
3)ನಾಯಕ ಮತ್ತು ನಾಯಕಿ ಸಮುದ್ರಕ್ಕೆ ಹಾರಿದರೂ ಅಲ್ಲಿ ಸೊಂಟಕ್ಕಿಂತ ಹೆಚ್ಚು ಆಳದ ನೀರು ಇರುವುದಿಲ್ಲ .
4)ನಾಯಕ ನಾಯಕಿಯರ ನಡುವೆ ಪ್ರೇಮಾಂಕುರವಾಗುವಾಗ ಒಂದು ಹಾಡು ಇರುತ್ತದೆ .
5)ಚಿತ್ರದ ಕೊನೆಯಲ್ಲಿ ಖಳನಾಯಕ ನಾಯಕನಿಗೆ ಹೊಡೆದ ಗುಂಡಿಗೆ ಖಳನಾಯಕನ ತಾಯಿ ಅಡ್ಡ ಬರುತ್ತಾಳೆ ಮತ್ತು ಖಳನಾಯಕನಿಗೆ ಜ್ಞಾನೋದಯವಾಗುತ್ತದೆ .

ನಮ್ಮ ವೈದ್ಯಕೀಯ ವಿಜ್ಞಾನ ಎಷ್ಟು ಮುಂದೆ ಹೋದರೆ ಏನಂತೆ ??ಒಬ್ಬಳು ನಾಯಕಿಯ ,ನಾನು ನೋಡಿದ 8 ಚಲನಚಿತ್ರಗಳಲ್ಲಿ ಎಂಟೂ ಚಿತ್ರಗಳಲ್ಲಿ ಅವಳು ಗರ್ಭಿಣಿ ಆಗಿದ್ದಾಳೆ ಆದರೆ ಒಂದರಲ್ಲೂ ಸಸೂತ್ರ ಬಾಣಂತನ ಆಗಿದ್ದಿಲ್ಲ . ಇನ್ನು ಹಾಸ್ಯ ನಟರೋ .... ಅವರನ್ನು ನೋಡಿ ನಗಬೇಕೆ ವಿನಃ ಅವರ ಹಾಸ್ಯಕ್ಕೆ ಅಳು ಬರುತ್ತದೆ . ಆದರೆ ಏನೇ ಹೇಳಿ theatre ಗಳಲ್ಲಿ ಒಂದೂ ದಿನ ಓಡದ ಚಿತ್ರ 2 ತಿಂಗಳ ನಂತರ " ಮೊತ್ತ ಮೊದಲ ಬಾರಿಗೆ ಸೂಪರ್ ಹಿಟ್ " ಚಲನಚಿತ್ರವಾಗಿ ದೂರದರ್ಶನದಲ್ಲಿ ಬರುತ್ತದೆ . ಟಾಕೀಸಿನಲ್ಲಿ ನೋಡಿದ್ದರೂ ಮತ್ತೆ ಅದನ್ನು ದೂರದರ್ಶನದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಜಾಹೀರಾತನ್ನೂ ಬಿಡದೆ ನೋಡುತ್ತಾನೆ. ನಾನೂ ಅಷ್ಟೆ . ಒಹ್ ... 8:30 .....ನನ್ನ ಧಾರಾವಾಹಿ ಶುರುವಾಯಿತು .... ಮತ್ತೆ ಸಿಗೋಣ .. ಸರೀನಾ ??

================================ವಿಕಟಕವಿ =================

Comments

Hema Powar said…
ಹೆಸರಿಗೆ ತಕ್ಕ ಹಾಗೆ ನೀನು ವಿಕಟಕವಿನೇ, ಒಳ್ಳೆ ಪಂಚ್ ಗಳು. ಚೆನ್ನಾಗಿದೆ ಬರಹ ಇಷ್ಟವಾಯ್ತು :)
ಚಕೋರ said…
ಹಿಂದಿನ ಜನ್ಮದಲ್ಲಿ ಯಾರ ಆಸ್ಥಾನದಲ್ಲಿದ್ದಿರಿ ಕವಿಗಳೇ?;)
Unknown said…
finally.........article odo...bhagya ivatu bantu.....
its toooooooo good........
keep going....
Anonymous said…
Hi Brother,

Too good ya...Keep it going.

Consult me if you need any help in this regard!!

Truly your's
Vasanthanna :-)
Unknown said…
along with all other scenes u mentioned there will also be a court scene which u forgot
Anonymous said…
:-)

Popular posts from this blog

ನ್ಯಾನೋ ಕಥೆಗಳು.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು . 2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!. 3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!! 4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು . 5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು . 6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು . 7) ಮಾರುಕಟ್ಟೆ...

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು...

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿವಿಲ್ಲ ಬಿಡೇ... ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು..... ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು. ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು. ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................  ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ. ರೀssssssssss......... ಮತ್ತೊಮ್ಮೆ ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು. ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹ...