Skip to main content

WELCOME TO KUNDAPUR !!!!!! - PART-III



"ಹ್ಜಬ್ದ್ಸ್ಕ್ಫ಼್ಜಒಇಗ್ತಿಎಬ್ಗ್ಕ್ಜ್ಬ್ದ್ವ್ವಿಹ್ಗಿದ್ಕ್ವ್ಶ್ದ್ಪ್ಫ಼್ವೆಒಗ್[ವ್ಪೆಗ್ಸ್ದ್ಜ್ಗ್ವ್೦ಗ್[ವ್ಜ್ಗ್ಸ್ದ್ಬ್ಲ್ವ್[ಒಸ್ರ್ಗ್"

ಏನು ?? ಅರ್ಥ ಆಗಲಿಲ್ವಾ ??ಸಂತೆಯ ಗೌಜಿ ಮಾರಾಯ್ರೆ... ನನಗೂ ಸರಿಯಾಗಿ ಕೇಳಿಸುತ್ತಿಲ್ಲ. ಸ್ವಲ್ಪ ಹತ್ತಿರ ಹೋಗಿ ಕೇಳುವುದು ಒಳ್ಳೆಯದು. ಆಮೇಲೆ ಪಕ್ಕದಲ್ಲಿ ಕುಂಬಳಕಾಯಿ ಮಾರುತ್ತಿರುವವನ ಬೆಲೆ ಕೇಳಿ ಸೇಬು ಮಾರುವವನ ಹತ್ತಿರ ಬಂದು " ಎಂತದು ??? ಈಗ ಎಂಟು ರುಪಾಯಿ ಕಿಲೋ ಅಂತ ಬೊಬ್ಬೆ ಹಾಕಿದ್ರಿ" ಎಂದೆಲ್ಲ ಹೇಳಿದರೆ ಧರ್ಮದೇಟು ಬೀಳುವುದು ಖಂಡಿತ. "ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕಂಜಿದೊದೆಂತಯ್ಯ" ಎಂದು ದಾಸರು ಬರೆಯುವಾಗ ಅವರು  ಕುಂದಾಪುರದಲ್ಲೇ ಇದ್ದರೆಂದು ಕಾಣುತ್ತದೆ. ಸಂತೆಯೊಳಗೆ ಯಶಸ್ವಿಯಾಗಿ ವ್ಯಾಪಾರ ಮಾಡಿ ಬಂದರೆ ಅವನು
ಅರಿಯದೆ ಒಂದು ಅವಧಾನ ಕಾರ್ಯಕ್ರಮ ಮಾಡಿ ಬಂದಂತೆ







ನೀವೇ ನೋಡಿ. ಒಂದು ವೇಳೆ ನಿಮಗೆ ಸೌತೇಕಾಯಿ ತೆಗೆದುಕೊಳ್ಳಬೇಕೆಂದುಕೊಳ್ಳಿ.............

ನಿಮ್ಮದು ಒಂದೇ ಪ್ರಶ್ನೆ.... ಹೋಯ್ ಸೌತೇಕಾಯ್ ಹೇಂಗ್ ಮಾರ್ರೆ..............
ಉತ್ತರಗಳು---
ಅಲ್ಲ ಲೋರಿ ಅನ್ ಲೋಡ್ ಆತಿತ್ತ ಮಾರ್ರೆ........ ಕಳ್ಸಿ ಕೊಡ್ತೆ...  (ಭಟ್ಕಳದಿಂದ ಬಂದ ಬಟಾಟೆ ವ್ಯಾಪಾರಿ ಮೊಬೈಲಿನಲ್ಲಿ )
ಮುಂದಿನ್ ವಾರ ಕೊಡ್ತೆ ಸಾವ್ಕಾರ್ರೆ... ಎಂತ ಓಡಿ ಹೋತ್ನಾ ?? ( ವ್ಯಾಪಾರ ಮುಗಿದು ದುಡ್ಡು ಕೊಡುವಾಗ ಒಂದು ನೂರು ರುಪಾಯಿ ಕಡಿಮೆ ಕೊಟ್ಟ ಗ್ರಾಹಕ ವ್ಯಾಪಾರಿಗೆ.. )
ಪೂರೈಸುದಿಲ್ದೆ.... ಎಂಭತ್ತೈದಕ್ಕೆ ನಮಗೇ ಬತ್ತಿಲ್ಲಾ...... (ಅತೀ ಚೌಕಾಶಿ ಮಾಡಿದ ಗಿರಾಕಿಗೆ ವ್ಯಾಪಾರಿಯ ಮಾತು )
ಹನ್ನೆರಡು.... ಹಾ... ಆ ಚೀಲ ಖಾಲಿ ಮಾಡಿ ಕೊಡಾ.....
ಕೊರ್ಲಾಣೆ... ಹೋಯ್... ಹೋಯ್... ಲೋಸಾತ್ತೆ... (  ಕೊರಳಿನ ಆಣೆ.. ನಷ್ಟವಾಗುತ್ತದೆ... ಕಡಿಮೆ ಹಣ ಕೊಟ್ಟು ಹೋಗಲು ಶುರು ಮಾಡಿದ ಪರಿಚಯಸ್ಥ ಗಿರಾಕಿಗೆ ವ್ಯಾಪಾರಿ )
ಚರ್ಬದೀ.... ( ಹೆದರಬೇಡಿ.. ದೂರದಲ್ಲಿ ಶರಬತ್ತು ಮಾರುತ್ತಿರುವವನ ಕೂಗು )
ಚಿಲ್ ಚಲ್ ಚಿಲ್ ಚಲ್ ಚಿಲ್ ಚಲ್ ( ಏನಿಲ್ಲ ಕಬ್ಬಿನ ರಸ ತೆಗೆಯುವ ಯಂತ್ರದ  ಸದ್ದು )
 ಈ ಇಷ್ಟು ಉತ್ತರಗಳಲ್ಲಿ ನಾಲ್ಕನೇ ಸಾಲಿನ ಮೊದಲ ಶಬ್ದ ಮಾತ್ರ ನಿಮಗೆ ಬೇಕಾಗಿದ್ದು. ಹೇಗೆ ಭಟ್ಟಿ ಇಳಿಸುತ್ತೀರೋ ನೀವೇ ನೋಡಿ.
ಅದಕ್ಕೆ ಸಂತೆಯೊಳಗೆ ಕಾಲಿಡುವಾಗ ಮೈಯೆಲ್ಲಾ ಕಿವಿಯಾಗಿರಬೇಕು.



ಕುಂದಾಪುರ ಸಂತೆ!!!! ಪ್ರತೀ ಶನಿವಾರ ನಡೆಯುವ ಕೃಷಿ ಉತ್ಪನ್ನ ಮಾರುಕಟ್ಟೆ. ಇತರ ಎಲ್ಲಾ ಸಾಮಾನುಗಳು ಲಭ್ಯವಿದ್ದರೂ ಕೃಷಿ ಉತ್ಪನ್ನಗಳೇ ಮುಖ್ಯ. ಅವಿಭಜಿತ ದಕ್ಷಿಣ ಕನ್ನಡದ ಪ್ರಮುಖ ವ್ಯಾಪಾರ ಕೇಂದ್ರ ಎಂದರೂ ತಪ್ಪಲ್ಲ. ದೂರದ ಶಂಕರನಾರಾಯಣ -ಭಟ್ಕಳ- ಹೊನ್ನಾವರ-ಹೆಬ್ರಿ-ಮಂಗಳೂರಿನ ವ್ಯಾಪಾರಿಗಳೂ ಇಲ್ಲಿ ವ್ಯಾಪಾರ ನಡೆಸಲು ಬರುತ್ತಾರೆ.ಹತ್ತಿರದ ಸಂತೆಕಟ್ಟೆ- ಕಟಪಾಡಿ ಸಂತೆಗೆ ಇಲ್ಲಿಂದಲೇ ಸರಕು ರವಾನೆಯಾಗುತ್ತದೆ.ಬೆಳಿಗ್ಗೆ  ಐದು ಗಂಟೆಯೊಳಗೆ ಬಾಳೆ - ತೆಂಗು  ಬರಲು ಶುರುವಾಗುತ್ತದೆ. ಒಂಭತ್ತರಿಂದ ಸುಮಾರು ಎರಡೂವರೆ ಮೂರರ ತನಕ ಭಾರೀ ಬಿಸಿ-ಬಿರುಸಿನಲ್ಲಿ ನಡೆಯುವ  ವ್ಯಾಪಾರ ಸಂಜೆ ಸೂರ್ಯನ ಬಿಸಿಲಿನೊಡನೆ ತಂಪಾಗುತ್ತಾ ಹೋಗುತ್ತದೆ. ಒಂದು ಕಡೆ ಸರಕಿಗೆ ಒಳ್ಳೆಯ ಬೆಲೆ ಸಿಕ್ಕಿ ಲಾಭವಾದ ಖುಶಿಯಲ್ಲಿ ಕೆಲವು ವ್ಯಾಪಾರಿಗಳಿದ್ದರೆ ಸಂಜೆಯವರೆಗೂ ಕಾದು ಆಮೇಲೆ ಮಾರದಿದ್ದರೆ ವಾಪಾಸು ತೆಗೆದುಕೊಂಡು ಹೋಗುವ ಖರ್ಚು ಇನ್ನು ಹೆಚ್ಚಾದೀತೆಂದು ಕಡಿಮೆ ಲಾಭಕ್ಕೋ ನಷ್ಟಕ್ಕೊ ಮಾರಿ ಸೋತ ಮುಖದಿಂದ ನಿರ್ಗಮಿಸುವ ವ್ಯಾಪಾರಿಗಳು ಇನ್ನೊಂದು ಕಡೆ. ಇವರನ್ನು ನೋಡಿ ಮನಸ್ಸಿಗೆ ಸ್ವಲ್ಪ ನೋವಾದರೂ ಮಾರುಕಟ್ಟೆಯ ಬೇಡಿಕೆ - ಪೂರೈಕೆ ನಿಯಮಕ್ಕನುಗುಣವಾಗಿಯೇ ಇರುತ್ತದೆ. ಈಗ ಉದಾಹರಣೆಗೆ ತೆಗೆದುಕೊಳ್ಳಿ......

ಬೇಡಿಕೆ ಇಲ್ಲದಿದ್ದಾಗ ,ನಮ್ಮ ಅಪ್ಪನನ್ನು ಶೆಟ್ರೆ.... ಭಟ್ರೆ.. ಶಾನ್ಭಾಗ್ರೆ.. ಕಿಣಿಯರೆ.. ಕಾಮತ್ರೆ... ಪೈಗಳೆ... ಹೊಯ್ ಕೊಂಕಣಿಯರೆ... ಎಂಬಿತ್ಯಾದಿ ನಾಮಾವಳಿಗಳಿಂದ ಕೂಗಿ ವ್ಯಾಪಾರಕ್ಕೆ ಕರೆಯುವ ತೆಂಗಿನ ಕಾಯಿ ವ್ಯಾಪಾರಿಗಳ ಕುತ್ತಿಗೆ ವಿನಾಯಕ ಚತುರ್ಥಿಯ ಸಮಯದಲ್ಲಿ ತೆಂಗಿನ ಮರಕ್ಕಿಂತಲೂ ಸ್ವಲ್ಪ ಮೇಲೆ ಇರುತ್ತದೆ. ಮಳೆಗಾಲದಲ್ಲಿ ನೂರಕ್ಕೆ ನಲವತ್ತು ಎಂದಾಗ ನಾವು ಚೌಕಾಶಿ ಮಾಡುವ ಅಗತ್ಯವಿಲ್ಲ ಹುಬ್ಬೆರಿಸಿದರೆ ಮೂವತ್ತಕ್ಕೆ ತೆಗೆದುಕೊಳ್ಳಿ ಎಂಬುವ ನಿಂಬೆಹಣ್ಣಿನ ವ್ಯಾಪಾರಿ ಆಯುಧ ಪೂಜೆಯ ಸಮಯದಲ್ಲಿ ಅಟ್ಟದ ಮೇಲೆ ಹತ್ತಿರುತ್ತಾನೆ. ಆಗ ನಿಂಬೆಹಣ್ಣು ಬಿಡಿ pre meture delivary  ಆಗಿರುವ ಗೋಲಿಯಷ್ಟು ದೊಡ್ಡ ಎರಡು  ನಿಂಬೆಕಾಯಿ ಇರುವವನ ಬಳಿ ವ್ಯಾಪಾರ ದೂರದ ಮಾತು, ಬರೀ ಮಾತಾಡಬೇಕಾದರೂ ಜಿಲ್ಲಾಧಿಕಾರಿ ಅಥವಾ ಕನಿಷ್ಟ ತಹಸೀಲ್ದಾರರ ಒಪ್ಪಿಗೆ ಪತ್ರ ತೆಗೆದುಕೊಂಡು ಬರಬೇಕು. ಹೀಗೆ ಅರ್ಥಶಾಸ್ತ್ರದ ಬೇಡಿಕೆ-ಪೂರೈಕೆಯ ತತ್ವ ಪೂರ್ಣ ಪ್ರಮಾಣದಲ್ಲಿ ಇಲ್ಲಿ ಅನ್ವಯಿಸುತ್ತದೆ.

ರಾಸಿಗೊಂದ್ರುಪಾಯಿ.....ರಾಸಿಗೊಂದ್ರುಪಾಯಿ.......ರಾಸಿಗೊಂದ್ರುಪಾಯಿ ( ರಾಶಿಗೆ ಒಂದು ರುಪಾಯಿ ). ಒಂದು ನಿಮಿಷ ಆ ರಾಶಿ ಎಂಬ ಶಬ್ದ ಕೇಳಿ ಎಷ್ಟು ದೊಡ್ಡ ರಾಶಿಯೋ ಎಂದುಕೊಂಡು ಸುಡುವ ಬಿಸಿಲಿನಿಂದ ಕಣ್ಣನ್ನು ರಕ್ಷಿಸಲು ಕೈಯನ್ನು ಹಣೆಯ ಮೇಲಿಟ್ಟು ನಭೋಮಂಡಲದೆಡೆಗೆ ಕಣ್ಣು ಹಾಯಿಸಬೇಡಿ.ಕುತ್ತಿಗೆ ಬಗ್ಗಿಸಿ ನಿಮ್ಮ ಕಾಲ ಕಿರುಬೆರಳಿನೆಡೆ ನೋಡಿದರೆ ನಿಮ್ಮ ಒಂದು ರುಪಾಯಿಯ ರಾಶಿ ನಿಮ್ಮೆದುರಿಗೆ ಇರುತ್ತದೆ.

Photo courtesy : www.google.com


ಏನು ?? ದಂಗಾದಿರಾ ?? ಇದೇ ಮಾರಾಯ್ರೆ ನಿಮ್ಮ ರಾಶಿ .....ಕೊಟ್ಟ ಒಂದು ರುಪಾಯಿಗೆ ಪಾಪ ಅವರು ಏಳು ಮೆಣಸಿನ ಪಂಚಾಂಗದ ಮೇಲೆ ಒಂದು ಮೆಣಸುನ ಮೊದಲನೇ ಅಂತಸ್ತು ಕಟ್ಟಿಲ್ಲವೇ ?? ಅದೇ ದೊಡ್ಡದು.ಇದು ಸಂತೆಗೆ ಬಂದು ಏನೋ ಲಾಭ ಗಳಿಸುವ ಚಟವಿರುವ ಹುಡುಗರು ಹನ್ನೆರಡು ರುಪಾಯಿಗೆ ಒಂದು ಕಿಲೋ ಹಸಿಮೆಣಸು ಖರೀದಿಸಿ ಅದನ್ನು ಇಪ್ಪತ್ತು ಸಮಭಾಗ ಮಾಡಿ ಆಮೇಲೆ ಕೂಗುವ ಬೊಲೀ .ಇಷ್ಟಲ್ಲದೆ ಅವಿದ್ಯಾವಂತರೂ ಇಲ್ಲಿ ವ್ಯಾಪಾರ ಮಾಡುತ್ತಾರೆ. ಅವರೊಂದಿಗಿನ ನನ್ನ ಕೆಲವು ಅನುಭವ....... ಒಂದು ತೆಂಗಿನ ಕಾಯಿ ವ್ಯಾಪಾರಿಯನ್ನೆ ತೆಗೆದುಕೊಳ್ಳೋಣ....

ಹೋಯ್... ತೆಂಗಿನ ಕಾಯಿ ಹೆಂಗೆ ಮಾರ್ರೆ ??
ಆರು ರುಪಾಯಿ.....
ನೂರಕ್ಕೆ ಎಷ್ಟ ?? ( ಅಂದರೆ ದೊಡ್ಡ ಪ್ರಮಾಣದಲ್ಲಿ ತೆಗೆದುಕೊಂಡರೆ ಸ್ವಲ್ಪ ದರ ಕಡಿಮೆ ಮಾಡುವರೆಂಬುದು ರೂಢಿ )
ನೂರಕ್ಕಾ ?? ನೂರಕ್ಕೆ ಎಪ್ಪತೈದು!!!!! ಹೀಗೆ ಕೇಳಿದ ನಿಮಗೆ ನಗು ಬಂದರೂ ಆ ಸಂತೆಯಲ್ಲಿ ಬಂದು ವ್ಯಾಪಾರ ಮಾಡುವ ಹಣ್ಣು ಹಣ್ಣು ಮುದುಕರನ್ನು ನೋಡಿದಾಗ ಅವರ ಜೀವನ ನಡೆಸುವ ಛಲ  ನೆಗಡಿಯಾದರೆ ರಜಾ ಹಾಕಿ ಮನೆಯಲ್ಲಿ ಕೂರುವ ನಮಗೆ ದಾರಿದೀಪ ಎನ್ನಿಸುತ್ತದೆ.

ಇಷ್ಟಲ್ಲದೆ ಕೆಲವರು ಲೆಕ್ಕಾಚಾರಕ್ಕೆ ನಮ್ಮ ಅಪ್ಪನ ಸಹಕಾರ ತೆಗೆದುಕೊಳ್ಳುವುದುಂಟು.....
ಹೋಯ್ ಭಟ್ರೆ .... ಇದೊಂದ್ ಲೆಕ್ಕಾಚಾರಾ ಮಾಡಿಯೆ.....
ಹಾ ಹೇಳಿ.....
ಅರೂವರೆಗೆ ಮಾತ್ ಆಯಿತ್ತ  ಎಂಭತ್ತ್ ಕಾಯಿ ತೆಕಂಡೀರ.... ಐನೂರಾ ಐವತ್ತ ಕೊಟ್ಟೀರ... ಇನ್ನೆಷ್ಟ ಕೊಡೂದಾತ್ತ ??
ಇನ್ನ ಕೊಡೂದೆಂತ ?? ನೀವೇ ಮೂವತ್ತ ರುಪಾಯ್ ವಾಪಾಸ್ ಕೊಡ್ಕ
ಹೌದಾ ?? ಹಾಂಗಾರೆ ಅರೂಮುಕ್ಕಾಲ್ರಲ್ಲ ಲೆಕ್ಕ ಹಾಕಿ.....
ಹೀಗೆ ಐನೂರಾ ಐವತ್ತು ಟೋಟಲ್ ಬರುವ ವರೆಗೆ ಬೆಲೆ ಏರಿಸಿ ಲೆಕ್ಕ ಹಾಕುತ್ತಾ ಹೋಗಬೇಕು.....

ಹೀಗೆ ಬಿಸಿಲು ಮಳೆ ಚಳಿ ಎಲ್ಲದಕ್ಕೂ ಎದೆ ಕೊಟ್ಟು ಯಾವುದಕ್ಕೂ ಅಂಜದೇ ಪ್ರತಿ ಶನಿವಾರ ತಪ್ಪದೆ ಕುಂದಾಪುರ ಸಂತೆ ನಡೆಯುತ್ತದೆ.ನೀರು ಬೆಲ್ಲ , ವಾಲಿಬೆಲ್ಲ ಮುಂತಾದವು "ಇಲ್ಲಿ ಬಿಟ್ಟು ಬೇರೆಲ್ಲೂ ಸಿಗದು" ಎಂದರೂ ತಪ್ಪಲ್ಲ. ವ್ಯಾಪಾರಿಯು ತನ್ನ ಅಂಗಡಿ ಮುಚ್ಚಿ ವರ್ಷಗಳೇ ಕಳೆದಿದ್ದರೂ ಶನಿವಾರ ಬಂತೆಂದರೆ ಒಂದು ಕೈಚೀಲ ತೆಗೆದುಕೊಂಡು ಸಂತೆಯೊಳಗೆ ಹಾಜರಾಗುತ್ತಾರೆ.ಹೀಗೆ ಇದು ಇಲ್ಲಿನ ಜನರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ.


Comments

haangaare ivattin yaapaar mugeetantaa aayeeth....!!!
Thanks!!!

what to say yar!!!

ಬಾಗ್ಲ ತೆಗುದ ತಡ
ಬೋಣಿ ಯಾಪಾರ ಕಡ!!!

Sumanth
PARAANJAPE K.N. said…
ಶಾನ್ ಭಾಗ್ರೆ, ಯಾಕೋ ಇತ್ತೀಚಿಗೆ ಏನು ಬರೀತಿಲ್ಲ ನೀವು, ಬರೀರಿ ಮಾರ್ರೆ
Anil ML said…
Sumanth ji, First time saw your blog. Its good. But u could still improve your style of writing on comic incidents( Patpataki ).

Popular posts from this blog

ನ್ಯಾನೋ ಕಥೆಗಳು.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು . 2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!. 3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!! 4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು . 5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು . 6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು . 7) ಮಾರುಕಟ್ಟೆ...

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

ರೀ.......... ನಿಮ್ಮ ಬಟ್ಟೆ ಇಸ್ತ್ರೀ ಮಾಡಿ ಅಲ್ಲಿ ಇಟ್ಟಿದ್ದೀನಿ. ಹ್ಮ್ ಸರಿ ಎಂದೆನು. ಎನ್ರೀ ಎರಡೇ ಇಡ್ಲಿ ತಿಂದಿದ್ದೀರಾ. ನಾನು ಕಾಫಿ ಮಾಡಿ ತರೋದ್ರೊಳಗೆ ಎದ್ ಬಿಟ್ರಿ ಇನ್ನೊಂದೆರಡು ಹಾಕಿಸ್ಕೊಳ್ಳೋದಲ್ವಾ ?? ಹಸಿವಿಲ್ಲ ಬಿಡೇ... ರೀ... ಶೂ ಪಾಲಿಷ್ ಮಾಡಿ ಇಟ್ಟಿದ್ದೀನಿ. ಲಂಚ್ ಬಾಕ್ಸ್ ಕೂಡಾ ಅಲ್ಲೇ ಇಟ್ಟಿದ್ದೀನಿ ನನ್ನವಳು ಉಲಿದಳು..... ಒಂದು ನಿಮಿಷ...... ಎಲ್ಲೋ ಏನೋ ಒಂದು ಲಿಂಕ್ ತಪ್ಪಿ ಹೊಗ್ತಾ ಇದೆ ಅನ್ನಿಸ್ತು. ಒಂದು ಎರಡು ಗಂಟೆ ಫ್ಲಾಶ್ ಬ್ಯಾಕ್ ಹೋದೆನು. ಅಮ್ಮೋ ................ ಪ್ರತಿದಿನ ಸೂರ್ಯನ ಬಿಸಿಲು ಮುಖಕ್ಕೆ ಹೊಡೆಯುವವರೆಗೂ ಮುಖ ಹೊರಳಿಸಿ ಮಲಗಿ ದಿಂಬು ಬೆಚ್ಚಗಾದ ಮೇಲೆ ಮುಖ ಅರಳಿಸುವ ನನ್ನ ಸೂರ್ಯಕಾಂತಿ ಶಾಂತಿ ಇಂದು ಅಲಾರ್ಮ್ ಬಾರಿಸೋ ಮೊದಲೇ ಎದ್ದು ಚಹಾ ಮಾಡಿ ನನ್ನನ್ನೆಬ್ಬಿಸಿ ಸ್ನಾನಕ್ಕೆ ನೀರಿಟ್ಟು ಇಡ್ಲಿ-ಚಟ್ನಿ  ರೆಡಿ ಮಾಡಿ ಬಟ್ಟೆಗೆ ಇಸ್ತ್ರೀ ಹಾಕಿಟ್ಟು ಶೂ ಪಾಲಿಷ್ ಮಾಡಿ.......................  ಈ ದಿನ ಏನೋ ದೊಡ್ಡ ಹಗಲು ದರೋಡೆ ಆಗುವುದು ಖಂಡಿತ ಎಂದು ಅರಿವಾಯಿತು.ಭಯವಾಯಿತು ಮನಸ್ಸಿಗೆ.ಆದರೂ ತೋರ್ಪಡಿಸದೇ ಕೇಳದವನಂತೆ ಸುಮ್ಮನಿದ್ದೆ. ಆದರೂ ನನ್ನ ಶಾಂತಿ ಬಿಡಬೇಕಲ್ಲ. ರೀssssssssss......... ಮತ್ತೊಮ್ಮೆ ನೋಡು ಆಫೀಸಿಗೆ ಟೈಮ್ ಆಯಿತು ತೆಂಕಣ ಸುತ್ತಿ ಮೈಲಾರಕ್ಕೆ ಬರಬೇಡ. ಸೀದಾ ವಿಷಯಕ್ಕೆ ಬಾ ಎಂದೆನು. ಮೊನ್ನೆ ಪೇಪರ್ ಓದಿದ್ರಾ ?? ಶಾರುಖ್ ಖಾನ್ ಅವ್ನ ಹ...

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು...