Skip to main content

ಮುಂಬೈಯೊಳಗೊಂದು ಮನೆಯ ಮಾಡಿ ರೈಲಿಗಂಜಿದೊಡೆಂತಯ್ಯಾ ????












********** "Platform ಕ್ರಮಾಂಕ್ ಚಾರ್ ವರ್ ಆಲೇಲಿ ಲೋಕಲ್ ಆಟ್ ವಾಜ್ಹೂನ್ ಇಕುನ್ ಚಾಲಿಸ್ ಮಿನಿಟಾಂಚಿ ಹಾರ್ಬರ್ ಲೈನ್ ವರೂನ್ ಶಿವಾಜಿ ಟರ್ಮಿನಸ್ ಲಾ ಜ್ಹಾಣಾರಿ ಧೀಮಿ ಲೋಕಲ್ ಆಹೇ "

--------------7:30 ಕ್ಕೆ ರೈಲ್ವೆ ಸ್ಟೇಶನ್ ನಲ್ಲಿದ್ದ ನಾನು ಬಿಕೋ ಎನ್ನುತ್ತಿದ್ದ ಸ್ಟೇಷನ್ನನ್ನು ನೋಡಿ ,ಅಬ್ಬಾ.... ಇಂದಾದರೂ ಸುಖವಾಗಿ ಕುಳಿತು ಹೋಗಬಹುದು ಎಂದು ಮನಸ್ಸಿನ ಮಂಡಿಗೆ ತಿನ್ನುತ್ತಿದ್ದೆ . ಆದರೆ .... ಎಲ್ಲಿ ? ಏನು ?ಹೇಗೆ? ಎತ್ತ ? ತಿಳಿಯದು ರೈಲಿನ ಆಗಮನಕ್ಕೆ 2 ನಿಮಿಷ ಮೊದಲು ಇರುವ 10 ದಿಕ್ಕು ಸಾಲದೇ ಇನ್ನೆರಡು extra ದಿಕ್ಕುಗಳನ್ನು ಸೃಷ್ಠಿಸಿಕೊಂಡು ಜನಪ್ರವಾಹ ಹರಿದು ರೈಲಿನಲ್ಲಿ ಬಿಡಿ platform ನಲ್ಲೂ ನಿಲ್ಲಲು ಜಾಗ ಇಲ್ಲದಾಯಿತು . " ಹ್ಹಾ .... ಚಲಾ .... " " ಉತರ್ಕೆ ಚಡೋ ಭಾಯಿ" ಕೂಗು. Engineering college ,love ಮತ್ತು local train ಈ ಮೂರು ವಿಷಯಗಳಲ್ಲಿ common ಏನೆಂದರೆ ಒಳಗಿರುವವರು ಹೊರಗೆ ಬಂದರೆ ಸಾಕೆಂದುಕೊಂಡರೆ ಹೊರಗಿರುವವರು ಒಳಗೆ ಸೇರುವ ತವಕದಿಂದಿರುತ್ತಾರೆ . Mechanical ನಲ್ಲಿ Engineering ಮಾಡಿರುವ ನಾನು Ph.D ಗಾಗಿ “Physical analytical psychological and logical study on Mubai-Local trains and the crowd,Arrival-Departure timings,Handling the crowd, Tragedies included and strategies to get in and get out in a safe and secured way” ಎಂಬ ಮಹಾಪ್ರಬಂಧವನ್ನು Railway University ಗೆ ಮಂಡಿಸಿರುತ್ತೇನೆ . ಅದರ ಆಯ್ದ ಭಾಗಗಳನ್ನು ಈ ಲೇಖನದಲ್ಲಿ ಪ್ರಕಟಿಸಿರುತ್ತೇನೆ .
--------------------------------© Copyrights Reserved .----------------

ಮುಂಬೈ -ಮಹಾನಗರಿ -ವ್ಯಾಪಾರ ವಹಿವಾಟುಗಳ ಕೇಂದ್ರ -ಭಾರತದ ಆರ್ಥಿಕ ರಾಜಧಾನಿ ಇನ್ನೂ ದೊಡ್ಡ ಉಪಮಾಲಂಕಾರ ಬಳಸಿ ಮುಂಬೈ ನಗರವನ್ನು ವರ್ಣಿಸಬಹುದು . ಆದರೆ " History is always written by the winner" ಎಂಬ ಕಟು ಸತ್ಯ ಇಲ್ಲಿ ಬಂದಾಗಲೇ ತಿಳಿಯುತ್ತದೆ . ತಾಜ್ ಹೋಟೆಲ್ ನ ರೂಮಿನಲ್ಲಿ A/c temperature 25* ಇದೆ,ಗರ್ಮಿ ಹೆಚ್ಚಾಗಿದೆ temperature ಕಡಿಮೆ ಮಾಡಿ ಎಂದು complaint ಮಾಡುವವರು ಕೆಲವರಾದರೆ "ಸೋರುತಿಹುದು ಮನೆಯ ಮಾಳಿಗೆ ...... ಬಡತನದಿಂದ ... ಎಂದು ಹರಕು ಗುಡಿಸಲಿನಲ್ಲಿ ಬರಿ ನೆಲದ ಮೇಲೆ ಬರಿಮೈಯಲ್ಲಿ ಮಲಗುವವರು ಕೆಲವರು . Mrine drive ನ Queen's necklace,Juhu beach,Gateway of india ದ ವರ್ಣನೆಯನ್ನು ಬಹಳಷ್ಟು ಲೇಖನಗಳಲ್ಲಿ ನೀವು ಓದಿರಬಹುದು . ಆದರೆ ಬೊರಿವಿಲಿ ,ಅಂಧೇರಿ ,ಕುರ್ಲಾ ದ ಸ್ಟೇಷನ್ ಪಕ್ಕದ slum area ದಲ್ಲಿರುವ ಜನರ ಕಂಡು ಕೇಳರಿಯದ ದಾರುಣ ಬದುಕಿನ ಉಲ್ಲೇಖ ನೀವೆಲ್ಲೂ ನೋಡಿರಲಾರಿರಿ . ಐಷಾರಾಮದ ಶೋಕಿಯ ಬದುಕಿನಲ್ಲಿ ಕೆಲವರಿದ್ದರೆ ಅದರ ಎರಡರಷ್ಟು ಜನ ಕಿತ್ತು ತಿನ್ನುವ ಬಡತನದ ಬೇಗೆಯಲ್ಲಿ ಒಪ್ಪತ್ತಿನ ಊಟಕ್ಕೆ ದಿನವಿಡೀ ಬೆವರಿಳಿಸುತ್ತಾರೆ. ದಿನಬೆಳಗಾದಂತೆ Nature's call ಗಳಿಗೆ ಓಗೊಟ್ಟು ನಿರ್ಲಜ್ಜರಾಗಿ ರೈಲ್ವೇ ಹಳಿಯ ಪಕ್ಕದಲ್ಲಿ ಪುರುಷರು call attend ಮಾಡಿದರೆ ಮಹಿಳೆಯರು call on hold ಇಟ್ಟು ರೈಲಿನ ನಿರ್ಗಮನಕ್ಕೆ ಕಾಯುತ್ತಿರುತ್ತಾರೆ . ಹೀಗೆ A/c ರೂಮಿಗಿಂತ ಬಿಸಿ-ಬಿಸಿ ಜೋಪಡಿಗಳಲ್ಲಿ ಮಲಗುವವರೇ ಹೆಚ್ಚು . ಇದೆ ಹಾಸ್ಯ ಲಹರಿಯಲ್ಲಿ ಮುಂಬೈ ನಗರದ ನೈಜ ಚಿತ್ರಣ .

------ಇನ್ನು ಉಳಿದವರ ಜೀವನ ಒಂದು ಶೃತಿ - ಲಯಕ್ಕೆ ಸೆಟ್ ಆಗಿರುತ್ತದೆ . ಬೆಳಿಗ್ಗೆ 6am ಏಳುವುದು ,7:10ಕ್ಕೆ Direct ಅಂಧೇರಿ ಲೋಕಲ್ ,08:45 ಕ್ಕೆ office . ಸಂಜೆ 06:30 ಕ್ಕೆ office ನಿಂದ ಹೊರಟು ನಡುವೆ ಮಾರ್ಕೆಟ್ ನಿಂದ ಹಣ್ಣು - ತರಕಾರಿ ತೆಗೆದುಕೊಂಡು 9 pm ಗೆ ಮನೆಗೆ ಹೋಗುವುದು . Weekend ನಲ್ಲಿ ಯಾವುದೋ ಒಂದು mall ನಲ್ಲಿ ಸಪರಿವಾರ ಸಮೇತ Shopping . ಇದೆ ಕ್ಯಾಸೆಟ್ಟನ್ನು ಪ್ರತೀ ದಿನ ಪ್ರತೀ ವಾರ Rewind and Play ಮಾಡುವ ಒಂದು ರೀತಿಯ ಯಾಂತ್ರಿಕ ಬದುಕು . ಇನ್ನು ಅವಿವಾಹಿತರಾದರೆ ಗುಂಡು-ತುಂಡಿನೊಂದಿಗೆ ಕೆಲವರಾದರೆ ಇಡೀ ವಾರದ pending ನಿದ್ರೆಯ balancing ನಲ್ಲಿ ನಿದ್ರಾದೇವಿಯ ಮಡಿಲಲ್ಲಿ ಕೆಲವರು . ತಿಂಗಳ ಮೊದಲ sunday ಸಂಬಳ ಬಂದ ಹುಮ್ಮಸ್ಸಿನಲ್ಲಿ ಸ್ಟಾರ್ ಹೋಟೆಲ್ ನಲ್ಲಿ ಚಿಕನ್ ತಂದೂರಿ ತಿಂದರೆ month end ನಲ್ಲಿ " ಸ್ವಲ್ಪ tight ಮಗಾ ....." ಎಂದೋ ಅಥವಾ " Stomach upset " ನ ನೆಪ ಮಾಡಿಯೋ ಪರಿಶುದ್ಧ ಸಸ್ಯಾಹಾರಿಗಳಾಗಿ ಲೋಕಲ್ ಜಂಬೋ ವಡಾ-ಪಾವ್ ಗೆ ಶರಣಾಗತಿ .

************ ENTER==MISSION==LOCAL==TRAIN***********

*******Local Train , ಮುಂಬೈ ನಗರದ ಜೀವನಾಡಿ . ಮುಂಬಾ ದೇವಿಯ Official transport Vehicle. ಈ ಮುಂಬ ದೇವಿಯನ್ನು ಒಲಿಸಿಕೊಳ್ಳಲು ಭಾರೀ ಕಠೋರ ತಪಸ್ಸು ಅಗತ್ಯ . ಅದೇನೆಂದರೆ 2 ವರ್ಷ ವಿರಾರ್ ನಿಂದ ಬೊರಿವಿಲಿಯ ತನಕ ಬೆಳಿಗ್ಗೆ 9 ರಿಂದ 10:30 ರೊಳಗೆ 2nd class ನಲ್ಲಿ ಪಯಣಿಸಿ ಸಂಜೆ 6:30 ರಿಂದ ಗ 8 ರೊಳಗೆ ವಾಪಸ್ ಬರಬೇಕಂತೆ . ನಿರಾಹಾರ ನಿರ್ಜಲ ತಪಸ್ಸಿಗಿಂತ ಇದು ತುಂಬಾ ಕಠಿಣ ಯಾಕೆಂದರೆ ಬದುಕಿ ಉಳಿಯುವ Probability ತುಂಬಾ ಕಡಿಮೆ . ಪುರಾಣ ಕಾಲದ ರಾಕ್ಷಸರು ತಾವು ಅಮರರಾಗಲು ತಮ್ಮ ಎಲ್ಲಾ talent use ಮಾಡಿ ಏನೇನೋ ವರ ಕೇಳಿದರೂ ದೇವರು ಅದರಲ್ಲಿ ಒಂದಲ್ಲ ಒಂದು Loop-Hole ಹುಡುಕಿ ಅದನ್ನು ಬಳಸಿ ಅವರ ಸಂಹಾರ ಮಾಡುತ್ತಿದ್ದ .ಆದರೆ ಯಾವುದೇ ರಾಕ್ಷಸ "ಮುಂಬೈ ನ ಒಂದು ಲೋಕಲ್ ಟ್ರೈನ್ ಬೆಳಿಗ್ಗೆ 9 ಕ್ಕೆ ವಿರಾರ್ ನಿಂದ CST ತನಕ ಒಬ್ಬನೂ ಪ್ರಯಾಣಿಕನಿಲ್ಲದೆ ಚಲಿಸಿದ ದಿನ ನನ್ನ ಮರಣ ಬರಲಿ ಎಂದಿದ್ದಲ್ಲಿ ಅವನು ಖಂಡಿತಾ ಅಮರನಾಗುತ್ತಿದ್ದ .ಹೀಗೆ ಲೋಕಲ್ ಟ್ರೈನ್ ಇಲ್ಲದ ಮುಂಬೈ ನಗರ ಲಾಡಿ ಇಲ್ಲದ ಪೈಜಾಮದಂತೆ ಅಪೂರ್ಣ ಮತ್ತು ಅನೂಹ್ಯ .

ಇನ್ನು ರೈಲ್ವೇ ಸ್ಟೇಷನ್ನನ್ನು ವರ್ಣಿಸುವುದಾದರೆ ಅದು ಹೀಗಿದ್ದೀತು.....

Train ನ ನಿರೀಕ್ಷೆಯಲ್ಲಿ ಪ್ರಯಾಣಿಕರು , 24><7 ಗಸ್ತು ತಿರುಗುವ ಪೇದೆ . ದೂರದಲ್ಲಿ ಮಲಗಿರುವ ಭಿಕ್ಷುಕ & family . ಒಂದು ವಡಾ-ಪಾವ್ ಅಂಗಡಿ . ಬುಟ್ಟಿಯಲ್ಲಿ ಹೆಚ್ಚಿದ ನೀರುಳ್ಳಿ -ನಿಂಬೆ ಮಸಾಲೆಯೊಂದಿಗೆ ಚುರುಮುರಿಯವನು . ನೀರು ಚಿಮುಕಿಸಿ Platform clean ಮಾಡುವ Railway department ಕೆಲಸದವರು . ಕಿತ್ತಳೆ -ಮುಸುಂಬಿ -ಕರ್ಚೀಪು-ಆಟಿಕೆ -Train Schedule Book ಮಾರುವವರು ಇತ್ಯಾದಿ . ಇನ್ನು ಹೊಸದಾಗಿ ಮುಂಬೈ ಗೆ ಬಂದು ಯಾವ ರೈಲು ಹಿಡಿಯಬೇಕೆಂದು ತಿಳಿಯದೆ ಹತ್ತು ಜನರ ದಿಗ್ದರ್ಶನದಿದಂದ ದಿಕ್ಕುತಪ್ಪಿ Display Board ನ 10:57 BR ನಲ್ಲಿ BR ನ ಅರ್ಥ ಬೇಲಾಪೂರ್ ,ಬದ್ಲಾಪೂರ್ , ಬೊರಿವಿಲಿ, ಬಾಂದ್ರಾ ಇವುಗಳಲ್ಲಿ ಯಾವುದೆಂದು ತಿಳಿಯದೆ ಕಣ್ಣು ಮಿಟುಕಿಸುತ್ತಾ ಕಂಗಾಲಾಗಿರುವ ನವ-ಪ್ರಯಾಣಿಕ . Track ನ ಮೇಲೆ ಎಲ್ಲ Brand ನ ಗುಟ್ಕಾ ಪ್ಯಾಕೆಟ್ ಮತ್ತು ಅದರ ಕೆಂಪು ರಂಗೋಲಿ .
ರೈಲಿನ ಒಳಗಿನ ವರ್ಣನೆ ಬಹಳ ಸುಲಭ . "ಜನರು ". ನ್ಯೂಟನ್ ನ ಚಲನೆಯ ಯಾವ ನಿಯಮಗಳೂ ಇಲ್ಲಿ ಅನ್ವಯಿಸುವುದಿಲ್ಲ . ಇಲ್ಲಿ ಒಂದೇ ನಿಯಮ Might is Right . ಒಂದು ವೇಳೆ ವಿಜ್ಞಾನ -ತಂತ್ರಜ್ಞಾನಗಳೊಂದಿಗೆ ತರ್ಕ -ಗಣಿತ -ಛಂದಸ್ಸನ್ನು ಮೇಳೈಸಿ ಐನಸ್ಟೀನ್ -ನ್ಯೂಟನ್-ರಾಮನ್ ರ ಕೊಡುಗೆಗಳ ಸಹಕಾರದಿದಂದ ಒಂದು ಹೊಸ ನಿಯಮ ಸೃಷ್ಟಿಸಿದರೆ ಅದು
"The probability of a person getting down in a specific station is directly proportional to the number of people getting down the train in that station and inversly proportional to the number of people getting into of the train in the same station for a given train hault time ಎಂದಾಗಬಹುದು
So,
P = K (People in ) / (Peopleout )
K = 0.5 for borivili to Virar .
K = 0.7 Andheri, Thane.
K = 0.63 for Kurla Dadar.
K = 0.95 for Harbour line beyond Vashi.

ಜನ -ಜನ-ಜನ ನೂಕು-ನುಗ್ಗಾಟ . First class,Second class, Ladies compartment,Goods compartment ಎಂಬ ಯಾವ ಮುಲಾಜು - ತಾರತಮ್ಯವಿಲ್ಲದೆ ಟ್ರೈನ್ ನೊಳಗಿನ ತ್ರಿಕಾಲ ಸತ್ಯ "The eternal Truth" . ಒಳಗೆ ಹತ್ತಿದ ನಂತರ ಮತ್ತು ಕೆಳಗೆ ಇಳಿದ ನಂತರ ನಿಮ್ಮ ದೇಹದ ಎಲ್ಲ ಪಾರ್ಟ್ ಗಳು ನಿಮ್ಮೊಂದಿಗಿದೆಯೋ ಇಲ್ಲವೊ ಎಂದು check ಮಾಡಿಕೊಳ್ಳಬೇಕು . ಒಳಗೆ ಹತ್ತುವ ಮುನ್ನ High Risk Coverage ಇರುವ LIC Policy ಹೊಂದಿರುವುದು Must and Should. ಟ್ರೈನ್ ನಲ್ಲಿ ಪ್ರಯಾಣಿಸುವಾಗಲೋ ನಿಮಗೆ ಬ್ರಹ್ಮಾನಂದ ಪ್ರಾಪ್ತಿ . ಯಾಕೆಂದರೆ ನಿಮ್ಮ ಹೆಗಲ ಮೇಲೆ 4 ತಲೆ ಕಾಣಿಸಿಕೊಂಡು ತಾವು ಸ್ವಯಂ ಚತುರ್ಮುಖ ಬ್ರಹ್ಮನಾಗಿರುತ್ತೀರಿ ಹಾಗೂ ನಿಮ್ಮ ಸೊಂಟದ ಕೆಳಗೆ ಕನಿಷ್ಠ 8 ಕಾಲುಗಳಿರುತ್ತವೆ . ತುರಿಕೆ ಶುರುವಾದಲ್ಲಿ Trail And Error method ನಿಂದ ನಿಮ್ಮ ಕಾಲು ಯಾವುದೆಂದು ಹುಡುಕಿಕೊಳ್ಳಬೇಕಾದ ಪರಿಸ್ಥಿತಿ .ಕುತ್ತಿಗೆ ನೋವೆಂದು ಅಪ್ಪಿ ತಪ್ಪಿ ಕುತ್ತಿಗೆಯನ್ನು 28 1/2 * ತಿರುಗಿಸಿದರೆ ಎರಡೂ ಕೆನ್ನೆಗೆ 4 Kiss ಸಿಗುವುದು ಖಂಡಿತ. ನಂಬಿಕೆಯಲ್ಲಿ ಇಲ್ಲಿಯವರು #1 . ಕಂಬ ಹಿಡಿದು ಒಬ್ಬ ನೇತಾಡುತ್ತಿದ್ದರೆ ಅವನ ಕೈ ಹಿಡಿದು ಇಬ್ಬರು ಉಯ್ಯಾಲೆ ಆಡುತ್ತಿರುತ್ತಾರೆ.ಇನ್ನು ಟ್ರೈನಿನಲ್ಲಿ ಜಂಟಿಯಾಗಿ ಹೋಗುವ ಬಂಟಿ - ಬಬ್ಲಿ ಜೋಡಿಯಲ್ಲಿ ಬಂಟಿ - ಬಬ್ಲಿ ನಡುವೆ Fevicol Bond ಇರುತ್ತದೆ . ಜನಜಂಗುಳಿಯನ್ನು ನಿಜವಾಗಿ ಪ್ರೀತಿಸುವರೆಂದರೆ ಇವರೇ . ಜನ ಹೆಚ್ಚಿದ್ದಷ್ಟು ಇವರ ನಡುವಿನ ಬೆಸುಗೆ ಬಲವಾಗುತ್ತದೆ. ಸ್ಥೂಲಕಾಯಕ್ಕೆ ಲೋಕಲ್ ಟ್ರೈನ್ ರಾಮಬಾಣ .ಒಂದೇ ತಿಂಗಳಿನಲ್ಲಿ ಬೊಜ್ಜು ಕರಗಿ ಆಮೇಲೆ ದಪ್ಪವಾಗಲು ಚ್ಯವನಾಪ್ರಾಶ್ ಸೇವಿಸಬೇಕಾಗಬಹುದು. 2 ಬೋಗಿಗಳ ನಡುವೆ sandwich ಆಗಿ ಪಯಣಿಸುವವರಿಂದ ಟ್ರೈನ್ ನ ಮೇಲೆ ಹತ್ತಿ ಪಯಣಿಸುವ "ಮಾಣಿಕ್ ಚಂದ್ " ಬ್ರಾಂಡ್ ನವರೂ ಇದ್ದಾರೆ .

ಕರ್ಣಾಟಕದ ಕವಿಮಹಾಶಯರು ಲೋಕಲ್ ಟ್ರೈನ್ ನಲ್ಲಿ ಪಯಣಿಸಿದಲ್ಲಿ ಅವರ ಭಾವನೆ ಅವರದೇ ಆದ ಶೈಲಿಯಲ್ಲಿ ಹೀಗಿದ್ದೀತು ....... ( ಎಲ್ಲರ ಕ್ಷಮೆ ಕೋರುತ್ತಾ....... )

1) ಭಾಮಿನೀ ಷಟ್ಪದಿಯ ರಾಜ ಕುಮಾರವ್ಯಾಸ ಹೀಗೆಂದಾನು......
ಜನರ ಹಿತವಚನವನು ಕೇಳದೆ
ಮನದಿ ಮಾಡುತ ಮರುಳು ಧೈರ್ಯವ
ಜನನಿಬಿಡ ರೈಲಿನಲಿ ಚಲಿಸುವ ತಪ್ಪು ಮಾಡಿದೆನು.
ಬೆನ್ನು ಮುರಿಯಿತು ಪರ್ಸು ಕಳೆಯಿತು
ಪ್ರಾಣ ಉಳಿದರೆ ಸಾಕೆನುತ ಕಂ
ಬನಿಯ ಸುರಿಸುತ ನಿಟ್ಟುಸಿರಿಡುತ ಮನೆಗೆ ತೆರಳಿದೆನು .

2) *********************************** ದಾಸರು ************************
ಈ ಪರಿಯ ಸೊಬಗಾವ ನಗರದಲಿ ನಾ ಕಾಣೆ .. ಮುಂಬಾ ದೇವಿಯ ನಗರ ಬೊಂಬಾಯಿಗಲ್ಲದೆ ......

3) ************************ ಸರ್ವಜ್ಞ ***************************
ರೈಲಿನಲ್ಲಿ ಚಲಿಸುವುದು ಹುಲಿಯೊಡನೆ ಸೆಣಸುವುದು
ಹಾಲಹಲವ ಕುಡಿಯುವುದು ಕೆರಳಿಸುತ
ಕಾಲನನು ಕರೆದಂತೆ --ಸರ್ವಜ್ಞ

4) ***************************** ಡಿ. ವಿ. ಜಿ. **********************
ಹಳಿಯ ಮೇಲಿನ ಬದುಕು ರಗಳೆಗಳು ನೂರೆಂಟು
ಹಳಿಯುವುದು ತುಳಿಯುವುದು ಸರ್ವೇಸಾಮಾನ್ಯ
ಉಳುಕಿದರೆ ಕೈಕಾಲು ಕಳೆದುಹೋದರೆ ಸೊತ್ತು
ಅಳುತ ಇಳಿಯುವುದೇ ಗತಿ --ಮಂಕುತಿಮ್ಮ

5) ****************** ದಿನಕರ ದೇಸಾಯಿ ******************
ಪ್ರೇಮಿಸಲು ಇದಕು ಸುಸ್ಥಳವೆಲ್ಲಿ ಹೇಳಿ
ಪ್ರೇಯಸಿಗೆ ಪ್ರಿಯತಮನ ಅಪ್ಪುಗೆಯ ಬೇಲಿ
ಕಳ್ಳರೋ ನಿಮಗಿಲ್ಲಿ ಹಾಕುವರು ನಾಮ
ಇಳಿಯುತಿರೆ ಜೋಕೆ ಜಾರೀತು ಪೈಜಾಮ

6)*************************ದ . ರಾ . ಬೇಂದ್ರೆ *************************
ನೀ ಹೀಂಗ ದೂಡ ಬ್ಯಾಡ ನನ್ನ ,ನೀ ಹೀಂಗ ದೂಡ ಬ್ಯಾಡ ನನ್ನ ,
ನೀ ಹೀಂಗ ದೂಡಿದರ ನನ್ನ ಗೆಳೆಯ ನಾ ಹೇಂಗ ಹತ್ತಲಿ ಟ್ರೈನ ..............

7)********************** ಕುವೆಂಪು ***********************
ಅಡಿಯ ಕೀಲು ಉಳುಕಿ ಕಾಲು
ನೋವು ನಿನಗೆ ಬರುತಿರೆ
ಜನರು ಬರೆ ನುಗ್ಗುತಿರೆ
ಪುಣ್ಯ ಪ್ರಾಣ ಉಳಿದರೆ

ಹತ್ತು ಇಳಿದು ನೂರು ಏರಿ
ಇಳಿಯಲಿಕ್ಕೆ ಇಲ್ಲ ದಾರಿ
ಕುರ್ಲಾದಲ್ಲಿ ಇಳಿವ ನಾನು ದಾದರ್ ಹೋಗಿ ಇಳಿದೆನು
ರೈಲ ಸಂಗ ಬಿಟ್ಟು ಬಸ್ಸಿನಲ್ಲಿ ಮರಳಿ ಹೋದೆನು

ಓ ನನ್ನ ಚೇತನ ..... ಆಗು ನೀ ಅನಿಕೇತನ

ಮುಂಬೈ ಗೆ ಹೋಗದಿರು
ರೈಲನೆಂದು ಹತ್ತದಿರು
ಕುರ್ಲಾದಲ್ಲಿ ಇಳಿಯದಿರು
ನೀ ಜೀವಂತವಾಗಿರು ................

************** ಕೆ . ಎಸ್ . ನರಸಿಂಹಸ್ವಾಮಿ ******************
ರೈಲು ಬಂದು ನಿಮಿಷವಿಲ್ಲ ನೋಡಿರಣ್ಣ ಹೇಗಿದೆ
ಯಾವ ಬೋಗಿಯಲ್ಲಿ ಕೂಡ ಜಾಗ ಇಲ್ಲದಾಗಿದೆ
ಹತ್ತು ರೈಲು ಹೋಗಿದೆ ಮತ್ತೆ ನಾಲ್ಕು ಬಂದಿದೆ
ಯಾವ ರೈಲಿನಲ್ಲಿ ಕೂಡ ಜಾಗ ಇಲ್ಲದಾಗಿದೆ

ಜಾಗ ಇಲ್ಲ ನಿಲ್ಲಲಿಕ್ಕು
ಮಾರುತಿಹರು ಸೇಬು- ಚಿಕ್ಕು
ಸುಮ್ಮನಿರುವೆ ಕಾಲು ತುಳಿಯೇ
ದಾದರಲ್ಲಿ ಹೋಗಿ ಇಳಿಯೇ
ಪ್ರಾಣ ನನದು ಉಳಿದಿದೆ .... ರೈಲು ಪಯಣ ಹಾಸ್ಯವೇ ???

**************** ಕನ್ನಡ ಚಿತ್ರ ನಿರ್ದೇಶಕ *******************
ರೈಲು ಹೋಗಿ ಆದ ಮೇಲೆ ಟಿಕೆಟ್ ಒಂದು ದಕ್ಕಿದೆ
ಇಳಿವ ಜಾಗ ಬಂದ ಮೇಲೆ ಖಾಲಿ ಸೀಟು ಸಿಕ್ಕಿದೆ
ಕಿಸೆಯಲಿದ್ದ ಪರ್ಸು ಕಳೆದು ಹೋಗಿದೆ
ಮಾಡುವುದು ಏನು ತಿಳಿಯದಾಗಿದೆ

*********************************************************

ಹೀಗೆ ಒಟ್ಟಿನಲ್ಲಿ ಹೇಳುವದಾದರೆ ಮುಂಬೈ ನಗರದಲ್ಲಿ ಬದುಕುವವನು ಪ್ರಪಂಚದ ಯಾವ ಭಾಗದಲ್ಲೂ ಜೀವನ ಸಾಗಿಸಬಲ್ಲ.ತುಂಬಾ ವೇಗದ ಜೀವನ ಶೈಲಿಗೆ ಮುಂಬೈಯವರು ಒಗ್ಗಿ ಹೋಗಿದ್ದಾರೆ .ಇಲ್ಲಿ ಜನರ ಬಳಿ ಸಮಯವೊಂದು ಬಿಟ್ಟು ಇನ್ನೆಲ್ಲವೂಸಿಗುತ್ತದೆ . ಟ್ರೈನ್ ನಲ್ಲಿ ಬಂದು ಓದುವ,ತಿನ್ನುವ ,ಭಜನೆ ಮಾಡುವ ಎಲ್ಲ ರೀತಿಯ ಜನರೂ ಸಿಗುತ್ತಾರೆ. Pen friend, Classmate, Coligue ಇವು ಸ್ನೇಹಿತರಾಗುವ ಕೆಲವು ಬಗೆಯಾದರೆ ಮುಂಬಯಿಯಲ್ಲಿ Train friend ಎಂಬ ಹೊಸ ಮಾರ್ಗಚಾಲ್ತಿಯಲ್ಲಿದೆ. ಲೇಖನದ ಆರಂಭದಿಂದ ಜನ-ಜಂಗುಳಿ ಎನ್ನುತ್ತಿರುವ ನಾನು ಅದೇ ಜನಜಂಗುಳಿಯ ಒಂದು ಭಾಗವಾಗಿದ್ದೇನೆ . ನನ್ನಂತಹ 10 ತಲೆ ಸೇರಿಯೇ ಆ ಜನಜಂಗುಳಿ ಸೃಷ್ಟಿಯಾಗುತ್ತದೆ . ಮೃತ್ಯು ಮತ್ತು ಮುಂಬೈ ಗೆ ಹೋದವ ವಾಪಸ್ ಬರಲಾರ ಎಂಬಭಾವನೆಯಿಂದ ತಮ್ಮ ಮಗ/ಮಗಳಿಗೆ ಮುಂಬೈ ನಲ್ಲಿ job posting ಅಥವಾ college seat ಸಿಕ್ಕಿದರೆ ಕಳವಳಗೊಳ್ಳುವ ಪೋಷಕರಿಗೆ ನಾ ಹೇಳಬಯಸುವುದೆನೆಂದರೆ ಮುಂಬೈ ಗೆ ಬಂದು Basic ಶಿಸ್ತು -ಸಂಯಮ -ಜಾಗ್ರತೆಯಲ್ಲಿದ್ದರೆ ನಿಮ್ಮವ್ಯಕ್ತಿತ್ವಕ್ಕೆ ಸಾಣೆ ಹಿಡಿದಂತಾಗುತ್ತದೆ . ನೇತ್ಯಾತ್ಮಕ ವಿಚಾರಗಳಿಗೆ ಹೋಗದೆ ಇದ್ದಲ್ಲಿ ಜೀವನ ಸುಖಮಯವಾಗುತ್ತದೆ ಮತ್ತುಜೀವನದ ಎಲ್ಲಾ ಮುಖಗಳ ಪರಿಚಯವಾಗುತ್ತದೆ . ಹೀಗೆ ಮುಂಬೈ ಎಂಬ ಮಿಂಚು ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತದೆ . ಅದಕ್ಕೆ ಹೇಳುತ್ತೇನೆ "ಕಾಲು ಗಟ್ಟಿ ಇರುವಾಗ ಲೋ"ಕಾಲು" ಟ್ರೈನಿನಲ್ಲಿ ಚಲಿಸಿ ಮುಂಬೈ ದರ್ಶನ ಮಾಡಿರಿ.

====================================ವಿಕಟಕವಿ ==============

Comments

ಹೆಸರಿಗೆ ತಕ್ಕಂತೆ ಹಾಸ್ಯರಸಾಯನವೇ ಹರಿದಿದೆ.. ಮುಂಬೈ ನಗರಿಯ ರೈಲು ಜೀವನ ಶೈಲಿಯ ವಿವರಣೆ ಚೆನ್ನಾಗಿ ಮೂಡಿಬಂದಿದೆ. ಆದರೆ ಕುಮಾರವ್ಯಾಸನ ಷಟ್ಪದಿಯ ಛಂದಸ್ಸು ತಪ್ಪಿದೆ.
ನಿಮ್ಮ ಪ್ರೊಫೈಲಿನಲ್ಲಿ ಸ್ಕ್ರಾಪ್ ಬರೆಯಲು ಆಗುವುದಿಲ್ಲ :(
ಒಮ್ಮುಖ ಸಂಚಾರ ಮಾತ್ರ ಸಾಧ್ಯ .. ಇದು ತಪ್ಪಲ್ಲವೇ?

ಷಟ್ಪದಿಯ ಮೂರನೆಯ ಸಾಲು ತಪ್ಪೆಂಬುದು ನನ್ನ ಅನಿಸಿಕೆ.. ನನ್ನ ಅನಿಸಿಕೆಯೇ ತಪ್ಪಿರಬಹುದು...
Unknown said…
thumbha thannagidhe ..... hedharabeda... artha... its too cool buddy... :)
Ravi K S said…
ಹಹಹಾ, ಸೂಪರ್ ಆಗಿದೆ..
ಇಷ್ಟು ದಿನ ನನ್ನ ಆಫೀಸಿನ ಕನ್ನಡ ಫಾಂಟ್ ಇಲ್ಲದ ಲ್ಯಾಪ್ಟಾಪ್ ಬಳಸುತ್ತಿದ್ದೆ, ಹಾಗಾಗಿ ನಿನ್ನ ಬ್ಲಾಗ್ಸ್ ಓದಲಾಗಲಿಲ್ಲ..
Now I know what I missed..
ಕಲಿಯುಗದ ರಾಕ್ಷಸನ ಬುದ್ಧಿವಂತಿಕೆಗೆ ಹೆದರಿ ದೇವರು ವರ ಕೊಡುವುದನ್ನು ನಿಲ್ಲಿಸಿರಬೇಕು ಅನ್ನೋದು ತಿಳಿಯಿತು.. :)
ಕನ್ನಡದ ಕವಿಗಳ ಅನಿಸಿಕೆ ಬೊಂಬಾಟ್.. I really enjoyed it, so did my parents.. [ specially my dad cos hez been there in Mumbai for a couple of years ]
Good job, keep it going.. Looking forward for more, meanwhile let me finish reading the others..

-Ravi K S
raviks.livejournal.com
Anonymous said…
ಚೆನ್ನಾಗಿ ಬರೀತೀರಿ ಸುಮಂತ್..

ಆದ್ರೆ ಈ ಇಂಗ್ಲೀಷ್ ಪದಬಳಕೆ ಕಡಿಮೆ ಮಾಡಿದ್ರೆ ಚೆನ್ನಾಗಿರುತ್ತೇನೋ ಅಲ್ಲವೆ?
Anonymous said…
mumbai nalli ee vikata kaviya room mate aagi railinalli jotege sancharisida bhaagyavanta naane kanri... ibbaroo seri train nalli majaa madiruva prathiyondu vishayavannoo haasyamayavaagi bardiddane nodri... hats off to vikatakavi...
ondu vishaya matra ivanu barile illa.. yakandre ivane adaralli bakra...
santacruz ninda vashige barbekandre mooru train change madbeku.. santacruz to dadar, dadar to kurla then kurla to vashi. banda kedene innodu track hididu hodre adu kurlakke barutte.. ivanige aavaga yella kadeyinda dikku tappi hogutte... ivanu santacruz ninda horatu dadar nalli ilidu ulta direction nalli hogo train hididu CST ge hogo chances tumbaa irutte... prathi baari ivanige idu confusion... eega kooda western line nalli obbane hogodadre platform number ninda hididu yelli yaava kade ilibeku anno full guidance kottu kalistene... talupida mele ondu SMS barutte "Thanks Bro.. I reached finally" :-))))
Arun vasushetty said…
Nice one buddy....Keep it up...
ಇದು ಮಛಾ ನಿನ್ನ ಜೆ.ಎಸ್.ಎಸ್. ಮಹಾ ಪೀಠಕ್ಕೇ ತಕ್ಕ ಲೇಖನ. ಜಬರ್ದಸ್ತ. ಆ ಪದ್ಯಭಾಗ ಎಲ್ಲಾ ನನಗ ಜಾಸ್ತಿ ಆತು. ಉಳಕಿದ್ದೆಲ್ಲಾ ಮಸ್ತ ಅನಿಸ್ತು..

ಅಷ್ಟೇ.. ಅಷ್ಟೇ.. ಆಗ್ಹೋಗ್ಲಿ..

Popular posts from this blog

ಚಾಯ್ ಗರಮ್!!!!!!!!!!!!!!

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ "ಓ ತರು ಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು .??? .........ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು . ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು

ನಾನು --ನನ್ನೂರು --ನನ್ನ ಜನ

***********************************DISCLAIMER*********************** ನಾನು ಕುಂದಾಪುರದವನು .ಶಿವಮೊಗ್ಗದ ಪೂರ್ಣ ಪರಿಚಯ ಕೂಡ ನನಗಿಲ್ಲ . ಕೇವಲ 2-3 ಬಾರಿ ಶಿವಮೊಗ್ಗಕ್ಕೆ ಹೋಗಿರಬಹುದು . ಆದರೂ ಕಲ್ಪನೆಯೆಂಬ ಕುದುರೆಯ ಬೆನ್ನೇರಿ ನನಗೆ ಬಂದ ಒಂದು SMS ನ್ನು ಬಂಡವಾಳವಾಗಿರಿಸಿಕೊಂಡು ನನ್ನ ಜೀವನದ ಕೆಲವು ನೈಜ ಘಟನೆಗಳನ್ನು ಪೂರಕವಾಗಿ ಬಳಸಿಕೊಂಡು ನನ್ನ ಸ್ವಂತ ಹಾಸ್ಯದ ಒಗ್ಗರಣೆ ಹಾಕಿ ತಯಾರಿಸಿದ ದಿಢೀರ್ ತಿಂಡಿ ( 4 ಗಂಟೆಯಲ್ಲಿ ಇಡೀ ಲೇಖನ ತಯಾರಾಗಿತ್ತು ). ಈ ಕಥೆಯಲ್ಲಿ ಬರೆದ ಎಲ್ಲ ವ್ಯಕ್ತಿಗಳೂ ಎಲ್ಲ ವಿಚಾರಗಳೂ ಕೇವಲ ಕಾಲ್ಪನಿಕ .ಆ ಪಾತ್ರಗಳ ಸೃಷ್ಟಿ -ಸ್ಥಿತಿ -ಲಯ ಎಲ್ಲದಕ್ಕೂ ನಾನೇ ಸೂತ್ರಧಾರ . *************************************************************************** ಶಿವಮೊಗ್ಗ ನನ್ನ ಹೆಮ್ಮೆಯ ಊರು .. ನನ್ನ ಜನ .ರಾತ್ರಿ ಹೊತ್ತಿನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಥವಾ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವಾಗ ಯಾರೂ ನಿಮ್ಮನ್ನು ಎಬ್ಬಿಸಬೇಕಾದ ಅಗತ್ಯವಿಲ್ಲ . ಬೆಂಗಳೂರು ಬಂದೊಡನೆ ಬೆಂಗಳೂರಿನ Slum area ದ ದುರ್ನಾತದಿದಂದ ಎಚ್ಚರವಾದರೆ ನಮ್ಮ ಶಿವಮೊಗ್ಗ ಬಂದೊಡನೆ ನಿಸರ್ಗಮಾತೆಯ ಬೆಚ್ಚನೆಯ ಅಪ್ಪುಗೆಯಿಂದ ಎಚ್ಚರವಾಗುತ್ತದೆ. This is awesom man.. wonderful... hurrrrrrrrrrrahhhhhhhhh.......... GRS fantacy park ನ water pool ನಲ್ಲಿ ದಿನ

ಎರಡರ ಸ್ವಗತ

  ಇದೊಂದು ಅನಾದಿ ಕಾಲದಿಂದ ನಡೆದು ಬಂದ  ದೌರ್ಜನ್ಯ,ದಬ್ಬಾಳಿಕೆ,ಶೋಷಣೆಯ ಕಥೆ.ಕರುಣೆಯಿಲ್ಲದ ಈ ಸಮಾಜವು ಒಂದು ಪ್ರತಿಭೆಯನ್ನು ಹೇಗೆ ತನ್ನ ಕಪಿಮುಷ್ಠಿಯಲ್ಲಿ ಅದುಮಿ ಹಿಡಿದಿಟ್ಟುಕೊಳ್ಳಬಹುದು ಎಂಬುದಕ್ಕೆ ಜ್ವಲಂತ ಉದಾಹರಣೆ.   ನಾನು "ಎರಡು".ಒಂದು ಒಂದು ಸೇರಿ ಎರಡಾದ್ದರಿಂದ ನನ್ನನ್ನು ಏಕಾತ್ಮಜ ಎಂದೂ ಕರೆಯಬಹುದು.ವಸ್ತುಶಃ ನನ್ನಲ್ಲಿ ಯಾವ ಲೋಪದೋಷಗಳಿಲ್ಲದೆ ಹೋದರೂ ವಿನಾಕಾರಣ ನನ್ನನ್ನು ಹೀನಾಯವಾಗಿ ನೋಡಲಾಗುತ್ತದೆ.ಅಷ್ಟೇ ಅಲ್ಲದೆ ಸ್ವತಂತ್ರವಾಗಿ ಗೌರವಾನ್ವಿತರಾಗಿರುವ ಯಾರಾದರೂ ನನ್ನೊಡನೆ ಸಂಬಂಧ ಬೆಳೆಸಿಕೊಂಡರೆ ಅವರ ಗೌರವಕ್ಕೂ ಕಪ್ಪು ಮಸಿ ಬಳಿಯಲಾಗುತ್ತದೆ.   ಈಗ ನೀವೇ ನೋಡಿ  ಒಂದೇ  ಮಾತಿನಲ್ಲಿ ಹೇಳುವುದಾದರೆ,ಅಂಕೆ ಸಂಖ್ಯೆಗಳಲ್ಲಿ ೧ ಯಾವತ್ತೂ ರಾಜ.ಮೊದಲಿಗ,ಯಾರಿಂದಲೂ ಪೂರ್ಣವಾಗಿ ಭಾಗಿಸಲ್ಪಡದ ಆದರೆ  ಎಲ್ಲ ಸಂಖ್ಯೆಗಳನ್ನೂ ಭಾಗಿಸಬಲ್ಲ ತಾಕತ್ತು ಇದಕ್ಕಿದೆ.ಆದರೆ ಅರಸನ ಮುಂದಿರಬೇಡ,ಕತ್ತೆಯ ಹಿಂದಿರಬೇಡ ಎಂಬ ನಾಣ್ಣುಡಿಗೆ ವ್ಯತಿರಿಕ್ತವೆಂಬಂತೆ ನಾನು ಈ ರಾಜ ೧ ರ ಮುಂದೆ ,ಆ ಥರ್ಡ್ ಕ್ಲಾಸ್ ೩ ರ ಹಿಂದೆ ಕೂತಿದ್ದೇನೆ.ಈ ಜನ್ಮ ಕುಂಡಲಿಯ ದೋಷದಿಂದಲೇ ನಾನು ಯಾರ ಅಕ್ಕಪಕ್ಕ ಹೋಗಿ ಕೂತರೂ ಅವರ ವಾಸ್ತುಶಾಸ್ತ್ರ ಅಲ್ಲೋಲಕಲ್ಲೋಲವಾಗುತ್ತದೆ.  ಸಾಮಾಜಿಕ ಜೀವನದಲ್ಲೂ ಮೊದಲನೇ ಮದುವೆಗಿದ್ದಷ್ಟು ಮರ್ಯಾದೆ ಎರಡನೇಯದಕ್ಕಿಲ್ಲ.ಎದುರಿಗೆ ಎಲ್ಲರೂ ಸಂತೋಷದಿಂದಿದ್ದರೂ ಒಳಗೊಳಗೇ   ಕುಹಕವಾಡುತ್ತಾರೆ.ಅದೇ ಮದುವೆ ಮಂಟಪದಲ್ಲಿ ಯಾರಾದ್ರೂ