************************************************************ ಸುತ್ತ ಕವಿದಿರೆ ಅಂಧಕಾರವು ಮತ್ತೆ ಇರದಿರೆ ಜ್ಞಾನದೀಪವು ಬಿತ್ತಿದರು ಸುತ್ತೂರು ಸ್ವಾಮಿಗಳಿಲ್ಲಿ ಬೆಳಕನ್ನು || ಕತ್ತಲದು ಕಾಲ್ಕಿತ್ತು ಓಡಿತು ಮತ್ತೆ ಹರಿಯಿತು ಜ್ಞಾನದೀಪ ಸ ಮಸ್ತ ಲೋಕಕೆ ಬೆಳಕು ಬೀರಿದ ನಿಮಗೆ ವಂದಿಪೆವು || ಮಾನವನೋ ?? ಇವ ದೇವದೂತನೋ ?? ನಾನು ಅರಿಯೆನು ಇದನು ದಿಟದಿಂ ಜ್ಞಾನಸಾಗರ ಹರಿಸಿದೀತನು ದೇವನವತಾರಿ || ಜ್ಞಾನಶಿಖರದ ತುತ್ತತುದಿಯಲಿ ಮಿನುಗು ತಾರೆಯ ತೆರದಿ ಮಿನುಗುತ ಜನರ ಮನದೊಳು ಮನೆಯ ಮಾಡಿದೆ ನಮ್ಮ ಜೆ ಸಿ ಇ || ನುರಿತ ಅಧ್ಯಾಪಕರ ತಂಡವು ಸರುವಸಜ್ಜಿತ ಪ್ರಯೋಗಾಲಯ ಗರುವದಲಿ ನಾ ಹೇಳಿಕೊಳ್ಳುವೆ ಎಲ್ಲ ಇಲ್ಲಿಹುದು || ಗರಡಿ ಮನೆಯಿದು ಹೊರಗೆ ತರುವುದು ತರುಣ ಪ್ರತಿಭೆಗಳನ್ನು ವರುಷಕು ಧರಣಿಮಂಡಲದೆಲ್ಲೆಡೆಯಲಿಹರಿದರ ಆತ್ಮಜರು || ಜೇಸಿ ಮಹಿಮೆಯ ಹೇಳ ಹೋದರೆ ಮಾಸಗಳು ಹಲವಾರು ಸಾಲದು ಮೀಸೆ ತಿರುವುತ ಹೇಳುವೆನು ನಾ ನಾನು ಜೇಸಿಯವ|| ಹಾಸು ಹೊಕ್ಕಿದೆ ಇದರಲೆಲ್ಲವು ಪ್ಲೇಸುಮೆಂಟಾಗುವುದು ಖಚಿತವು ಏಸು ಜನುಮದ ಪುಣ್ಯವೋ ?? ನಾನಿಲ್ಲಿ ಬಂದಿರುವೆ || **********************************************---ವಿಕಟಕವಿ
ಇದರಲ್ಲಿ ಬರೆದ ಲೇಖನಗಳಲ್ಲಿ ಕೆಲವು ನನ್ನ ಕಲ್ಪನೆಯ ಕೂಸಾದರೆ ಕೆಲವು ಅನುಭವದ ಬರಹಗಳು . ಒಟ್ಟಿನಲ್ಲಿ ಪ್ರತಿ ಲೇಖನದ ಕೊನೆಯಲ್ಲಿ ಓದುಗರ ತುಟಿಯಂಚಿನಲ್ಲಿ ಸ್ವಲ್ಪ ಮುಗುಳ್ನಗೆ ಉಳಿದದ್ದೇ ಹೌದಾದರೆ ನನ್ನ ಪ್ರಯತ್ನ ಸಾರ್ಥಕ . ಅದೇ ನನಗೆ ಸಲ್ಲುವ ಪ್ರಶಸ್ತಿ. ========================ವಿಕಟಕವಿ ==================