Skip to main content

ಚಿನಕುರುಳಿ

೧) ಏನೋ ಸುಮಂತಾ ಸಿಗರೇಟ್ ಎಳೀತೀಯೇನೋ ಎಂದು ಅಪ್ಪ ಕೇಳಿದಾಗ "ಅಪ್ಪಾ ಇದೇನು ಆಫರೊ ?? ಎನ್ ಕ್ವಾಯರಿನೊ?? ಎಂದು ಪ್ರಶ್ನಿಸಿದೆ .

೨) "ಇಂಗು ತೆಂಗು ಇದ್ದರೆ ನಮ್ಮ ಶಾಂತಿ ಕೂಡ ಅಡುಗೆ ಮಾಡುತ್ತಾಳೆ" ಎಂದು ಹೇಳಿದಾಗ "ರೀ ನಾಲ್ಕು ಜನರ ಮುಂದೆ ನನ್ನನ್ನು ಹೊಗಳಬೇಡ್ರಿ" ಎಂದು ನನ್ನ ಶಾಂತಿ ನಾಚಿ ನೀರಾದಳು.

೩)ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ "ಅನಕ್ಷರಸ್ಥರೇ ಗಮನಿಸಿ"  ಎಂದು ಅನಕ್ಷರತೆಯ ದುಷ್ಪರಿಣಾಮಗಳ ಬಗ್ಗೆ ಬರೆದ ಬ್ಯಾನರ್ ಗಳನ್ನು ತೂಗು ಹಾಕಿದರು.

೪) ಚಿನ್ನದ ಪದಕ ಪಡೆದು ಮೆರಿಟ್ ನಲ್ಲಿ ಬ್ಯಾಂಕ್ ಕೆಲಸಕ್ಕೆ ಸೇರಿಕೊಂಡ ಗ್ರಾಜುಯೇಟ್ ಗಣೇಶನು ಕ್ಯಾಶ್ ನಲ್ಲಿ ಹತ್ತು ರುಪಾಯಿಯ ವ್ಯತ್ಯಾಸ ಕಂಡು ಬಂದಾಗ ಮೊದಲು ನೂರರ ಕಂತೆ ಎಣಿಸಲು ಶುರು ಮಾಡಿದನು.

೫) ತುಂಟತನ ಮಾಡುತ್ತಿದ್ದ ವಿದ್ಯಾರ್ಥಿಯನ್ನು ನೋಡಿ ಸಿಟ್ಟುಗೊಂಡ ತರಗತಿ ಅಧ್ಯಾಪಕರು "ಸಭ್ಯರೊಂದಿಗಿರಲು ನಾಲಾಯಕ್ ನೀನು ಹೋಗು ಹೆಡ್ ಮಾಸ್ಟರ ಬಳಿಗೆ " ಎಂದು ಗುಡುಗಿದರು.

೬)ನೂರು ರುಪಾಯಿ ಕದ್ದು ಜೈಲಿಗೆ ಬಂದು ಪೊಲೀಸರಿಂದ ಸಿಕ್ಕಾಪಟ್ಟೆ ಪೆಟ್ಟು ತಿಂದ ಕಿಸೆಗಳ್ಳನು ಅಜ್ಮಲ್ ಕಸಬ್ ಆರಾಮವಾಗಿ ಬಾಸ್ಮತಿ ಅನ್ನ ಊಟ ಮಾಡುವುದನ್ನು ಕಣ್ಣಾರೆ ನೋಡಿದನು.

೭)ಹತ್ತು ಲೇಖನಗಳಿಂದ ಸ್ವಲ್ಪ ಸ್ವಲ್ಪ ಕದ್ದು , ಖುದ್ದು ಬರೆದ ಲೇಖನವೆಂದು ಪ್ರಕಟಿಸಿದ ಲೇಖನಕ್ಕೆ "ತುಂಬಾ ಚೆನ್ನಾಗಿದೆ" ಎಂದು ಆ ಹತ್ತೂ ಲೇಖಕರು ಪ್ರತಿಕ್ರಿಯಿಸಿದರು.


೮)ಪಾಪ ನನ್ನ ಮಗಳು ಸೋಮವಾರ ತವರಿಗೆ ಬಂದರೆ ನಂತರ ನಾಲ್ಕು ದಿನ ಬಿಟ್ಟು ಶುಕ್ರವಾರವೇ ತವರಿಗೆ ಬರುವುದು ಅದೇ ನನ್ನ ಗಯ್ಯಾಳಿ ಸೊಸೆ ಪ್ರತೀ ದೀಪಾವಳಿಗೆ ತವರಿಗೆ ಹೋಗುತ್ತಾಳೆ ಎಂದು ಅತ್ತೆ ತಮ್ಮ ದುಃಖ ತೋಡಿಕೊಂಡರು.

೯)ಆಗ ತಾನೇ ಉಪನಯನವಾಗಿ ಗಾಯತ್ರೀ ಮಂತ್ರ ಗೊತ್ತಿಲ್ಲ ಎಂದ ವಟುವಿಗೆ " ಯಾಕೋ ಸುಳ್ಳು ಹೇಳ್ತೀಯಾ ?? ಅಪ್ಪ ಆ ದಿನ ಕಾಲ ಮೇಲೆ ಕೂರಿಸಿಕೊಂಡು ಕಿವಿಯಲ್ಲಿ ಏನು ಹೇಳಿಕೊಟ್ಟರೋ?? " ಎಂದು ಬೈದಾಗ ಅಪ್ಪ "ನೋಡು ಈಗ ಎಲ್ಲರೂ ಉಡುಗೊರೆ ಕೊಡುತ್ತಾರೆ ಜಾಗ್ರತೆಯಿಂದ ಎಲ್ಲಾ ತೆಗೆದುಕೊಂಡು ಅಮ್ಮನ ಬಳಿ ಕೊಡು ಎಂದರು" ಎಂದು ಮಾಣಿ ಸತ್ಯ ನುಡಿದ.

೧೦)ಒಬ್ಬಳು ಹೆಂಗಸಿನ ಹಿಂದೆ ಆರು ಮಕ್ಕಳು ಇಳಿದಾಗ " ಏನಮ್ಮಾ.... ಅರ್ಧ ಮಕ್ಕಳನ್ನು ಮನೆಯಲ್ಲಿ ಕೂರಿಸಿ ಇನ್ನು ಉಳಿದವರನ್ನು ಕರೆದುಕೊಂಡು ಬರಬಾರದೆ??" ಎಂದ ಕಂಡಕ್ಟರಗೆ  "ನಾನು ಈಗ ಮಾಡಿದ್ದೂ ಅದನ್ನೇ ಎಂದು ಹೇಳಿ ಆಕೆ ಬಿರಬಿರನೆ ಮುನ್ನಡೆದಳು.

೧೧)ಕಂಪ್ಯೂಟರ್ ಕ್ಲಾಸ್ ನಿಂದ ಮನೆಗೆ ಬಂದ ಎಲ್.ಕೆ.ಜಿ ಪೋರನು ಮನೆಯಲ್ಲಿದ್ದ ಬೀಗದ ಕೈ ಇಡುವ ಕೀ ಬೋರ್ಡು, ಮೌಸು (ಇಲಿ), ವಿಂಡೋಸ್ (ಕಿಟಕಿ),ಚಿಪ್ಪು (CHIP),ಕೆಲಸದ ರಾಮ (RAM),ಸ್ಕ್ರೀನು, ಇದನ್ನೆಲ್ಲಾ ಜೋಡಿಸಿ ಕಂಪ್ಯೂಟರ್ ಮಾಡಿಕೊಡಬೇಕೆಂದು ಹಠ ಹಿಡಿದನು.

=======================ವಿಕಟಕವಿ ==================

Comments

ಬಾಲು said…
ಹತ್ತು ಲೇಖನಗಳಿಂದ ಸ್ವಲ್ಪ ಸ್ವಲ್ಪ ಕದ್ದು , ಖುದ್ದು ಬರೆದ ಲೇಖನವೆಂದು ಪ್ರಕಟಿಸಿದ ಲೇಖನಕ್ಕೆ "ತುಂಬಾ ಚೆನ್ನಾಗಿದೆ" ಎಂದು ಆ ಹತ್ತೂ ಲೇಖಕರು ಪ್ರತಿಕ್ರಿಯಿಸಿದರು....
ತುಂಬಾ ಚೆನ್ನಾಗಿದೆ. :)
ಚೆನ್ನಾಗಿದೆ, ಮೊನ್ನೆ ತಾನೆ ನಿಮ್ಮ ಲೇಖನವನ್ನು ಮಗದೊಬ್ಬರು ತಮ್ಮದೇ ಎಂದು ಒಂದು ದಿನ ಪತ್ರಿಕೆಯಲ್ಲಿ ಹಾಕಿದ್ದರಂತೆ, ಗಮನಿಸಿದಿರೋ..
shridhar said…
This comment has been removed by the author.
shridhar said…
ಸುಮಂತ ಅವರೆ,
ಮಿಂಚಂಚೆಯಲ್ಲಿ ಬಂದ ಪತ್ರ ಹಾಸ್ಯಮಯವಾಗಿದೆಯೆಂದು ನನ್ನ ಬ್ಲೊಗನಲ್ಲಿ ಮೂಲ ಲೇಖಕರ ಕ್ಷಮೆಯಾಚಿಸಿ
ಪ್ರಕಟಿಸಿದ್ದೆ , ತದನಂತರ ಆ ಬರಹ ತಮ್ಮದೆಂದು ತಿಳಿಯಿತು , ತಮ್ಮ ಬ್ಲೊಗ್ ವೀಕ್ಷಿಸಿದೆ,
ತುಂಬ ಹಾಸ್ಯಮಯ ಬರಹಗಳು. ತಾವು ವಿಕಟಕವಿಯೆ ಸರಿ.
ತಮ್ಮ ಅಪ್ಪಣೆಯಿಲ್ಲದೆ ಬರಹವನ್ನು ಪ್ರಕಟಿಸಿದಕ್ಕೆ ಮತ್ತೊಮ್ಮೆ ಕ್ಷಮೆಯಿರಲಿ.
ನಮ್ಮ ಬ್ಲೊಗಗೆ ಒಮ್ಮೆ ಭೇಟಿ ಕೋಡಿ.

ಶ್ರೀಧರ ಭಟ್ಟ.

Popular posts from this blog

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ