Skip to main content

ಕಲ್ಯಾಣಮಸ್ತು............

ಹೌದು...ನಾನೀಗ ಬರೆಯುತ್ತಿರುವುದು ಮದುವೆ ಬಗ್ಗೆ. ಸ್ವಂತ ಅನುಭವ ಇಲ್ಲ ನಿಜ ಆದರೆ ಅಲ್ಲಿ -ಇಲ್ಲಿ ಕೇಳಿ -ಓದಿ- ನೋಡಿ ಮದುವೆ ಬಗ್ಗೆ ತುಂಬಾ ತಿಳಿದುಕೊಂಡಿದ್ದೇನೆ . "ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡಿ" ಎಂಬ ಗಾದೆಯೇ ಇದೆ . ಸ್ವಂತ ಅನುಭವದ ಮೇಲೆ ಒಂದು ಸಂಪುಟವನ್ನೇ ರಚಿಸುತ್ತೇನೆ . ಈಗ ಅದರ Trailors ನೋಡಿ ಆನಂದಿಸಿ . ಯಾಕೆಂದರೆ Picture abhi bhi baaki hai mere dost ......

ಮದುವೆ ಗೆ ಅಗತ್ಯ ಜನರು :
ಮದುವೆ ಗಂಡು ಯಾನೆ ವರ : "ಸಾಯೋ ಕುರಿಗೆ ಮೇಯೋದೆ ಕೆಲಸ " ಅನ್ನುತ್ತಾರಲ್ಲ ಹಾಗೆ ಇವನು . ನಕ್ಕು - ನಲಿದಾಡುತ್ತ ಭಾರೀ ಸಂತೋಷದಿಂದಿರುತ್ತಾನೆ . ಅದೇ ಅವನ ಕೊನೆಯ ನಗು . ನಗದು ತೆಗೆದುಕೊಂಡು ನಗುವುದ ಮರೆಯುವ ಭೂಪನೆಂದರೆ ಇವನೇ .

ಮದುವೆ ಹೆಣ್ಣು urf ವಧು :- ಜಿರಳೆಗೆ ಮೀಸೆ ತೂರಿಸ್ಲಿಕ್ಕೆ ಜಾಗ ಕೊಟ್ಟರೆ ಆಮೇಲೆ ಇಡೀ ಜೀವ ನುಗ್ಗುತ್ತದಂತೆ . ಅಂತೆಯೇ ಮದುವೆಗೆ ಮುನ್ನ ತಗ್ಗಿ ಬಗ್ಗಿ ನಡೆಯುವ ಮದುವೆಯ ನಂತರ "Ring Master" ನಂತೆ ಗಂಡನೆಂಬ ಬಡಪಾಯಿಯನ್ನು ಕಣ್ಣ ಸನ್ನೆಯಲ್ಲೇ ಕುಣಿಸುವ ಕನ್ಯಾಮಣಿ .

ಸಂಬಂಧಿಗಳು:-
2)ಅಪ್ಪ-ಅಮ್ಮ :ಹುಡುಗ ಹುಡುಗಿಯ ನಡುವೆ ಮುಂದೆ ನಡೆಯುವ Boxing ಪಂದ್ಯಾಟಕ್ಕೆ referee ಗಳು . Boxing ಪಂದ್ಯಕ್ಕೆ ಮೊದಲು ಸ್ಪರ್ಧಾಳುಗಳು shake hand ಮಾಡುವಂತೆ ವಧು -ವರರ ಕೈ ಮಿಲಾಯಿಸಿ ಶಾಸ್ತ್ರೋಕ್ತವಾಗಿ ವಾದ್ಯದವರ ಮುಖಾಂತರ ರಣಕಹಳೆ ಮೊಳಗಿಸುವವರು .
3) ಇತರರು :- ವಧುವಿನ ವಿದಾಯದ ಸಮಯದಲ್ಲಿ ಕಣ್ಣೀರು ಹಾಕಲು ಸ್ಪೆಷಲ್ ಬುಲಾವ್ ನಿಂದ ಬಂದ ಮಹಿಳೆಯರು . ಸ್ವಂತ ಕಾಲ ಮೇಲೆ ಕೊಡಲಿಯೇಟು ಹಾಕಿಕೊಳ್ಳುತ್ತಿರುವ ವರನ ಗ್ರಹಚಾರಕ್ಕೆ ಕನಿಕರಿಸುತ್ತಾ ಮೂಕಪ್ರೇಕ್ಷಕರಾಗಿ ನೋಡುತ್ತಿರುವ "ಹಿತೈಷಿಗಳು ".
4)ಕಲ್ಯಾಣ ಮಂಟಪ : ಕುಸ್ತಿ ಅಖಾಡ
5) ಪುರೋಹಿತರು : ಸಂಸ್ಕೃತದಲ್ಲಿ match ನ running commentry ಕೊಡುವವರು .

**************************** TYPES OF MARRIAGE ****************************

1)ಸ್ವಯಂವರ : ಪುರಾಣ ಕಾಲದಲ್ಲಿ ಮಹಾರಾಜರು ತಮ್ಮ ಮಗಳಿಗೆ ತಕ್ಕ ವರ ಹುಡುಕಲು ಬಳಸುತ್ತಿದ್ದ ವಿಧಾನ . ಎಲ್ಲ ಅತಿರಥ -ಮಹಾರಥರನ್ನು ಒಂದು common auditorium ನಲ್ಲಿ ಕರೆದು " All the participents are requested to come to the dias and show their talents.The winner is awarded with my daughter" ಎಂದು ಮಹಾರಾಜ announce ಮಾಡುತ್ತಿದ್ದ. SMS voting ಮತ್ತು commercial break ಇರಲಿಲ್ಲ ಅಷ್ಟೆ . ಅದು ಬಿಟ್ಟರೆ ಇದೂ ಒಂದು ರೀತಿಯ reality show.

2) ಇನ್ನು ನಮ್ಮ ಕೃಷ್ಣನದ್ದೋ ಒಂದು ಹೊಸ ಕೇಸ್ . ನಮ್ಮ MNC ಥರ mass recuitment. ಒಂದೇ ಸಲ 16000 ಮಂದಿ . ಮದುವೆ ಕಾರ್ಯ ಪೂರೈಸಲು ಕೆಲವಾರು ವರ್ಷ ಕಳೆದಿರಬಹುದು . ಆಮೇಲೆ ರಾಜಮನೆತನವೆಂದರೆ ಸಾಮಾನ್ಯವೇ ?? reception ,party ಅದು ಇದು ಎಂದು ಇನ್ನೊಂದಿಷ್ಟು ವರ್ಷ . ಮದುವೆಗೋ ಊಟಕ್ಕೆ ಬಂದವರಿಗಿಂತ ವಧುಗಳೇ ಹೆಚ್ಚು . Offset Printers ನವರು ಒಂದು C Programme ಬರೆದು ಅದರಲ್ಲಿ bride_name ಎಂದು variable declare ಮಾಡಿ ಆಮಂತ್ರಣ ಪತ್ರ print ಮಾಡಿರಬಹುದು. ವಾದ್ಯದವರ 25 ತಂಡ shift basis ನಲ್ಲಿ ಕೆಲಸ ಮಾಡುತ್ತಿದ್ದರಂತೆ . ಪುರೋಹಿತರೋ "ಹಾ ಸುಶೀಲ ನಿನ್ನ ಮದುವೆ ಮುಗಿಯಿತು ಮುಂದಿನ ತಿಂಗಳು 21 ನೇ ತಾರೀಕು ಸಂಜೆ 5:30 ಕ್ಕೆ ಬಾ ಅರಿಶಿನ -ಕುಂಕುಮ ಕಾರ್ಯಕ್ರಮ ಇದೆ ಎಂದು ಹೇಳಿ Processed list ನಲ್ಲಿ tick ಮಾಡಿಕೊಂಡು ,ಹಾ ..... next candidate ...... ಎಂದು ಕೂಗುತ್ತಿದ್ದರಂತೆ .ಇನ್ನು ಅಳುವವರಿಗೆ seperate ಛತ್ರ . ಇತ್ತ ಪುರೋಹಿತರು ಮದುವೆ ಮುಗಿಯಿತು ಅಂದ ಕೂಡಲೇ respective family ಯ ಮಹಿಳಾ ಮಣಿಯರು ಅಲ್ಲಿಗೆ ಹೋಗಿ ಅಳುವ ಕಾರ್ಯಕ್ರಮ ಶುರು ಮಾಡುತ್ತಿದ್ದರು .ಕೃಷ್ಣನೋ ದಿನಕ್ಕೆ 500 ರಂತೆ 32 ದಿನ ಕುಳಿತು ತನ್ನ ಹೆಂಡತಿಯರ ಹೆಸರು ಬಾಯಿಪಾಠ ಮಾಡುತ್ತಿದ್ದನಂತೆ . ಮೊದಲ ದೀಪಾವಳಿಗೆ ಅದೆಷ್ಟು ಸಲ ಎಣ್ಣೆ ಸ್ನಾನ ಮಾಡಿದನೋ ತಿಳಿಯದು . ಈ ಕಾಲದಲ್ಲಾಗಿದ್ದರೆ TCS -Infy ಯವರು ಈ ಹೆಂಡತಿಯ ಹೆಸರಿಗೋಸ್ಕರ ಹೊಸ database ,ಎಲ್ಲಾ ಹೆಂಡತಿಯರಿಗೆ ಒಂದೊಂದು access-card Login-ID ,password ಕೊಟ್ಟು ಹೊಸ software create ಮಾಡುತ್ತಿದರು .

ಇನ್ನು ಎಂತೆಂಥವರು ಜೋಡಿಯಾಗುತ್ತಾರೆ ನೋಡಿ ...............

ಅವಳೋ ಮಹಾತಾಟಕಿ ಅವನೋ ಒರಟು ಜಗಳಗಂಟ .ಪ್ರತೀ ದಿನ ಹಾವು-ಮುಂಗುಸಿ ಥರ ಜಗಳ .ಇವರಿಬ್ಬರಿಗೆ ಮದುವೆಯೆಂದು ತಿಳಿದ ಕೆಲವರು ಬೆಚ್ಚಿ ಬಿದ್ದರೆ ಇನ್ನು ಕೆಲವರು ಊರು ಬಿಟ್ಟರು . ಮದುವೆಯ ದಿನ hall ನ ಸುತ್ತ STF ನವರ ಪಹರೆ .ಯಾಕೆಂದರೆ ಇವರಿಬ್ಬರು ಒಂದೇ ಸೂರಿನಡಿ ಇದ್ದರೆ ಸುತ್ತ-ಮುತ್ತ 200 ಮೀಟರ್ ವಲಯ ಜನವಸತಿಗೆ ಯೋಗ್ಯವಲ್ಲ ಅಲ್ಲಿ ಸದಾ ಕಾಲ ಕರ್ಫ್ಯೂ ಇರುತ್ತದೆ ಎಂದು ಭಾವಿಸಿದ್ದರೆ ಮದುವೆಯ ನಂತರ ಅವರಿಬ್ಬರೂ ಅನ್ಯೋನ್ಯ ಜೀವನ ನಡೆಸುತ್ತಾರೆ . ಇನ್ನೊಂದೆಡೆ ಮದುವೆಗೆ ಮೊದಲು ಶೀತವಾದರೆ ಆ ssssss ಕ್ಷೀ ssss ಎಂದು ಸೀನದೆ ಲೋಕಲ್ ಬಾಜಲ್ ಬಾಟ್ಲಿ ಓಪನ್ ಮಾಡಿದಂತೆ "ಇಚೀ" ಎಂದು ಸೀನುವ ಹುಡುಗಿಯನ್ನು ಕಂಡು "ಹುಡುಗಿ ಸ್ವಲ್ಪ ಮೌನಿ ತಣ್ಣೀರನ್ನು ತಣಿಸಿ ಕುಡಿಯುವವಳೆಂದುಕೊಂಡರೆ ಮದುವೆಯ ನಂತರ ಮನೆಯ ಹೆಂಚು ಹಾರಿ ಹೋಗುವ ರೀತಿಯಲ್ಲಿ ತಾರಕಸ್ವರದಲ್ಲಿ ಚೀರುವ ಹೆಂಡತಿಯನ್ನು ಕಂಡು ಅಕ್ಕ - ಪಕ್ಕದವರು "ಏನಪ್ಪಾ .. ಇವಳು ನಿನ್ನ ಎರಡನೇ ಸಂಸಾರಾನಾ ??" ಎಂದು ಕೇಳಿದಾಗ " ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯೀ " ಅಂದುಕೊಂಡು ಮದುವೆಯಾದೆನು ಆದರೆ ಕೋಟಿ ರುಪಾಯಿ ಖರ್ಚು ಎಂದು ಆಮೇಲೆ ತಿಳಿಯಿತು ಎನ್ನುತ್ತಾನೆ .

3)ಇನ್ನೊಂದೆಂದರೆ ಕಲಿಯುಗದ Love-marriage. ಕಾಡಿಗೆಗೆ ಸವಾಲೆಸೆಯುವಂತೆ ಕೃಷ್ಣವರ್ಣದ ಹುಡುಗ ಬೆಳದಿಂಗಳನ್ನೂ ನಾಚಿಸುವಂತೆ ಶ್ವೇತವರ್ಣದ ಹುಡುಗಿಯನ್ನು ಮದುವೆಯಾದಾಗ ಹುಟ್ಟುವ ಮಗುವಿನ ಮೇಲೆ Zebra ಥರ ಪಟ್ಟಿಗಳಿರುತ್ತವೆ ಎಂಬುದು ಊರ ಜನರ ಭಾವನೆ .ಅದರ ಮೇಲೆ ದಂಪತಿಗಳು ನಮ್ಮದು Love Marriage ಎಂದಾಗ ಪ್ರೇಮ ಕುರುಡು ಮಾತ್ರವಲ್ಲ ಕುಂಟು ಕಿವುಡು ಮೂಕ ಎಲ್ಲವೂ ಆಗಿದ್ದು ಪ್ರೇಮದ ಯಾವುದಾದರೂ part working condition ನಲ್ಲಿ ಇದೆಯೋ ಇಲ್ಲವೋ ಎಂದು ಸಂಶಯ ಬರುವುದು ಸಹಜ .

ವಿದೇಶಗಳಲ್ಲಿ ದಿನಕ್ಕೊಬ್ಬ ಜೀವನ ಸಂಗಾತಿಯಾದರೆ ನಮ್ಮ ದೇಶದಲ್ಲಿ ಜೀವನಕ್ಕೊಬ್ಬ ಸಂಗಾತಿ . ಅದಲ್ಲದೆ 7 ಜನ್ಮಗಳ contract ಬೇರೆ . ಹೀಗೆ ಮದುವೆಯೆಂಬುದು ಎಲ್ಲರ ಜೀವನದ ಒಂದು ತಿರುವು . ಆ ತಿರುವು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬುದು ಪರಸ್ಪರ ಹೊಂದಾಣಿಕೆಯ ಮೇಲೆ ನಿಂತಿದೆ .
ಬೆಚ್ಚನೆಯ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು
ಇಚ್ಚೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ -ಸರ್ವಜ್ಞ
ಎಂಬ ತ್ರಿಪದಿಯಂತೆ ಎಲ್ಲರ ವೈವಾಹಿಕ ಜೀವನ ಸುಖಮಯವಾಗಲಿ ಎಂದು ಹಾರೈಸುತ್ತೇನೆ .
So, In short ಎಲ್ಲರಿಗೂ ಕಲ್ಯಾಣಮಸ್ತು !!!!!!!!!!!!
******************************************** ವಿಕಟಕವಿ **********************

Comments

ಸೂಪರ್ ವಿಕಟಕವಿಗಳೇ!
Anonymous said…
ಮದ್ವೆ ಪುರಾಣ ಬಲ್ ಪಸಂದಾಗೈತೆ ಕಣಣ್ಣೋ...

ಹಿಂದಿನ ಜನ್ಮದಲ್ಲಿ ವಿಜಯನಗರ ಆಸ್ಥಾನದ ವಿಕಟಕವಿ ಆಗಿದ್ದಿದು ನೀವೇನಾ?;-)
ಇದು ಅಡ್ಡಿಇಲ್ಲಾ.. ಓದುಹಂಗ್ ಇತ್ತು.. ಆ ಶಿವಮೊಗ್ಗಾಕಿಂತಾ ಇದೇ ಬೆಟರ್..

ನಾ ಇಲ್ಲೇನು ಹೇಳ್ತೀನಿ ಅದರ ಬಗ್ಗೇ ತಲಿ ಕೆಡಸ್ಕೋಬ್ಯಾಡ. ನನಗ ಬೇಕಾದಂತಾದ್ದು ಬರಿಬೇಕಂತೇನಿಲ್ಲಾ.. ನೀ ಬರದಿದ್ದೆಲ್ಲಾ ನನಗ ಛೊಲೋ ಅನಸ್ತದಂತನೂ ಇಲ್ಲಾ..

ನಿನ್ನಷ್ಟಕ್ಕ ನೀ ಬರಿ. ಹಿಂತಾದೆಲ್ಲಾ ನಮ್ಮ ಟೈಪ್ ಪೋಸ್ಟ ಅಲ್ಲಾ.. ಹಿಂತಾವು ಓದು ಮಂದಿ ಬ್ಯಾರೇ ಇದ್ದಾರ. ಕ್ಯಾರಿ ಆನ್ ಜಾನಿ. ಚಚ್ಚಾಡು ಮಛಾ..

Popular posts from this blog

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ