Skip to main content

ನಾನು ನನ್ನ ಸಂಸಾರ

ಭಾನುವಾರ ಬೆಳಿಗ್ಗೆ Breaking News ನ ಹುಡುಕಾಟದಲ್ಲಿ News Paper ಓದುತ್ತ Hall ನಲ್ಲಿ ಕೂತಿದ್ದೆ . ಆದರೆ ಆ Breaking News ನಮ್ಮ ಮನೆಯಲ್ಲೇ ನಡೆಯುತ್ತದೆಂದು ಕನಸಿನಲ್ಲೂ ಯೋಚಿಸಿರಲಿಲ್ಲ . "ರೀ ... ಇವತ್ತು ಉಪ್ಪಿಟ್ಟು ಮಾಡುತ್ತೇನೆ ... ಅಡುಗೆ ಮನೆಯಿಂದ ನನ್ನವಳು ಉಲಿದಳು. ಎದೆ ಝಾಲ್ಲೆಂದಿತು!!!!! ತಕ್ಷಣ ಮೊಬೈಲ್ ಫೋನ್ ನ Contact list ನಲ್ಲಿದ್ದ ಎಲ್ಲರಿಗೂ ಕರೆ ಮಾಡಿ ಮಾತಾಡಿದೆ . "ಏನೋ ..... ಬೆಳಿಗ್ಗೆ ಬೆಳಿಗ್ಗೆ ಫೋನ್ ಮಾಡಿ ಬಿಟ್ಟಿದ್ದೀಯಾ !!!!! ಎಂದು ಎಲ್ರೂ ಕೇಳಿದ್ರು ... ಹೌದು ಮಧ್ಯಾನ್ನ ಹೇಗಿರ್ತೀನಿ ಅಂತ sure ಇಲ್ಲ ಅದಕ್ಕೆ ಈಗಲೇ ಮಾಡಿದೆ ಎಂದೆನು. ಕಳೆದ ಬಾರಿ ನನ್ನವಳ "ಹಸ್ತಗುಣದ" ಬಲಿಪಶುವಾಗಿದ್ದ ರಮೇಶಣ್ಣ ... ಲೋ Insurance Premium ಕಟ್ಟಿದ್ದೀಯ ತಾನೇ ?? ಎಂದು ಕೇಳಿದ . ಹೌದು ಎಂದೆನು . ನನ್ನವಳು ಮನೆಯೊಳಗಿದ್ದರೆ ನನಗೂ ಕೋಟಿ ರುಪಾಯಿ . ಆದರೆ ಅಡುಗೆ ಮನೆ ಹೊಕ್ಕರೆ ಸ್ವಲ್ಪ ಭಯವಾಗುವುದು ಸಹಜ .

ಒಹ್ ..... ಕ್ಷಮಿಸಿ ನನ್ನವಳ ಪರಿಚಯ ಮಾಡುವುದೇ ಮರೆತು ಹೋದೆ . ಇವಳ ಹೆಸರು ಸುಶಾಂತಿ . ದೇವರಾಣೆಗೂ ಇದು ಕೇವಲ ಅಂಕಿತನಾಮ . ನನ್ನ ಅತ್ತೆ ಮಾವಂದಿರ ಏಕೈಕ ಪುತ್ರಿ . ಅವರ ಕುಟುಂಬದಲ್ಲಿ ಇವಳ ತಂದೆ ತಾಯಿ ಬಿಟ್ಟು ಬೇರೆ ಎಲ್ಲರಿಗೂ ಗಂಡು ಮಕ್ಕಳು. ಇದರಿಂದಾಗಿ "ಪಾರ್ವತಿಯ " ತರಹ ಇವಳು ಕೂಡ "ಮುದ್ದಿನ ಮನೆಮಗಳು ". " ಆರತಿ ತೆಗೊಂಡರೆ ಗರ್ಮಿ ತೀರ್ಥ ತೆಗೊಂಡರೆ ಶೀತ " ಅಂತಾರಲ್ಲ ಅದೇ ಪಂಗಡಕ್ಕೆ ಸೇರಿದವಳು . ಕಲಿತಿದ್ದು ಇಂಜಿನಿಯರಿಂಗ್ ಆದರೂ ಗಂಜಿ ನೀರು ಬೇಯಿಸಲಿಕ್ಕು ಬರುವುದಿಲ್ಲ . ಇವಳ ತಪ್ಪಿಲ್ಲ ಬಿಡಿ . ಇವಳು ಅಡುಗೆ ಮನೆ ಕಡೆ ಬಂದರೂ "ನೀನು ಓದ್ಕೋ ಪುಟ್ಟಿ " ಎಂದು ಹೇಳಿ ಹೊರಗೆ ಕಳಿಸಿದರೆ ಏನು ಮಾಡುವುದು ?? ಈ ಪುಟ್ಟಿ ಹೆಸರಿನ ಹಸ್ತಾಂತರ ಇಂದಿಗೂ ಆಗಿಲ್ಲ . ಈಗ ನಾವು ನಮ್ಮ ಮಗಳನ್ನು ಇವಳ ತವರು ಮನೆಗೆ ಕರೆದುಕೊಂಡು ಹೋದರೆ ಅವಳನ್ನು "ಪುಟ್ಟಿ ಮಗಳು " ಎಂದು ಕರೆಯುತ್ತಾರೆ . ನೋಡುವವರಿಗೆ ನಾನೇನು ಇವಳನ್ನು ಬಾಲ್ಯವಿವಾಹ ಮಾಡಿಕೊಂಡಿರುವಂತೆ ಅನಿಸುತ್ತದೆ .

ಹೌದ್ರಿ ... ನಮ್ಮ ಮನೆಯಲ್ಲಿ ನಾನೇ ಅಡಿಗೆ ಮಾಡೋದು .. ಅರೆ !!! ಅದರಲ್ಲೇನು ನಾಚಿಕೆ ?? ನೀವು ರಾಮಾಯಣ ಮಹಾಭಾರತ ಓದಿದ್ದೀರ ತಾನೇ ?? ಅದರಲ್ಲಿ ನಳಪಾಕ , ಭೀಮಪಾಕದ ಉಲ್ಲೇಖ ಬಿಟ್ಟರೆ "ದಮಯಂತಿ ಪಾಕ " "ದ್ರೌಪದಿ ಪಾಕ" ದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ?? ಮತ್ತೆ ಅಜ್ಞಾತ ವಾಸದ ಕಾಲದಲ್ಲಿ ದ್ರೌಪದಿಯನ್ನು ಅಡುಗೆ ಕೆಲಸಕ್ಕೆ ಕಳಿಸಲು ತಯಾರಿ ಮಾಡಿದ್ದರು ಆದರೆ ಅವಳು "ಏನ್ರಿ ... ನಾನು ದುರ್ಯೋಧನ ಸಾಯೋವರ್ಗೂ Comb ಮಾಡ್ಕೊಳ್ಳೋಲ್ಲ ಅಂತ ಶಪಥ ಮಾಡಿದ್ದೀನಿ ಆಮೇಲೆ ಸಾಂಬಾರಿನಲ್ಲಿ ಕೂದಲು ಬಂದ್ರೆ ಕಷ್ಟ .. ನೀವೇ ಹೋಗಿ ಬನ್ರಿ .. ಎಂದು ಭೀಮನನ್ನು ಏಮಾರಿಸಿದಳು . ಆದರೆ ನನ್ನವಳು ಹಾಗಲ್ಲ ನಾನೇ ಮಾಡುತ್ತೇನೆ ಎಂದು ಮುಂದೆ ಬಂದರೂ ನಾನು ಬಿಡುವುದಿಲ್ಲ . ನಮ್ಮ ಅಡುಗೆ ಕೋಣೆಯ ಹೊಸ್ತಿಲಿನಲ್ಲಿ ಎರಡು ಲಕ್ಷ್ಮಣ ರೇಖೆ ಎಳೆದಿದ್ದೇನೆ ಒಂದು ಜಿರಳೆಗೆ ಮತ್ತೊಂದು ನನ್ನ ಹೆಂಡತಿಗೆ .

ಮದುವೆಯಾದ ಹೊಸತರಲ್ಲಿ ಪರಸ್ಪರ impress ಮಾಡುವ ಕಾರ್ಯ ಭರದಿಂದ ನಡೆಯುವುದು ಸಾಮಾನ್ಯ . ನಾನೂ ಹಾಗೇನೇ. ಆಗ ನಮ್ಮ ಮದುವೆಯಾಗಿ 2 ವಾರವಷ್ಟೇ ಕಳೆದಿತ್ತು . ಅಡುಗೆಯಲ್ಲಿ ಇವಳ ಪರಾಕ್ರಮ ಅರಿತಿರಲಿಲ್ಲ . ಆಫೀಸಿಗೆ ಹೋಗುವ ಅವಸರದಲ್ಲಿದ್ದೆ . ರೀ breakfast ಮಾಡ್ಕೊಂಡು ಹೋಗಿ ಅಂದಳು . ಸರಿ ಎಂದು ತಿಂದು impress ಮಾಡುವ ನಿಟ್ಟಿನಲ್ಲಿ "ಕಾಫಿ ಚೆನ್ನಾಗಿದೆ " ಎಂದೆನು . " ನಾನು ಟೀ ಮಾಡಿದ್ದು" ಎಂದು ಹೇಳಿ ಮುಖ ಸಣ್ಣದು ಮಾಡಿಕೊಂಡು ಒಳಗೆ ಹೋದಳು . " ಸ್ವಲ್ಪ ಸಾವರಿಸಿಕೊಂಡು "ಹಹ್ಹಹ್ಹ ... ತಮಾಷೆ ಹೇಗಿತ್ತು ??? ಎಂದು ಕೇಳಿ ಮಾತಿನ ಓಘ ಬದಲಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ . ಆಫೀಸಿನಿಂದ ಫೋನ್ ಮಾಡಿ ಹೀಗೆ ಮಾತಾಡುತ್ತಾ " ನಾಳೆ ಏನು ಸ್ಪೆಷಲ್ ?? ಎಂದು ಕೇಳಿದೆ . "ನೀವೇ ಹೇಳ್ರಿ " ಎಂದಳು . ಇಡ್ಲಿ ಮಾಡು ... ಬೇಳೆ ಸ್ವಲ್ಪ ಹೆಚ್ಚೇ ನೆನೆಸು ನಾಳೆ ನನ್ನ ನಾಲ್ಕು ಗೆಳೆಯರು ಮನೆಗೆ ಬರುತ್ತಾರೆ ಎಂದೆನು . ಸಂಜೆ ಮನೆಗೆ ಹೋದವನಿಗೆ ತಲೆ ತಿರುಗುವುದೊಂದು ಬಾಕಿ ನನ್ನ ಅರ್ಧಾಂಗಿ ಅರ್ಧ ಚೀಲ ತೊಗರಿಬೇಳೆ ನೆನೆಸಿ ಇಟ್ಟಿದ್ದಾಳೆ . ನನ್ನ ನೋಡಿ "ರೀ ... ಸಾಕಾ ಇಷ್ಟು ?? ಎಂದಳು . ಸಾಕಮ್ಮ ಸಾಕು ..... ನಮ್ಮ ಮದುವೆ ದಿನ ಕೂಡ ಇಷ್ಟು ಬೇಳೆ ನೆನೆಸಿಟ್ಟಿರಲಿಕ್ಕಿಲ್ಲ ಎಂದೆನು .ಅತ್ತೆ ಮಾವ ಬರುವ ನೆಪ ಮಾಡಿ ಗೆಳೆಯರ ಕಾರ್ಯಕ್ರಮವನ್ನು ಮುಂದೆ ಹಾಕಿದೆನು . ಆಮೇಲೆ ಒಂದು ವಾರ ಬೆಳಿಗ್ಗೆ ತಿಂಡಿಗೆ "ದಾಲ್ ಖಿಚಡಿ " ಊಟಕ್ಕೆ ಬೇಳೆಸಾರು .ಹೀಗೆ ದಾಲಿನ ಧಾಳಿಯಿಂದ ಹತ್ತು ದಿನ
ಹೊಟ್ಟೆಯಲ್ಲಿ ....... ಬೇಡ ಬಿಡಿ... ಅದನ್ನೆಲ್ಲಾ ಯಾಕೆ ಬರೆಯುವುದು .....ನಿಮಗೆ ಅರ್ಥವಾಯಿತಲ್ಲ ಅಷ್ಟೆ ಸಾಕು .

ರಮೇಶಣ್ಣನ ಪ್ರಸಂಗ :- ರಮೇಶಣ್ಣ ನನ್ನ ಚಡ್ಡಿ ದೋಸ್ತಿ . ಸಂಬಂಧಿ ಕೂಡ ಸ್ನೇಹಿತ ಕೂಡ . ನನಗಿಂತ 2 ವರ್ಷ ದೊಡ್ಡವನಾಗಿದ್ದರೂ ಸಣ್ಣ ಪ್ರಾಯದಿಂದ ನನ್ನ ಒಡನಾಡಿ . ಮದುವೆ ಆದ ನಂತರ ಒಂದು ದಿನ ಅವನನ್ನು ಊಟಕ್ಕೆ ಕರೆದೆ . ಅವನಿಗೆ ನುಗ್ಗೆ ಕಾಯಿ ತುಂಬಾ ಇಷ್ಟ . ಅದಕ್ಕೆ ನನ್ನಾಕೆಗೆ ನುಗ್ಗೆಕಾಯಿ ಹಾಕಿ ಸಾಂಬಾರು ಮಾಡಲು ಹೇಳಿದೆ . ಅವಳು ಮಾಡಿದಳು .ರಮೇಶಣ್ಣ ತಿಂದವನೇ .." ನುಗ್ಗೆಕಾಯಿಯನ್ನು ಯಾವ ಕಟ್ಟಿಗೆ ಡಿಪೋದಿಂದ ತಂದೆ ?? ಎಂದು ಕೇಳಿದ . ಎಲ್ಲ ಬಲಿತಿರುವ ನುಗ್ಗೆಕಾಯಿಗಳು . ಇವಳನ್ನು ಕೇಳಿದರೆ "ರೀ ಮಾರ್ಕೆಟಿಗೆ ಹೋಗಿದ್ದೆ ಆ ತರಕಾರಿ ಅಂಗಡಿಯವನು ಸಣ್ಣ ನುಗ್ಗೆಕಾಯಿ ಕೊಡಲು ಬಂದ ದಬಾಯಿಸಿ ದೊಡ್ಡ ದೊಡ್ಡ ನುಗ್ಗೆ ಕಾಯಿ ಹಾಕಿಸಿಕೊಂಡು ಬಂದೆ " ಅಂದಳು . ಅವಳ ಮುಖದ ಮೇಲೆ ದಿಗ್ವಿಜಯ ಸಾಧಿಸಿದ ಸೇನಾಧಿಕಾರಿಯ ಸಂಭ್ರಮ . ನನಗೋ ಅಪ್ಪ ಹೇಳಿದ "ದೊಡ್ಡ ಪಾವಣೆ" ಕತೆ ನೆನಪಾಯಿತು .ಇಷ್ಟ ಮಾತ್ರವಲ್ಲ ...

ಚಪಾತಿ - ಉಂಡೆ -ಒಬ್ಬಟ್ಟಿನೊಟ್ಟಿಗೆ
ಬೇಕೇ ಬೇಕು ಚಾಕು ಕತ್ತರಿ ಸುತ್ತಿಗೆ ||
ಪೂರಿಯಲಿ ಅಡಗಿಹುದು ಎಣ್ಣೆಯಾ ಗಿರಣಿ
ಅಡುಗೆ ಮಾಡಿದರೆ ಇವಳು ಮಕ್ಕಳದು ಧರಣಿ.||

ಸಾರಿನಲ್ಲಿ ಉಪ್ಪಿಲ್ಲ ಪಾಯಸದಿ ಬೆಲ್ಲ
ಬೇಳೆ ಸಾರಿನಲ್ಲಿ ಬೇಳೆ ಬೆಂದಿರುವುದಿಲ್ಲ||
ಪಲ್ಯದಲಿ ಅಡಗಿಹುದು ನೂರೆಂಟು ಸೊತ್ತು
ನನ್ನವಳ ಅಡುಗೆ ನನಗೆ ನುಂಗಲಾಗದ ತುತ್ತು ||

ಅಡುಗೆ ಮನೆಯಲ್ಲಿ ಮಾತ್ರ ಇವಳ ಕಾರ್ಯವ್ಯಾಪ್ತಿ ಮುಗಿಯೊಲ್ಲ . ಇವಳು ಮನೆಯಲ್ಲಿದ್ದರೆ ಅಥವಾ ಪಾದಚಾರಿಯಾಗಿ ಹೊರಗೆ ಬಂದರೆ ಇಡೀ ಊರಿಗೆ ಶಾಂತಿ . ಆದರೆ ಅಪ್ಪಿ - ತಪ್ಪಿ ವಾಹನ ಏರಿದರೆ ಈಕೆ ಪ್ರಳಯಾಂತಕಿ. ಊರಿನಲ್ಲಿ ಕರ್ಫ್ಯೂ ಜಾರಿ . ಹೆಸರೇನೋ ಸುಶಾಂತಿ . ಇದನ್ನು "ಶಾಂತಿ ಅಶಾಂತಿಗಳ ಇರುವಿಕೆ ಯಾರ ಮೇಲೆ ಅವಲಂಬಿತವಾಗಿದೆಯೋ ಅವಳು"(ವಾಹನ ಸಂಚಾರ ಸಮಾಸ ) ಎಂದು ಅರ್ಥೈಸಬಹುದು. ಊರಿನಲ್ಲಿನ ಎಲ್ಲ ಘಟಾನುಘಟಿಗಳು "ಜೀವ ಇದ್ರೆ ಬೆಲ್ಲ ಬೇಡಿ ತಿಂಬೆ" ಎನ್ನುತ್ತಾ ಮನೆಯಲ್ಲಿ ಕೂರುವುದು ಸತ್ಯ .

ನೀವು ಉಡುಪಿಯಿಂದ ಭಟ್ಕಳಕ್ಕೆ ಹೋಗುತ್ತಿದ್ದೀರಾ ?? ಏನು ?? via ಕುಂದಾಪುರಾನಾ ??? ಬೇಡ .... ಈಗಲೇ ಎಚ್ಚರಿಸುತ್ತಿದ್ದೇನೆ . ನೋಡಿ ಸರ್ .. ಹಣ ಹೋದರೆ ನಾಳೆ ಸಂಪಾದಿಸಬಹುದು .ಕೊಳಲಗಿರಿ -ಪೆರ್ಡೂರು-ಹೆಬ್ರಿ -ಶಿವಮೊಗ್ಗ -ಸಿದ್ದಾಪುರ -ಕೊಲ್ಲೂರು - ಬೈಂದೂರು ಮಾರ್ಗದಿಂದ ಭಟ್ಕಳಕ್ಕೆ ಬನ್ನಿ . ಯಾಕೆ ಎಂದು ಕೇಳುತ್ತಿದ್ದೀರಾ ?? " ಸುಶಾಂತಿ ಇದ್ದಾಳೆ ಎಚ್ಚರಿಕೆ " ಏನು ?? ನಮ್ಮ ಬಳಿ license ಇದೆ ನಾವು ಹೀಗೆ ಹೋಗುತ್ತೇವೆ ಅನ್ನುತ್ತೀರಾ ?? ಅವಳ ಬಳಿ ಇಲ್ಲಾ ಸ್ವಾಮೀ ...

ಏನಿಲ್ಲ ಮೊನ್ನೆ ಇವಳು ದ್ವಿಚಕ್ರ ವಾಹನ ಕಲಿಯುವ ಹುಮ್ಮಸ್ಸಿನಲ್ಲಿ ನನ್ನ Honda Activa ಏರಿದಳು ನೋಡಿ . ಇವಳು ಮೊದಲೇ ಎಲೆಕ್ಟ್ರಿಕಲ್ ಇಂಜಿನಿಯರ್ . ಅದೂ 85 % ಅಂಕಗಳೊಂದಿಗೆ . ಕಲಿತ ವಿದ್ಯೆಯನ್ನೆಲ್ಲ ವಾಹನದ ಮೇಲೆ ಪ್ರಯೋಗ ಮಾಡಿದರೆ ಹೇಗೆ ನೋಡಿ ??ವಾಹನ ಹತ್ತಿದ ತಕ್ಷಣ " When a tow wheeler is started and you twist the acceleratore the fingers which encircle the accelarator will give the direction of motion" ಎಂಬ " THUMB RULE " apply ಮಾಡಿಯೇ ಬಿಟ್ಟಳು . ಅಂದರೆ ವಾಹನ ನಿಲ್ಲಿಸಲು accelarator ನ್ನು ಹಿಂದೆ ತಿರುಗಿಸಲು ಶುರು ಮಾಡಿದಳು . ಆ ದ್ವಿಚಕ್ರ ವಾಹನಕ್ಕೆ ಈ ನಿಯಮ ಗೊತ್ತಿಲ್ಲದಿದ್ದರೆ ಅದು ಇವಳ ತಪ್ಪೇ ?? ದಿಕ್ಕಾಪಾಲಾಗಿ ಓಡಲು ಶುರು ಮಾಡಿತು . ಪುಣ್ಯಕ್ಕೆ ಮೈದಾನದಲ್ಲಿ ಬಿಡುತ್ತಿದ್ದಳು . ಇಲ್ಲದಿದ್ದರೆ ಆ ದಿನ ಉಡುಪಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳು " HOUSE-FULL " ಬೋರ್ಡ್ ಹಾಕುತ್ತಿದ್ದವೋ ಏನೋ . !!!!!!!!!! ದೂರದಿಂದಲೇ ಇದನ್ನು ನೋಡಿದ ಊರ ಜನರು ಮರುದಿನದಿಂದ ಇವಳು ಮನೆಯಿಂದ ಹೊರನಡೆದರೆ ನಡೆದುಕೊಂಡು ಹೋಗುತ್ತಿದ್ದಾಳೋ ಅಥವಾ ವಾಹನದಲ್ಲೋ ಎಂದು ಮನೆಯ ಕಿಟಕಿಯಿಂದಲೇ confirm ಮಾಡಿಕೊಂಡು ಆಮೇಲೆ ಮನೆಯಿಂದ ಹೊರಬೀಳುತ್ತಿದ್ದರು .

ಇನ್ನು ಇವಳು ಕಾರು ಕಲಿಯ ಹೊರಟಳು . ಆ ಡ್ರೈವಿಂಗ್ ಸ್ಕೂಲ್ ನ ತರಬೇತುದಾರ ನೋಡಿ ಮೇಡಂ
10 km speed --1st gear
20km speed --second gear
30 km speed -- 3rd grear ----- ಹೀಗೆ ಸರಳ ಲೆಕ್ಕಾಚಾರ ಹೇಳಿದ . ಅದೇ ಅವನು ಮಾಡಿದ ತಪ್ಪು . ರಸ್ತೆ ನೋಡುವುದು ಬಿಟ್ಟು ಓಡೋ ಮೀಟರ್ ನೋಡುತ್ತಾ ಕುಳಿತಳು . ಮತ್ತೆ ಇವಳು ಗಾಡಿ ಬಿಡುವಾಗ ಕಡಿಮೆ ಎಂದರೂ ಒಂದು ಮೂವರು assistants ಬೇಕು .
1) Pen - Paper ಹಿಡಿದುಕೊಂಡು ಗಾಡಿ ಯಾವ gear ನಲ್ಲಿದೆ ಮತ್ತು ಗಾಡಿಯ speed ಎಷ್ಟು ಎಂದು ಲೆಕ್ಕ ಹಾಕಿ chaart Prepare ಮಾಡಿ ಹಿಂದಿನಿಂದ ಹೇಳಲು ಒಬ್ಬ .

2)ಅವನ ಮಾತು ಕೇಳಿ ಈಕೆ gear change ಮಾಡುತ್ತಾಳಲ್ಲ ಆಗ ಸ್ಟೇರಿಂಗ್ ಹಿಡಿದುಕೊಳ್ಳಲು ಒಬ್ಬ .

3) ಗಾಡಿಯ ಮುಂದೆ ಚಲಿಸುತ್ತ ರೋಡ್ ಹಂಪ್, ಟರ್ನ್ ಪಾಯಿಂಟ್ ಎಲ್ಲಿ ಬರುತ್ತದೆ ಮುಂತಾದ ವಿಷಯಗಳ ಲೇಟೆಸ್ಟ್ update ಕೊಡಲು ಇನ್ನೊಬ್ಬ .

ಮತ್ತೆ ಬಲಕ್ಕೆ ತಿರುಗುವಾಗ ಎಡಗಡೆಯ indicator ಹಾಕುವುದು horn ಎಂದು ವೈಪರ್ ಶುರು ಮಾಡುವುದು ಇದೆಲ್ಲ ಕಾಮನ್ ಬಿಡಿ . ಮುಂದೆ RTO ದವರು license ಕೊಡುವ ಮೊದಲು ಕುಂದಾಪುರದಲ್ಲಿ 2 ತಿಂಗಳು ಡ್ರೈವ್ ಮಾಡಿ ಬಂದಿರಬೇಕೆಂಬ ಕಂಡೀಷನ್ ಹಾಕಬಹುದು.

ಹೀಗೆ ಮನೆ-ಆಫೀಸು -ಅಡುಗೆ ಎಂದು ಸುಸ್ತಾಗುತ್ತೇನೆ . ಬಳಲಿ ಬೆಂಡಾಗಿ ಮನೆಗೆ ಮರಳಿದಾಗ ಮನೆ ಬಾಗಿಲಿನಲ್ಲಿ ಗೋಣು ಉದ್ದ ಮಾಡಿಕೊಂಡ ನನ್ನವಳು " ರೀ ನಿಮಗೋಸ್ಕರ ಕಾಯ್ತಾ ಇದ್ದೆ... ಬೇಗ ಟೀ ಮಾಡ್ರಿ..... ಎಂದು ತುಟಿಯಂಚಿನಲ್ಲಿ ನಕ್ಕಾಗ ಆ ನಗುವಿನಲ್ಲಿ ಸುಸ್ತೆಲ್ಲಾ ಮರೆತು ಹೋಗುತ್ತದೆ . ಏನೇ ಹೇಳಿ "ನನ್ನವಳು ನನ್ನೆದೆಯ ಹೊನ್ನಾಡನಾಳುವಳು " . ಇದೇ ನಾನು ಮತ್ತು ನನ್ನ ಸಂಸಾರದ ಕತೆ
==============================ವಿಕಟಕವಿ==================

Comments

Unknown said…
as usual the article was good ,especially the TOGARIBELE concept made me laugh like anything
Anonymous said…
ಎಷ್ಟು ನಕ್ಕಿದೀನಿ ಅಂದ್ರೆ.......

ತುಂಬಾ ಚೆನ್ನಾಗಿ ಬರೆಯುತ್ತೀರಿ. :)
Ashwin said…
good one :) keep posting...
Ravi K S said…
"ದೊಡ್ಡ ಪಾವಣೆ" ಕಥೆ ಏನು ಅದು ?

Rofl, Loved those poems...
Keep rocking..
ದೊಡ್ಡ ಪಾವಣೆಯ ಕಥೆ :- ನಾಣ್ಯಗಳ ಮೌಲ್ಯದ ಅರಿವಿಲ್ಲದ ಒಬ್ಬ ನೌಕರನು ಒಂದು ರೂಪಾಯಿ ಕೊಡುತ್ತೇನೆ ಎಂದರೆ ಕೆಲಸ ಮಾಡಲು ಒಪ್ಪದವನು ದೊಡ್ಡ ಪಾವಣೆಗೆ ಸಂತೋಷದಿಂದ ಕೆಲಸ ಮಾಡುತ್ತಾನೆ . ಕಾರಣ ದೊಡ್ಡ ಪಾವಣೆಯು ಗಾತ್ರದಲ್ಲಿ ಒಂದು ರೂಪಾಯಿಯ ನಾಣ್ಯಕ್ಕಿಂತ ದೊಡ್ಡದಿದೆ . ಹಾಗೆ ನುಗ್ಗೆಕಾಯಿಯಲ್ಲಿ ಅಂಗಡಿಯವನು ಚೆನ್ನಾಗಿದೆ ಎಂದು ಸಣ್ಣದು ಕೊಟ್ಟರೆ ನನ್ನ ಅರ್ಧಾಂಗಿಯು ಜಗಳ ಮಾಡಿ ಬಲಿತ ದೊಡ್ಡದು ತೆಗೆದುಕೊಂಡು ಬಂದಿದ್ದಾಳೆ ನನ್ನ ಮನೆಯವಳಿಗೆ ಯಾವಾಗ ಬುದ್ದಿ ಬರುತ್ತದೋ ನಾನರಿಯೆ .. :( :(
ಧನ್ಯವಾದಗಳು
ವಿಕಟಕವಿ :)
Arun vasushetty said…
yavaga maduve yadyo????
Arun vasushetty said…
This comment has been removed by the author.
Anonymous said…
Hi bro,

Read all the articles.....has come out very well....keep it up

Whether it is crictk commentary...or two wheeler driving...or any other article in your blog....i am the only person who can understand each and every lines..whom you are referring to to..what is your intention behind each word/sentence etc etc as these were the jokes we shared each other in past 20 years!!!

Thanks for documenting the same..keep it up

Yours
Vasanthanna.
bilimugilu said…
tumbaa chennagide,
just like that i came in to read and i enjoyed reading your blog.. infact tumbaa nagu bartittu..., nagisidakke dhanyavaadagaLu.
Thanks to all. Vasanthanna i do agree that even if all understand the literal meaning of my jokes in the article, only you can understand the hidden meaning in that :)
thanks once again
Vikatakavi
ತುಂಬಾ ಚೆನ್ನಾಗಿದೆ ಹಾಸ್ಯ...
Unknown said…
Very good article.

Popular posts from this blog

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ